Thursday 5 August 2021

ಬಂದೆ ರಂಗಯ್ಯ ನಿನ್ನಬಳಿಗೆ ನೊಂದು ಮನ ಬೇಡುವೆ ankita prananatha vittala

 ..

kruti by bagepalli shesha dasaru ಬಾಗೇಪಲ್ಲಿ ಶೇಷದಾಸರು


ಬಂದೆ ರಂಗಯ್ಯ ನಿನ್ನಬಳಿಗೆ ಪ


ನೊಂದು ಮನ ಬೇಡುವೆ ನಿನ್ನ ಶ್ರೀಪಾದಂಗಳಿಗೆ ಅ.ಪ 


Àಕ್ತಜನರು ಬಂದು ಕಾಡುವರೆಂತೆಂದು

ಯುಕ್ತಿಯಿಂದಿಲ್ಲಿ ಬಂದು

ಸಪ್ತಬೆಟ್ಟದ ಮಧ್ಯದೊಳ್ ವಿ

ರಕ್ತಿಯ ಕೈಕೊಂಡು ನಿಂತಿರೆ

ಮುಕ್ತಿದಾಯಕ ನಿನ್ನ ನಂಬಿದ

ಭಕ್ತರ ಪಾಡೇನು ಪೇಳೆಲೊ 1


ಶ್ವೇತಾದ್ರಿಯಲಿ ಭಕ್ತವ್ರಾತ ಪಾಲಿಸಿದಂಥಾ

ಪ್ರೀತಿವಚನ ಕೇಳಿ

ಭೂತನಾಥನ ಭಯವ ಬಿಡಿಸಿ

ಖ್ಯಾತಿಯನು ಪಡೆದಂಥ ವಾರ್ತೆಯ

ರೀತಿಯನು ನಾ ಕೇಳಿ ಬಂದೆನೊ

ಮಾತುಳಾಂತಕ ಮಾರಮಣ ಹರೇ 2


ದೀನವತ್ಸಲ ಶ್ರೀರಂಗ ನಿನ್ನಯ ಪಾದ

ಧ್ಯಾನ ಮಾಡುವರ ಸಂಗವಿತ್ತು

ಮಾನನಿಧಿ ಪ್ರಾಣನಾಥ ವಿಠಲನೆ

ಸಾನುರಾಗದಿ ಸಲಹೊ ಎನ್ನನು

ದೀನನಾದ ಗಜೇಂದ್ರನ ಬಹು

ಮಾನದಿಂದಲಿ ಕಾಯ್ದ ಪ್ರಭುವೆಂದು ಬಂದೇ 3

***


No comments:

Post a Comment