Tuesday 1 June 2021

ಹ್ಯಾಂಗೆ ಉದ್ಧಾರ ಮಾಡ್ಯಾನೋ ಶ್ರೀಹರಿ ಹೀಗೆ ದಿನಗಳಿವಂಗನಿಗೆ ankita hanumesha vittala

 ಹ್ಯಾಂಗೆ ಉದ್ಧಾರ ಮಾಡ್ಯಾನೋ ಶ್ರೀಹರಿ

ಹೀಗೆ ದಿನಗಳಿವಂಗನಿಗೆ ಪ


ಬ್ಯಾಗ ಪತಿಗೆ ತಾ ಬಾಗದನುಕೂಲವಾಗಿರದೆ

ತಿಳಿದ್ಹಾಗೆ ನಡೆವಳ ಅ.ಪ.


ಉದಯದಲೆದ್ದತಿ ಸಜಮಲಳಾಗಿ ತಾ

ಮುದದಿ ಪತಿಗೆ ನಮಿಸದವಳಿಗೆ

ಪದುಮಾಕ್ಷಿ ತುಳಸಿಯ ಪೂಜಿಸಿ ಮನದಿ

ಮಾಧವನ ಭಕ್ತಿಲಿ ಸ್ತುತಿಸದವಳಿಗೆ

ಪದುಮನಾಭನೇ ಸರ್ವಪರನೆಂದು ಅರಿಯದೆ

ಅಧಮ ಶಾಸ್ತ್ರವ ಕೇಳಿ ಅದರಂತೆ ನಡೆವಳ 1


ಹರಿದಿನದಲಿ ಉಂಡು ಹರಿಯನ್ನದಲೇ ಊರ

ತಿರುಗಿ ಹೊತ್ತು ಕಳೆವಳಿಗೆ

ಸರಸದಿ ನರಹರಿ ನಾಮ ಸಂಕೀರ್ತನೇ

ಇರುಳು ಜ್ಯಾಗರ ಮಾಡದವಳಿಗೆ

ದೊರಕಿದಷ್ಟರಲೇ ತಾ ಹರುಷ ಪಡೆದೇ ಧನ

ತರು ಹೋಗೆನುತ ತನ್ನ ಪತಿ ಹೊರಗ್ಹಾಕ್ವಳ 3


ಗುರು ಹಿರಿಯರ ಅತ್ತೆಮಾವರ ಜರಿದು ತಾ

ಹಿರಿಯಳು ಮನಿಗೆ ನಾನೆನುತಿರ್ಪಳು

ಪರರ ನಿಂದಿಸಿ ಭೂಸುರರು ಬಂದರೆ ಅನ್ನ

ದೊರಕದೆನುತ ಹೇಳಿ ಕಳಹುವಳ

ಸರಸ ಮೃಷ್ಟಾನ್ನವ ಹರುಷದಿ ಪತಿದ್ವಾರಾ

ಹರಿಗರ್ಪಿಸದಲೇ ತ್ವರದಿ ತಾ ತಿನ್ವಳ 3


ಪತಿ ಅಂತರ್ಯಾಮಿ ಶ್ರೀ ಪತಿಯನರಿದು ತನ್ನ

ಪತಿಯ ಸೇವೆ ಮಾಡದಿರುವಳಿಗೆ

ಪತಿ ಮುಕ್ತಿ ಪಥವೆಂದು ಪತಿಹಿತದವನೆಂದು ಅರಿಯದೇ

ಪರ ಪತಿ ನೋಡ್ವಳಿಗೆ

ಪತಿಯಿಂದಲಂಕೃತವಾಗಿಹ ಮಂಗಳಸೂತ್ರವೇ

ಸಕಲ ಭೂಷಣವೆಂದರಿಯದವಳಿಗ್ಹಾಂಗೆ 4


ಪರಮ ಅತ್ತೆಯ ಮಾತು ಶಿರದಿ ಸ್ವೀಕರಿಸಿ

ಐವರ ಕೂಡ ಧಾರೆಯರೆಸಿಕೊಂಡಾ

ಪರಮ ಪಾವನಳಾದ ಭಾರತೀ ದೇವೇರ

ಸ್ಮರಿಸದೇ ಅದರಂತಾಚರಿಸದೆ ಇರುವಳಿಗ್ಹ್ಯಾಂಗೆ 5


ವನವಾಸದಲಿ ಪಾಂಡು ತನಯರ ಕೂಡ ತಾ

ಧನ ಸುಖ ಬೇಡದೆÀ ಪೋದವಳು

ಘನ ಹಸಿವುತೃಷೆಯಿಂದ ಅನ್ನ ಬೇಡಿದ

ದುರ್ವಾಸಾದಿಗಳನು ಆದರಿಸಿದವಳಾ

ಆಜನನಿ ದೃಪವ ನಂದನಿಯ ಕೃತ್ಯಗಳನ್ನು

ನೆನೆದು ತನ್ನಯ ಮನವನ್ನು ತೊಳೆಯದವಳು 6


ಮರುತಂತರ್ಗತ ಸ್ವಾಮಿ ಸಲಹೆನ್ನದೇ

ಪರರಿಗೊಂದೆಡೆ ಇಕ್ಕಿ ಪಂಕ್ತಿ ಭೇದವ ಮಾಡಿ

ನರಕ ಸಾಧನ ಕರ್ಮ ಮಾಡ್ವಳಿಗೆ

ಪರಮ ಪಾವನನಾದ ಹನುಮೇಶವಿಠಲನ

ನೆರೆ ನಂಬದಲೇ ದೇಹ

ಸ್ಥಿರವೆಂದು ತಿಳಿವಳಿಗ್ಹ್ಯಾಂಗ 7

****


No comments:

Post a Comment