Monday 2 August 2021

ಪಾಂಡುರಂಗನೆ ಪಾಲಿಸೆನ್ನನು ಬೇಡಿಕೊಂಬೆನು ವರವ ನೀಡಯ್ಯ ನೀನು ankita gopalakrishna vittala

ಪಾಂಡುರಂಗನೆ ಪಾಲಿಸೆನ್ನನು

ಬೇಡಿಕೊಂಬೆನು ವರವ ನೀಡಯ್ಯ ನೀನು ಪ.


ಸಿರಿವಿರಂಚ್ಯಾದಿ ಸುರರು ನಿರುತ ನಿನ್ನನು ಬಿಡರು

ಕರಗಳನೆ ಜೋಡಿಸುವರು ವರಗಳನೆ ನೀಡೆಂಬರು

ಭರದಿ ಹದಿನಾಲ್ಕು ಜಗದ ಉದರದಿ ಇಂಬಿಟ್ಟ ಭೋಜ

ಸಿರಿಸ್ತುತಿಗೆ ಸಿಲ್ಕ ರಾಜವರ ರವಿಶತರ ತೇಜ

ಭೀಮರಥಿಯ ತೀರದಲ್ಲಿ ಮಹಾನಂದ ಭರಿತ ನಂದನ ಕಂದ

ಸ್ವಾಮಿ ನಂಬಿದೆ ಅಭಯವ ಕೊಟ್ಟು ವರಗಳನನಿಟ್ಟು

ಪೂರ್ಣಸುಖವನ್ನೆ ಕೊಟ್ಟು

ನಾಮ ಧ್ಯಾನಗಳ ಅನುದಿನ ಮಾಡುವ e್ಞÁನ ಕೊಟ್ಟನಂತಾಸನ

ಧಾಮ ಶ್ವೇತದ್ವೀಪ ವೈಕುಂಠದಲ್ಲೆ ನಿನ ಭಂಟರೊಳು

ಸೇರಿಸೊ ವೈಕುಂಠ 1

ಬಂದು ಕಂಡೆನು ನಿನ್ನ ಇಂದು ನಾ ಮಾಡ್ದ ಪುಣ್ಯ

ಬಂದು ಕೈಸೇರಿತಿನ್ನ ಸುಂದರಾಂಗನೆ ಎನ್ನ

ಬಂಧ ಪರಿಹರಿಸಿ ಬೇಗದಿಂದ ಉದ್ಧರಿಸೋ ಈಗ

ನಂದನ ಕಂದ ರಂಗ ಬಂಧುವೇ ಪಾಂಡುರಂಗ

ನೀರೊಳು ಮಚ್ಛಾವತಾರನೆ ಕಮಠ ರೂಪನೆ

ವರಹ ವೇಷಧಾರಕನೆ

ನಾರಸಿಂಹನೆ ದೈತ್ಯಸಂಹಾರಿ ಗಂಗಾಪದಧಾರಿ ಕ್ಷತ್ರಿಯ ಕುಲವೈರಿ

ಶ್ರೀರಾಮ ಲಂಕಾಧೀಶನ ಕೊಂದಿ ಮಧುರಿಗೆ ಬಂದಿ

ಬೌದ್ಧನೆನಿಸುತ್ತ ನಿಂದಿ

ಶೂರ ಕಲ್ಕಿಯೆ ನಿನ್ನ ಮಹಿಮೆಯ

ಪೊಗಳಲು ಜೀಯಾ ಶೇಷಗೊಶವಲ್ಲವಯ್ಯಾ 2

ಪುಟ್ಟ ಧ್ರುವರಾಯಗಿನ್ನ ಕೊಟ್ಟೆ ಸ್ಥಿರ ಪಟ್ಟವನ್ನ

ಎಷ್ಟು ವರ್ಣಿಸಲಿ ನಿನ್ನ ಇಷ್ಟ ಫಲದಾಯಕನ್ನ

ಇಟ್ಟಿಗೆ ಪೀಠನಿಲಯ ದಿಟ್ಟ ಶ್ರೀ ಕೃಷ್ಣರಾಯ

ಕಷ್ಟಪರಿಹರಿಸು ಗೋಪಾಲಕೃಷ್ಣವಿಠ್ಠಲ ಜೀಯ

ನಿಲ್ಲಿಸೆನ್ನಯ ಮನ ನಿನ್ನೊಳು ಭಕ್ತಿ ಗುಣಗಳು

ಪಾಡಲಿ ಹಗಲಿರುಳು

ಒಲ್ಲೆ ನೀನೊಲ್ಲದ ಸುದ್ದಿಯ ದುರ್ಬುದ್ಧಿಯ

ಕೊಡದಿರು ವಿಠ್ಠಲಯ್ಯ

ಮಲ್ಲಮರ್ಧನ ಲಕುಮಿಯ ಕಾಂತರಂಗ

ಬಲವಂತÀ ರಕ್ಷಿಸೆನ್ನ ವಸಂತ

ವಲ್ಲಭ ಪುಂಡಲೀಕನ ವರದ ದಾಮೋದರ

ಶ್ರೀದ ಕೈಯ ಮುಗಿವೆ ಸರ್ವದಾ 3

****


No comments:

Post a Comment