Wednesday 1 September 2021

ಯಾದವ ನಿನ್ನೆಲ್ಲ ವರ್ಮಕರ್ಮಂಗಳ ಸಾಧಿಸಿ ankita bheemesha krishna

 ..

ಯಾದವ ನಿನ್ನೆಲ್ಲ ವರ್ಮಕರ್ಮಂಗಳ

ಸಾಧಿಸಿ ಜನರ ಮುಂದ್ಹೇಳಲ್ಯಾ ರಂಗ

ಸಾಧಿಸಿ ಜನರ ಮುಂದ್ಹೇಳಲ್ಯಾ

ಭೇದವಿಲ್ಲದೆ ಕರುಣವನಿಟ್ಟು ಮರೆ-

ಯದೆ ನೀ ದಯ ಸುಮ್ಮನೆ ಮಾಡುವ್ಯಾ ಪ


ಮಡುವಿನೊಳಗೆ ಪೊಕ್ಕು ಬಿಡುತ ನೀ ಕಣ್ಣ

ದುಡುಕು ಮಾಡಿದ್ದೆಲ್ಲ ಹೇಳಲ್ಯಾ ರಂಗ

ದುಡುಕು ಮಾಡಿದ್ದೆಲ್ಲ ಹೇಳಲ್ಯಾ

ಮಡುಹಿದ ಸೋಮಕಾಸುರನೆಂಬ ಸುದ್ದಿಯ

ಬಿಡದೆ ಜನರ ಮುಂದ್ಹೇಳಲ್ಯಾ 1


ಕಡÀಗೋಲನ್ಹೊತ್ತು ಮಂಡಿಯಂತೆ (?) ಕೈಕಾಲು ಮು-

ದುಡಿಕೊಂಡದ್ದೆಲ್ಲ ಹೇಳಲ್ಯಾ ರಂಗ ಮು-

ದುಡಿಕೊಂಡದ್ದೆಲ್ಲ ಹೇಳಲ್ಯಾ

ಹಿಡಿದು ಸುಧೆಯ ವಂಚನಿಂದ ಸುರರಿಗೆ ನೀ-

ಬಡಿಸಿದ್ದು ಭಂಗ ನಾ ಹೇಳಲ್ಯಾ 2


ಊರುಮನೆಗಳಿಲ್ಲ ನೀ ಗಿರಿಗಂಹ್ವರ

ಸೇರಿಕೊಂಡದ್ದೆಲ್ಲ ಹೇಳಲ್ಯಾ ರಂಗ

ಸೇರಿಕೊಂಡದ್ದೆಲ್ಲ ಹೇಳಲ್ಯಾ

ಕೋರೆ ಹಲ್ಲುಗಳಿಂದ ಬೇರನು ಸವಿದುಂಡ

ದಾರಿದ್ರ್ಯವೆಲ್ಲ ನಾ ಹೇಳಲ್ಯಾ3


ಮುಖವ ನೋಡಲು ಮೃಗದಂತೆ ಬಾಯ್‍ತೆರೆದ

ನಿನ್ವಿಪರೀತ ಕೋಪಂಗಳ್ಹೇಳಲ್ಯಾ ರಂಗ

ನಿನ್ವಿಪರೀತ ಕೋಪಂಗಳ್ಹೇಳಲ್ಯಾ

ನಖದಿಂದ ಹಿರಣ್ಯಕನ ಕರುಳ ನೀ ಬಗೆದಂಥ

ಸಕಲ ವ್ಯಾಪಾರ ನಾ ಹೇಳಲ್ಯಾ 4


ಮೂರು ಪಾದ ಭೂಮಿ ಮುದ್ದು ರೂಪಗಳಿಂದ

ಬೇಡಿಕೊಂಡದ್ದೆಲ್ಲ ಹೇಳಲ್ಯಾ ರಂಗ

ಬೇಡಿಕೊಂಡದ್ದೆಲ್ಲ ಹೇಳಲ್ಯಾ

ಮೂರು ಲೋಕವು ಸಾಲದಂತೆ ನೀ ಬೆಳೆದ

ಅನ್ಯಾಯ ಮಾಯಗಳ ನಾ ಹೇಳಲ್ಯಾ 5


ಜಮದಗ್ನಿಯಲ್ಹುಟ್ಟಿ ಜನಭಯಕಂಜದೆ

ಜನನಿ ಹತವ ಮಾಡಿದ್ಹೇಳಲ್ಯಾ ರಂಗ

ಜನನಿ ಹತವ ಮಾಡಿದ್ಹೇಳಲ್ಯಾ

ಅನುಮಾನವಿಲ್ಲದೀತನು ನಿಮ್ಮ ಕುಲಕೆ

ಛೇದಕನೆಂದು ಕ್ಷತ್ರೇರಿಗ್ಹೇಳಲ್ಯಾ 6


ದೊರೆತನಾಳುವ ತಂದೆ ಪುರವಬಿಟ್ಹೊರಗ್ಹಾಕೆ

ವನವನತಿರುಗಿದ್ದು ಹೇಳಲ್ಯಾ ರಂಗ

ವನವನತಿರುಗಿದ್ದು ಹೇಳಲ್ಯಾ

ಸಿರಿಯನಗಲಿ ಹತ್ತು ಶಿರ(ನ)ನುಜೆಯ ಮೂಗು

ಮುಂದಲೆಯ ಕೊಯ್ದ(ಯ್ಸಿದ?) ನೆಂದ್ಹೇಳಲ್ಯಾ 7


ಎಳೆದು ಗೋಪ್ಯಮ್ಮ ನಿನ್ನೊ ್ವರಳಿಗೆ ಕಟ್ಟಿದ್ದು

ಕಳವು ಜನರ ಮುಂದ್ಹೇಳಲ್ಯಾ ರಂಗ

ಕಳವು ಜನರ ಮುಂದ್ಹೇಳಲ್ಯಾ

ಸೆಳೆದು ಗೋಪ್ಯೇರ ಸೀರೆಕಟ್ಟಿ (ಕಡಹಾ) ಲಕ್ಕೆ ಆ-

ಕಳಕಾಯ್ದನೆಂದು ನಾ ಹೇಳಲ್ಯಾ 8


ಬಟ್ಟೆರಹಿತನಾಗಿ ಹೊಕ್ಕು ತ್ರಿಪುರದಲ್ಲಿ

ಬತ್ತಲೆ ತಿರುಗಿದ್ದು ಹೇಳಲ್ಯಾ ರಂಗ

ಬತ್ತಲೆ ತಿರುಗಿದ್ದು ಹೇಳಲ್ಯಾ

ದುಷ್ಟ ಕಲಿಯ ಶಿರಕಡಿದು ಹಾಕುವ ನೀ

ದುಷ್ಟ ಗುಣಗಳ ನಾ ಹೇಳಲ್ಯಾ 9


ಭಕ್ತ ಜನರು ಕಂಡು ಕಟ್ಟಿ ಹಾಕುವರೆಂ-

ದಿಷ್ಟು ಅಂಜಿಕೆ ನಿನ್ನದ್ಹೇಳಲ್ಯಾ ರಂಗ

ಇಷ್ಟು ಅಂಜಿಕೆ ನಿನ್ನದ್ಹೇಳಲ್ಯಾ

ನಿತ್ಯ ಈ ಹೃದಯಮಂದಿರದಲ್ಲಿ ಭೀಮೇಶ-

ಕೃಷ್ಣ ನೀನಡಗಿದ್ದು ಹೇಳಲ್ಯಾ 10

***


No comments:

Post a Comment