Thursday 5 August 2021

ಶರಣು ಶರಣು ಶರಣು ಭೂವರಾಹ ಮೂರುತಿ ankita prasannashreenivasa

 ..

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

ಶ್ರೀ ವರಾಹ ನರಹರಿ ಧನ್ವಂತರಿ


ಶರಣು ಶರಣು ಶರಣು ಭೂವರಾಹ ಮೂರುತಿ

ಶರಣು ಶರಣು ಧನ್ವಂತರಿ

ಶರಣು ಭಾರತೀರಮಣವಂದ್ಯನೆ ಶರಣು ನೃಹರೆ ಕೃಪಾನಿಧೆ ಪ


ವಾರಿಧಿಯಿಂದ ಕ್ರೂರ ಅಸುರನ

ಮುರಿದು ಧರೆಯನುದ್ಧರಿಸಿದೆ

ಘೋರ ವ್ಯಾಧಿಸಮುದ್ರದಿಂದು -

ದ್ಧರಿಸೊ ಎನ್ನ ಕೃಪಾನಿಧೆ 1

ಸುರರ ಪೊರೆಯಲು ಅಮೃತ ತಂದೆ

ಪರಮ ಪೂರುಷ ಭೇಷಜ

ಶಿರ ಉರಾದಿ ಸರ್ವ ಅಂಗದಿ

ಸುರಿದು ಅಮೃತವ ಪೊರೆ ಎನ್ನ 2

ಮೃತ್ಯು ಮೃತ್ಯುವೆ ದಯದಿ ಎನ್ನಪ -

ಮೃತ್ಯು ತರಿದು ಪಾಲಿಸೊ

ನಿತ್ಯ ಸುಖಮಯ ವಿಧಿಯ ತಾತ

ಪ್ರಸನ್ನ ಶ್ರೀನಿವಾಸನೆ 3

***


No comments:

Post a Comment