Tuesday 1 June 2021

ಪ್ರೀತಿಪಾತ್ರ ಬುಧೇಂದ್ರ ಸತ್ಯಪ್ರಿಯರ ಕುವರಾ ankita hanumesha vittala satyabodha teertha stutih

ಪ್ರೀತಿಪಾತ್ರ ಬುಧೇಂದ್ರ ಪ


ಸತ್ಯಪ್ರಿಯರ ಕುವರಾ ನಿಜ ಭೃತ್ಯರ ಪಾಲಿಪ ಚತುರಾ

ಚಿತ್ತದೊಳೊಮ್ಮೆ ಸ್ಮರಿಪೆ ಪದಕಮಲವ ಮೃತ್ಯು

ಭಯವ ಕಳೆವುತ್ತ ಪೊರೆದೆ 1


ವಿಷವನುಂಡರಗಿಸಿಕೊಂಡ ಧೀರಾ ವೃಷಕೇತು ಪಿತ ಭಕ್ತ ಶೌಂಡಾ

ವಿಷಮ ಬುದ್ಧಿಯಲಿ ವಾದಿಸ ಬಂದ ವಾದಿಗಳ

ಉಸಿರೆತ್ತಗೊಡದೆ ಸಾಧಿಸಿದೆ ಮಧ್ವಶಾಸ್ತ್ರ 2


ಚರಣಕ್ಕೆ ಶರಣೆಂಬೆನಯ್ಯ ಎನ್ನ ಕರುಣದಿ ಪಾಲಿಸು ಜೀಯಾ

ಸಿರಿ ಹನುಮೇಶವಿಠಲನ ಪಾದ ಭೃತ್ಯರ ಚರಣ ಕಿಂಕರನ

ಕಿಂಕರನೆನಿಸುವದೆನ್ನ 3

****

 

No comments:

Post a Comment