Wednesday 1 September 2021

ಶ್ರೀಧವನ ದೂತರಿಗೆ ಭೇದವುಂಟೆ ಕ್ರೋಧ ಜಯಿಸಿದ ನರಗೆ ಕಲಹಗಳುಂಟೆ ankita shyamasundara

 ..

ಶ್ರೀಧವನ ದೂತರಿಗೆ ಭೇದವುಂಟೆ

ಕ್ರೋಧ ಜಯಿಸಿದ ನರಗೆ ಕಲಹಗಳುಂಟೆ ಪ


ಗರುಡನಾಲಯದಿ ಉರಗಗಳ ಭಯವುಂಟೆ

ಕರಿಯ ಬೆದರಿಕೆಗೆ ಮೃಗವರಗೆ ಉಂಟೆ

ಹರಿದಿನದಲುಂಬುವಗೆ ದುರೀತ ತಪ್ಪುವದುಂಟೆ

ಗುರು ಕರುಣ ಪಡೆಯದವಗೆ ಪರಗತಿ ಉಂಟೆ 1


ಅದ್ರಿಗಳ ಭಯವುಂಟೆ ಸುರಪನ ವಜ್ರಕೆ

ಯುದ್ಧದ ಭಯವುಂಟೆ ವೀರನಿಗೆ

ಶುದ್ಧ ಮನದಲಿ ನಮ್ಮ ಮಧ್ವಮತ ಸೇರಿದವ

ಗುದ್ಧಾರವಲ್ಲದೆ ನರಕುಪದ್ರಗಳುಂಟೆ 2


ಕಂದರ್ಪ ನಂಜಿಕೆಯು ಶಿಂಧುರಾನನ ಕುಂಟೆ

ನಿಂದಿಸುವ ಜನಕೆ ಸುಜ್ಞಾನವುಂಟೆ

ಮಂದರೋದ್ಧಾರ ಶಾಮಸುಂದರನ ಪದಯುಗವ

ಪೊಂದಿರ್ಪ ಸುಗುಣರಿಗೆ ಆವ ಕುಂದುಗಳಯ್ಯ 3

***


No comments:

Post a Comment