Saturday 1 May 2021

ಪಂಕಜಾಕ್ಷಿ ಕೇಳಿದ್ಯಾ ಪಂಕಜಗಂಧಿ ankita varada gopala vittala vyasatatwajna teertha stutih

 ಶ್ರೀ ಭಾವೀರುದ್ರಾವತಾರಿಗಳಾದ ಶ್ರೀ ಭೂತರಾಜರ ಅಂಶ ಸಂಭೂತರಾದ ಶ್ರೀ ವರದ ಗೋಪಾಲದಾಸರು .. 


ಪಂಕಜಾಕ್ಷಿ ಕೇಳಿದ್ಯಾ 

ಪಂಕಜಗಂಧಿ ।

ವೆಂಕಟರಾಮಾರ್ಯರ 

ಮಹಾ ಮಹಿಮೆಯು ।। ಪಲ್ಲವಿ ।\


ಅಪಮೃತ್ಯು ಅಪರಿಮಿತದ 

ಪಾಪಗಳೆಲ್ಲ ।

ಅಪರೋಕ್ಷ ಜ್ಞಾನಿಯು ಕೃಪೆ 

ಮಾಡೆ ಪೋಪಾವು ।। ಚರಣ ।।


ಇವರ ಬಿಟ್ಟವ ಕೆಟ್ಟ 

ಇವರಲ್ಲಿದ್ದವ ಗೆದ್ದಾ ।

ಇವರ ಕರುಣಕೆ ಪಾತ್ರನೇ 

ಮಹಾಪಾತ್ರನು ।। ಚರಣ ।।


ಆಧಿವ್ಯಾಧಿ ಸರ್ವಬಾಧೆ 

ಭಯಂಗಳು ।

ಮೋದಿ ಕೃಷ್ಣನ ವಾರ್ತಿ 

ಬೋಧಿಸೆ ದಹಿಪಾವು ।। ಚರಣ ।।

ಮನಕನುಭವ ಅನುಪಮ 


ಮಹಾ ಮಹಿಮರ ।

ಮನಕೆ ಬಂದವನ 

ಸುಮನಸನೆಂದೆನಿಸುವ ।। ಚರಣ ।।


ಪರಮಾತ್ಮ ತಾನೇ

ಪ್ರತ್ಯಕ್ಷ ಮಾತಾಡದೆ ।

ನಿರುತದಿ ಇವರಲ್ಲಿ ನಿಂತು 

ಮಾತಾಡುವ ।। ಚರಣ ।।


ಚಿಂತಿಸುತಿಪ್ಪಾರ 

ಚಿಂತಿತಾರ್ಥಗಳೆಲ್ಲ ।

ಚಿಂತಾಮಣಿಯಂತೆ 

ಸಂತೈಸುತ್ತಿದ್ದಾರೆ ।। ಚರಣ ।।


ವರದ ಗೋಪಾಲವಿಠಲ 

ಇವರಲಿ ನಿಂತು ।

ವರವ ಕೊಡುವೆನೆಂದು 

ಕರೆವುತಲಿ ಇದ್ದಾನೆ ।। ಚರಣ ।।

***

No comments:

Post a Comment