Tuesday 1 June 2021

ವಂದಿಪೆ ಯತಿವರೇಂದ್ರ ತವ ಪಾದದ್ವಂದ್ವಕ್ಕಾನಂದಾ ankita hanumesha vittala satyajnana teertha stutih

ವಂದಿಪೆ ಯತಿವರೇಂದ್ರ ತವ ಪಾದದ್ವಂದ್ವಕ್ಕಾನಂದಾ ದಿನಾ

ಬಂದ ಕಂದನಾ ಪಾಲಿಸೆಂದೆ ಪ


ಮಂದಮತಿಯು ನಾ ನಿಂದ್ಯನಾಗಿ ಮಾಯಾಬಂಧನದೊಳು

ಸಿಲ್ಕಿರುವೆನಾ

ತಂದೆ ಸತ್ಯಜ್ಞಾನಾನಂದಮೂರ್ತಿ ಬಹು ನೊಂದೆನಾ

ಶರಣು ಬಂದೆನಾ 1


ಬೇಡ ಬಂದೆ ನಿನ್ನಾ ಕಾಡುವೆನೆಂದೆನ್ನಾ ದೂಡದೆ ಈ

ಮೂಢ ಸೇವಕನಾ

ಗಾಢ ಪಂಚಮುದ್ರೆ ನೀಡಿ ನೀ ಮಾಡಿಕೊ ದಾಸನಾ

ಬಿಡಿಸೊ ವ್ಯಸನಾ 2


ಶ್ರೀಶನಾದ ಹನುಮೇಶವಿಠಲನ್ನಾ ದಾಸ ಉದಾಸೀನದಲ್ಲೆ ಎನ್ನಾ

ಪೋಷಿಸೊ ನೀ ಮನದಾಸೆ ಪೂರೈಸಿನ್ನು ಕರುಣಾಜ್ಞಾನಪೂರ್ಣ 3

****


No comments:

Post a Comment