Wednesday 1 September 2021

ರಂಗವಲಿದ ರಾಯಾ ಸಜ್ಜನ ಸಂಗ ಪಾಲಿಸಯ್ಯಾ ankita shyamasundara

..

ರಂಗವಲಿದ ರಾಯಾ ಸಜ್ಜನ ಸಂಗ ಪಾಲಿಸಯ್ಯಾ


ಮಂಗಳ ಚರಿತ ಕೃಪಾಂಗನೆ ಎನ್ನಂತ

ರಂಗದಿ ನಿಲಿಸುತ ತವಾಂಘ್ರಿ ಸೇವಕನೆಂದು ಅ.ಪ


ನತಜನ ಸುರಧೇನು ನೀನೆಂದು

ನುತಿಸಿ ವಂದಿಸುವೆನೋ

ರತಿಪತಿಪಿತ ನುತ ಕಥಾಮೃತ ಗ್ರಂಥದಿ

ಸತತ ಎನಗೆ ಮತಿ ಹಿತದಲಿ ಪ್ರೇರಿಸು 1


ಧನ್ಯನ ನೀಮಾಡೋ ಕರುಣದಿ

ಮನ್ನಿಸಿ ಕಾಪಾಡೋ

ಘನ್ನ ಮಹಿಮಕಿನ್ನು ನಿನ್ನ ಹೊರತು

ಇನ್ನಾರು ಕಾವರರಿಯೆ ಕಾಣೆ ಗುರೋ 2


ಮಂದಮತಿ ಬಿಡಿಸೋ ಈ

ಭವ ಬಂಧನ ಪರಿಹರಿಸೊ

ಇಂದಿರೆ ಪತಿ ಶಾಮಸುಂದರವಿಠಲ

ದ್ವಂದ್ವ ಪದದಿ ಮನಹೊಂದಿಸೊ ಪೋಷಿಸೊ 3

***

 

No comments:

Post a Comment