Thursday 5 August 2021

ಚಿಂತೆಯಾತಕೆ ಮನವೆ ಗುರುಗಳ ಪಾದ ಚಿಂತನೆಯನು ಮಾಡದೆ ankita kamalanabha vittala

 ..

kruti by Nidaguruki Jeevubai

ಚಿಂತೆಯಾತಕೆ ಮನವೆ ಗುರುಗಳ ಪಾದ

ಚಿಂತನೆಯನು ಮಾಡದೆ ಪ


ಸಂತತ ಬಿಡದಲೆ ಚಿಂತನೆ ಮಾಳ್ಪರ

ಅಂತರಂಗವ ತಿಳಿವರು ಗುರುವರರು ಅ.ಪ


ಉದಯ ಕಾಲದಲಿವರ ಧ್ಯಾನವ ಮಾಡೆ

ಮದಗರ್ವ ಪರಿಹರವು

ಮುದದಿಂದ ಮೂರು ವೇಳೆಗಳಲ್ಲಿ ಸ್ಮರಿಸಲು

ಹೃದಯ ತಾಪವ ಕಳೆವರು ಗುರುವರರು1


ದೇಶದೇಶವ ತಿರುಗಿ ತನುಮನಗಳ

ಬೇಸರಗೊಳಿಸಲೇಕೆ

ಪೋಷಿಪ ಗುರುಗಳಪಾದ ನಂಬಿದ ಮೇಲೆ

ವಾಸುದೇವನೆ ನಲಿವ ಮುಂದೊಲಿವ 2


ವೇದವಾದಿಗಳೆಲ್ಲರೂ ವಾದವ ಮಾಡಿ

ಮಾಧವನನು ಕಾಣಿರೊ

ಮೋದತೀರ್ಥರ ಮತಬೋಧನೆ ಮಾಡುವ

ಸಾಧು ಗುರುಗಳನೆ ಕೂಡು ಸಂಶಯಬಿಡು3


ಚಿತ್ತದಿ ಸ್ಮರಿಸುವರು ಹರಿ ಮಹಿಮೆಯ

ಭಕ್ತಿಲಿ ನಲಿಯುವರು

ಚಿತ್ರಗಾಯನ ನೃತ್ಯಗಾನಗಳಿಂ ಪುರು-

ಷೋತ್ತಮನನೊಲಿಸುವರು ಹರುಷಿತರು4


ಕತ್ತಲೆ ಮನೆಗಳಲ್ಲಿ ಅಡಗಿಹ ವಸ್ತು

ಲಕ್ಷಪರಿಮಿತಿ ಇದ್ದರು

ಹಸ್ತದಿ ಜ್ಯೋತಿಯನೆತ್ತಿ ತೋರುವ ಪರಿ

ಭಕ್ತರ ಸಲಹುವರು ಗುರುವರರು 5


ಸರಸೀಜಾಕ್ಷನ ನಾಮವು ಹಗಲಿರುಳು

ಬಿಡದೆ ಧ್ಯಾನಿಸುತಿರ್ಪರು

ಸಿರಿನಾರಾಯಣನನ್ನು ಸ್ಮರಿಸುತ್ತ ಮನದೊಳು

ಪರಮಸಂಭ್ರಮ ಪಡುವರು ಗುರುವರರು 6


ಕರುಣದಿ ಸಲಹುವರು ಶಿಷ್ಯರ ಮನ

ವರಿತು ವರಗಳನೀವರು

ವರ ಕಮಲನಾಭವಿಠ್ಠಲನ ಧ್ಯಾನಿಪಉರಗಾದ್ರಿವಾಸ ವಿಠ್ಠಲದಾಸರನೆ ನಂಬು7

***


No comments:

Post a Comment