Wednesday 1 September 2021

ನೋಡೊ ಮನ ಕೊಂಡಾಡೊ ಮರೆಯದಲೆ ಮನ ಚಿಂತ ankita bheemesha krishna

 ..



ನೋಡೊ ಮನ ಕೊಂಡಾಡೊ ಮರೆಯದಲೆ

ಮನ ಚಿಂತÀ ಲ್ರೇವ ಲೇಶನ ?

ಪಾಡುತಿರೆ ಕೃಷ್ಣಾತೀರದ್ವಾಸನ

ಮಾಡೊ ಮಹಾತ್ಮರೆಂದೆನಿಸೊ ದಾಸರ

ಜೋಡು ಪಾದಂಗಳಿಗೆ ವಂದನೆ ಪ


ಅಂಜನೆಯಲ್ಲುದಿಸಿ ಕೌಸಲ್ಯಾ-

ಕಂದನಂಘ್ರಿಕಮಲ ಸೇವೆಗೆ

ಅಂಗದ ಮೊದಲಾದ ಕಪಿಗಳ

ಸಂಗ ಬಿಟ್ವಾರಿಧಿಯನ್ಹಾರುತ

ಭಂಗ ಬಡಿಸುತ ರಾವಣನ ಪುರ

ಮಂಗಳಾರತಿ ಮಾಡಿ ಜಾನಕಿ

ಗುಂಗುರವನಿಟ್ಟೆರಗಿ ರಾಮರಿ

ಗಂಗನೆಯ ವಾರ್ತೆಗಳನರುಹಿದೆ1


ಕುಂತಿಸುತನಾಗ್ಯುದಿಸಿ ಬ್ಯಾಗನೆ

ಪಂಥಮಾಡುತ ಕೌರವರ ಕುಲ-

ಕಂತಕನು ನಾನೆಂದು ರಣದೊಳು

ನಿಂತು ಗದೆ ಹಾಕವರ ಸವರುತ

ಅಂತರಂಗದಿ ಹರಿಯ ದಿವ್ಯಾ-

ನಂತ ಗುಣಗಳ ತಿಳಿದು ದ್ರೌಪದೀ-

ಕಾಂತನೆನಿಸಿ ತಾ ಕರುಣನಿಧಿಗೇ-

ಕಾಂತ ಭಕ್ತನೆಂದಿನಿಸಿದಾತನು 2


ಮಧ್ಯಗೇಹಭಟ್ಟರಲ್ಲಿ ಮಗನಾ-

ಗಿದ್ದ ಸುಜನರಭೀಷ್ಟದಾಯಕ

ಗೆದ್ದು ಮಾಯಾವಾದಿಗಳನೆ ಪ್ರ

ಸಿದ್ಧಿನೆನಿಸಿದೆ ಸರ್ವಲೋಕದಿ

ಶುದ್ಧ ಜÁ್ಞನಾನಂದತೀರ್ಥರು

ಮಧ್ವಮತದ ಬಿರುದನೆತ್ತಿದ

ಪದ್ಮಪತಿ ಭೀಮೇಶಕೃಷ್ಣಗೆ

ಪರಮಭಕ್ತನೆಂದೆನಿಸಿದಾತನು 3

***


No comments:

Post a Comment