Monday 2 August 2021

ನೋಡಿ ದಣಿದವೆನ್ನ ಕಂಗಳು ಉಡುಪಿ ankita kalimardhanakrishna ashta mutt yati stutih

ನೋಡಿ ದಣಿದವೆನ್ನ ಕಂಗಳು ಉಡುಪಿಯಲ್ಲಿರುವ

ಅಷ್ಟಮಠದ ಶ್ರೀಪಾದಂಗಳವರ ಪ.


ಸುಧಿಂದ್ರತೀರ್ಥ ಗುರುವರ್ಯರು

ಬಂದ ಭಕ್ತರಿಗೆ ಕರುಣಾಮೃತ ಮಳೆಗರೆವರು

ಶ್ರೀಹರಿಯ ತೋರುವರು

ನೇಮದಿಂದಲಿ ಇವರ ನಾಮ ನೆನೆದರೆ

ಸ್ವಾಮಿ ಶ್ರೀರಾಮನು ಪ್ರಸನ್ನನಾಗುವನು 1


ವಿಭುದಪ್ರಿಯತೀರ್ಥ ಗುರುವರ್ಯರು

ಬಂದಾ ದುರ್ಜನರ ಮನವನು ಜಯಿಸುವರು

ಮಹಾನುಭಾವರು ತರ್ಕನ್ಯಾಯ ವೇದಾಂತ ನಿಪುಣರು

ಮಹಾಗುಣವಂತರು 2


ವಿದ್ಯಾಪುಣ್ಯತೀರ್ಥ ಶ್ರೀಪಾದಂಗಳವರು

ಬಂದ ಸೇವಕರಿಗೆ ಬ್ರಹ್ಮವಿದ್ಯಾ ಪಾಲಿಸುವರು

ರ್ದುಜನರ ದುರ್ಬುದ್ಧಿ ಒದ್ದಿ ಕೆಡಹುವವರು 3


ವಿಶ್ವೇಂದ್ರತೀರ್ಥರು ಈ ಗುರುವರ್ಯರು

ಸೋದೆಯಲ್ಲಿರುವರು ಶ್ರೀ ಗುರು

ವಾದಿರಾಜರ ಪೂಜಿಸುವರು

ಜಗಕೆ ಸುಖವ ಸುರಿಸುವರು ಭೂತಪ್ರೇತಪಿಶಾಚಾದಿ

ಸರ್ವರೋಗಂಗಳ ದೂರದಿ

ಮಾಡುವರು ಭಕ್ತರಘ ಕಡಿವರು4


ವಿದ್ಯಾಸಮುದ್ರ ಶ್ರೀಪಾದಂಗಳವರು

ಇವರು ಭವಸಮುದ್ರವ ನೀಗಿಸುವರು

ಶಿಷ್ಯರಿಗ್ಹರುಷ ಪಡಿಸುವುದು

ಆನಂದದಿಂದಲ್ಲಿ ಹೃನ್ಮಂದಿರದಲಿ ಇಂದಿರೇಶನ ನೋಡುವರು 5


ರಘುಮಾನ್ವತೀರ್ಥ ಗುರುವರ್ಯರು ಲೋಕಮಾನ್ಯರು

ಭಕ್ತರಿಗತಿಪ್ರಿಯರು ಮಹಾನುಭಾವರು

ಅನ್ನದಾನದಲಿ ದೈನ್ಯರು ಆನಂದ ಭರಿತರು ಸುರರಿವರು 6


ಲಕ್ಷ್ಮೀಂದ್ರತೀರ್ಥ ಶ್ರೀಗಳವರು

ಇವರು ತಮ್ಮ ತುಷೆಯೊಳಗಿಟ್ಟುಕೊಂಡು

ರಕ್ಷಿಸುವರು ಲಕ್ಷ್ಮೀರಮಣನ್ನ ಪಾದಾ

ಅಪೇಕ್ಷೆಯ ಮಾಡುಸುವರು ಹರಿಯ ಭಜಿಸುವರು 7


ವಿಶ್ವಮಾನ್ಯತೀರ್ಥ ಈ ಗುರುವರ್ಯರು

ಬಂದ ಭೂಸುರರಿಂದ ಅನುವಾದ ಮಾಡುವರು

ನೋಡುವರಿಗಾನಂದ ಪಡಿಸುವರು

ಸುe್ಞÁನ ಯತಿವರ್ಯರು 8


ಅಷ್ಟಮಠದ ಯತಿಗಳ ಮಹಿಮೆಯನ್ನು

ನಿಷ್ಠೆಯಿಂದಲಿ ಪೇಳುವನು ಅವನು ಸುರನು

ಇವರ ದೋಷಿ ಎಂದವರನೇ ನರಕಾಧಿ ಬಾಧಿಸುವುದು

ಸಾಮಾನ್ಯವಲ್ಲವೊ ಇವರು ಕಾಳೀಮರ್ಧನ

ಕೃಷ್ಣನ ಪೂಜಿಸುವರು 9

****


No comments:

Post a Comment