Sunday 1 August 2021

ಏಳು ಪುರಂದರ ಗುರುವರ ಇನ್ನು ಭಾಳ ಹೊತ್ತಾಯಿತು ankita gopalakrishna vittala

ಏಳು ಪುರಂದರ ಗುರುವರ ಇನ್ನು

ಭಾಳ ಹೊತ್ತಾಯಿತು ಭಕುತ ಜನಪ್ರಿಯ ಪ.


ಶ್ರೀಶನಪ್ಪಣೆಯಿಂದ ಭೂಲೋಕದಲಿ ಪುಟ್ಟಿ

ಆಶೆಯಿಂದಲಿ ಧನ ಗಳಿಸಿ ಕೋಟಿ

ವಾಸುದೇವನು ಎಚ್ಚರಿಸಲು ವೈರಾಗ್ಯ

ದಾಸತ್ವದಲಿ ಜಗದಿ ಮೆರೆಯಬೇಕು 1

ವ್ಯಾಸ ಮುನಿಯಿಂದುಪದೇಶಕೊಳ್ಳಲುಬೇಕು

ದಾಸತ್ವ ಜಗದಲಿ ಸ್ಥಾಪಿಸಬೇಕು

ದೋಷರಹಿತ ಮಧ್ವಶಾಸ್ತ್ರ ತತ್ವಗಳ ಪ್ರ

ಕಾಶಗೈಸುತ ಕವನಗೈಯ್ಯಬೇಕು 2

ಸತಿಸುತ ಪರಿವಾರ ಭೂ ಸಂಚರಿಸಬೇಕು

ಸ್ತುತಿಸುತ್ತ ಹರಿಯನ್ನು ಕುಣಿಸಬೇಕು

ಜತನದಿ ನಿಜತತ್ವಗಳನರಿಯಲಿಬೇಕು

ಕ್ಷಿತಿಗೆ ಅಚ್ಚರಿ ಮಹಿಮೆಯ ತೋರಬೇಕು 3

ಪುಷ್ಯದಮಾವಾಸೆ ಹರಿಪುರ ಸೇರಲು

ಶಿಷ್ಯಕುಲವು ಜಗದಿ ಬೆಳೆಯಲೆಂದು

ಶಿಷ್ಯ ವಿಜಯದಾಸರಿಗೆ ಅಂಕಿತವನಿತ್ತು

ಶಿಷ್ಯ ಪ್ರಶಿಷ್ಯ ಸಂತತಿ ಬೆಳಸಬೇಕು 4

ಪಾಪಿ ಜನಗಳ ಪಾವನಗೈಯಲಿಬೇಕು

ತಾಪಪಡುವರ ಪೊರೆಯಲೆತ್ನಿಸಬೇಕು

ಶ್ರೀಪತಿ ದಾಸತ್ವ ಜಗದಿ ನಿಲ್ಲಿಸಬೇಕು

ಗೋಪಾಲಕೃಷ್ಣವಿಠ್ಠಲನ ಸ್ಮರಿಸಬೇಕು 5

****


No comments:

Post a Comment