Friday 6 August 2021

ಹರುಷ ಪಡಿಸಿದನೋ ಸರಸಿಜನಾಭ ankita ramavallabha vittala

..

Kruti by ಸರಸಾಬಾಯಿ Sarasabai 


ಹರುಷ ಪಡಿಸಿದನೋ ಸರಸಿಜನಾಭ ಪ.


ಉರುಗಾದ್ರಿವಾಸನೆ ಹರುಷಪಡಿಸಿದೆ

ಉಡುಪಿಯ ಕೃಷ್ಣನೇ ಅ.ಪ.


ಏನು ಕಾರಣವನ್ನು ತೋರಿದ್ಪೊ ಶ್ರೀನಿವಾಸನೆ

ನಿನ್ನ ಮಹಿಮೆಯ ಪೊಗಳಲು ನಾ ಶಕ್ತಳಲ್ಲಾ ಭಕ್ತವತ್ಸಲಾ 1


ನಿನ್ನ ನೋಡಿ ಧನ್ಯಳಾದೆನೊ ಸನ್ನುತಾಂಗನೇ

ಎನ್ನ ಮೇಲೆ ಕರುಣವ ತೋರಿ ನಿನ್ನ ದರುಶನವಿತ್ಯೋ ದೇವಾ 2


ಏನು ಬೇಡಲಿ ನಿನ್ನ ಅಧೀನಳೋ ನಾನು ನೀನು

ಮಾಡಿಸೊ ಧ್ವಂದ್ವಕಾರ್ಯ

ನಿನ್ನದೆಂಬ ಸೊಲ್ಲ ಪಾಲಿಸು 3


ನಿನ್ನ ನಾಮದ ಸ್ಮರಣೆಯನ್ನು ಮರಿಯದೆ ನುಡಿಸೆನೆಗೆ

ನಿನ್ನ ದಾಸರ ದಾಸರ ಸಂಗಕೊಟ್ಟು ಚರಣವ ತೋರೋ

ಕರುಣಾನಿಧಿಯೇ4


ನಿನ್ನ ಪಾದದ ಧ್ಯಾನವು ನಿರಂತರವಿರಲೆನೆಗೆ

ನಿನ್ನ ಕಡೆಯಾಕಣ್ಣಲಿ ನೋಡೊ ರಮಾವಲ್ಲಭವಿಠಲನೆ ಕರುಣದಿ5

*****


No comments:

Post a Comment