Wednesday 1 September 2021

ಇಂದು ನೋಡಿದೆ ನಂದಕರ ಯೋಗೀಂದ್ರ ವಂದಿತ ಚರಣನಾ ankita gurujagannatha vittala

 ..

ಇಂದು ನೋಡಿದೆ ನಂದಕರ ಯೋ-

ಗೀಂದ್ರ ವಂದಿತ ಚರಣನಾ ಪ


ವಂದನೀಯ ಶುಭೋರು ಗುಣ ಗಣ

ಸಾಂದ್ರಗುರುರಾಘವೇಂದ್ರನಾ ಅ.ಪ


ವೇದತತಿ ಶತಮೋದಗಿತ್ತ(ನ) - ಆದಿ ಮತ್ಸ್ಯನ ತೆರದಲಿ

ವೇದವಾದವ ಶೋಧಮಾಡಿ ಮೇದಿನೀಸುರಗಿತ್ತನಾ 1


ಕಮಠರೂಪದಲಮರ - ತತಿಗೆ

ಅಮೃತ ನೀಡಿದ - ತೆರದಲಿ

ಸ್ವಮತ ಸುಧೆಯನು ಪ್ರಮಿತಗಿತ್ತಿಹ

ಅಮಿತ ಸುಮಹಾಮಹಿಮನ 2


ಧರಣಿಮಂಡಲ ಧುರುದಿ ದಾಡಿಲಿ

ಧರಿಸಿ ತಂದನ ತೆರದಲಿ

ಧರಣಿ - ಜನರಿಗೆ ಧರೆಯ ಮೊದಲಾದ

ಪರಮಭೀಷ್ಟೆಯನಿತ್ತು ಪೊರೆವನ 3


ದುರುಳದಿತಿಜನ ತರಿದು ನಿಜಪದÀ -

ತರುಳಪಾಲನ ತೆರದಲಿ

ದುರಿತರಾಶಿಯ ತರಿದು ತನ್ನಯ ಶರಣಜನಪರಿಪಾಲನ 4


ಬಲಿಯ ಯಙ್ಞದÀ ಸ್ಥಳದಿ ಭೂಮಿಯ ನಳೆದರೂಪನÀತೆರದಲಿ

ಖಳರ ವಂಚಕÀ ತನ್ನ ತಿಳಿವಗೆ ಸುಲಭದಿಂದಲಿ ಒಲಿವನ 5


ದುಷ್ಟಕ್ಷಿತ್ರಿಯರಷ್ಟು ಕುಲವನು ಸುಟ್ಟು ಬಿಟ್ಟನತೆರದಲಿ

ಕೆಟ್ಟರೋಗವು ಶ್ರೇಷ್ಠಭೂತದ ಅಟ್ಟುಳಿಯನೆ ಕಳೆವನ 6


ಜನಕನಾಜ್ಞದಿ ವನವ ಚರಿಸಿದ

ಇನಕುಲೇಶನ ತೆರದಲಿ

ಜನರಿಗೀಪ್ಸಿತ ತನಯ ಮೊದಲಾದ

ಮನದಪೇಕ್ಷೆಯ ನೀಡೊನ 7


ಕನಲಿ ದ್ರೌಪದಿ ನೆನೆಸಲಾಕೆಯ

ಕ್ಷಣಕೆ ಬಂದನ ತೆರದಲಿ

ಮನದಿ ತನ್ನನು ನೆನೆವ ಜನರನು

ಜನುಮ ಜನುಮದಿ ಪೊರೆವನ 8


ಮುದ್ದು ಸತಿಯರ ಬುದ್ಧಿ ಕೆಡಿಸಿ(ದ)

ಗೆದ್ದು - ಬಂದನ ತೆರದಲಿ

ಮದ್ದು ಮತಿಯನು ತಿದ್ದಿ ಭಕುತಗೆ

ಶುದ್ಧ ಜ್ಞಾನವ ನೀಡೊನ 9


ಕಲಹ ಕಂಟಕ ಕಲಿಯವೈರಿ

ಕಲಿಕಿರೂಪನ ತೆರದಲಿ

ಹುಳುಕು ಮನವನು ಕಳೆದು ತನ್ನಲಿ

ಹೊಳೆವ ಮನವನು ಕೊಡುವನಾ 10


ನೀತ ಗುರುಜಗನ್ನಾಥ ವಿಠಲ ಭೂತಳಕ್ಕಧಿನಾಥನು

ಆತನಂತ್ಯತಿನಾಥ ಜಗಕೆ ಪ್ರೀತಿಶುಭಫಲದಾತನ 11

***


No comments:

Post a Comment