Thursday 5 August 2021

ಮಂಗಳಂ ನರಹರಿಗೆ ಜಯ ಜಯ ಮಂಗಳ ಮುರಹರಗೆ ankita kamalanabha vittala

 ..

kruti by Nidaguruki Jeevubai


ಮಂಗಳಂ ನರಹರಿಗೆ ಜಯ ಜಯ

ಮಂಗಳ ಮುರಹರಗೆ ಪ

ಮಂಗಳ ಮದನಗೋಪಾಲ ಶ್ರೀಕೃಷ್ಣಗೆ

ಮಂಗಳ ಮಾಧವಗೆ ಅ.ಪ

ವಸುದೇವ ಸುತನಾಗಿ ಗೋಕುಲದೊಳು

ಮೊಸರು ಬೆಣ್ಣೆಯ ಕದ್ದು

ಶಶಿಮುಖಿಯರ ಕೂಡಿ ನಿಶಿರಾತ್ರಿಯಲಿ

ರಾಸ ಕ್ರೀಡೆಯಾಡಿದ ಹರಿಗೆ 1

ನಳಿನಮುಖಿಯರೆಲ್ಲ ನೀರೊಳಗಾಡಿ

ಬಳಲಿ ಮೇಲಕೆ ಬರಲು

ಲಲನೆಯರ ಕಂಡು ಪರಿಹಾಸ್ಯ ಮಾಡಿದ

ಚೆಲುವ ಗೋಪಾಲಕೃಷ್ಣಗೆ2

ಬೆಟ್ಟವ ಬೆರಳಿನಲಿ ಎತ್ತಿದ

ಭಕ್ತವತ್ಸಲ ಹರಿಗೆ

ಮಿತ್ರೆಯರಿಗೆ ಮೊಸರು ಬುತ್ತಿಯ

ಭುಕ್ತಿಯನೆವದಲಿ ಮುಕ್ತಿ ತೋರಿದ ದೊರೆಗೆ 3


ಪುಟ್ಟಬಾಲಕನಾಗಿ ಗೋವ್ಗಳನೆಲ್ಲ

ಅಟ್ಟಿಯ ಮನೆಗೆ ಪೋಗಿ

ದುಷ್ಟ ಕಾಳಿಂಗನ ಮೆಟ್ಟಿ ತುಳಿದ ಹರಿಗೆ

ರತ್ನದಾರತಿ ಎತ್ತಿರೆ 4

ಕೊಂದು ಕಂಸನÀ ಬೇಗ ಮಧುರೆಲಿ ನಿಂತ

ಮಹಾನುಭಾವಗೆ

ತಂದೆ ಶ್ರೀ ಕಮಲನಾಭವಿಠ್ಠಲಗೆ

ಕುಂದಣದಾರತಿಯ 5

***


No comments:

Post a Comment