Wednesday 1 September 2021

ತೋರೆಲೆ ಪ್ರಾಣಕಾಂತನ ಮಾರ ಎನ್ನ ಸಂಹಾರ ಮಾಡಲು ದಂಡು ತಂದನೆ ankita vasudeva vittala

 ..

kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu 


ತೋರೆಲೆ ಪ್ರಾಣಕಾಂತನ ಮಾರ ಎನ್ನ ಸಂ

ಹಾರ ಮಾಡಲು ದಂಡು ತಂದನೆ ಪ


ಮಂದ ಮಾರುತಗಳು ಚಂದ್ರಕಿರಣಗಳು

ಮುಂದಾಗಿ ಬಂದೊದಗಿದವು 1


ಅಂತರಂಗದಿ ಮನೋಭ್ರಾಂತಿ ಬಿಡಿಸುವವ

ಸಂತನೀಗಲೆ ಬಂದಿರುವನೆ2


ಭೃಂಗಗಳೇ ರಣರಂಗದಿ ಕೂಗುವ

ಸಂಗತಿಗೆ ಬೆದರಿದೆನೆ 3


ಶುಕವೇರಿ ಧನುವಿನೋಳ್ ವಿಕಸಿತ ಸಮಬಾಣ

ಮುಖದೊಳು ಗುರಿಯನ್ನೆ ನೋಡುವ 4


ಆವಾಗಲೂ ವಾಸುದೇವವಿಠಲನ 

ಪಾದವೆ ಗತಿಯೆಂದಿರುವೆನೆ 5

***


No comments:

Post a Comment