Sunday 8 December 2019

ಮರುತ ನಿನ್ನಯ ಮಹಿಮೆ venugopala vittala ankita suladi ಮುಖ್ಯಪ್ರಾಣ ಸುಳಾದಿ MARUTA NINNEYA MAHIME MUKHYAPRANA SULADI


1st Audio by Mrs. Nandini Sripad


ಶ್ರೀ ವೇಣುಗೋಪಾಲವಿಠಲದಾಸಾರ್ಯ ವಿರಚಿತ

ಅವತಾರತ್ರಯ ಮುಖ್ರಪ್ರಾಣದೇವರ ಸುಳಾದಿ

 ರಾಗ ಯಮನ್ ಕಲ್ಯಾಣಿ 

ಧ್ರುವತಾಳ

ಮರುತ ನಿನ್ನಯ ಮಹಿಮೆ ಪರಿ ಪರಿಯಿಂದ ತಿಳಿದು 
ಚರಿಸಿದ ಮನುಜನಿಗೆ ದುರಿತ ಬಾಧೆಗಳ್ಯಾಕೆ 
ಸರಸಿಜಾಸನ ಸಮ ಸಿರಿ ದೇವಿ ಗುರುವೆಂದು 
ಪರತತ್ತ್ವ ಹರಿಯೆನುತ ನಿರುತ ವಂದಿಸಿ ಅಖಿಲ 
ಭರಿತನಾಗಿಪ್ಪೆ ಜಗದಿ ಅರಸಿ ಭಾರತಿ ಸಹಿತ 
ಹೊರಗಿದ್ದ ನವಾರ್ಣವದೊಳಗೆ ಜೀವರ ಬೀಜ
ಸರಿಬಂದ ವ್ಯಾಪಾರದಿ ಆಡಿಸುವೆ ಜಡ ಜೀವರನು 
ಪುರಹರ ಮೊದಲಾಗಿ ತೃಣ ಜೀವಕಡೆಯಾಗಿ 
ಅರಿಯರು ಒಂದು ಕಾರ್ಯ ಗುರುವೆ ನಿನ್ನ ಹೊರತು 
ಹೊರಗೆ ಗೊಂಬೆಗಳ ತೋರಿ ಒಳಗೆ ಥರಥರದಿ ನೀನು
ಇರುವೆ ಸರ್ವರಿಗೆ ಆಧಾರ ರೂಪದಿ ಅತಿ 
ಸ್ಥಿರ ಭಕುತಿಯಿಂದ ಹರಿಯ ಧೇನಿಸುತ 
ಮಿರುಗುವ ಪ್ರಭೆ ನಿನ್ನದು ವದರುವ ಧ್ವನಿ ನಿನ್ನದು 
ಬರುವ ಹೋಗುವ ವ್ಯಾಪಾರ ನಿನ್ನದು ದೇವ 
ಭರದಿ ಶರಧಿಶಯನ ಸಿರಿ ವೇಣುಗೋಪಾಲರೇಯ 
ಪರಮ ಹರುಷದಿ ಲೀಲಾ ತೋರುವ ನಿನ್ನೊಳಿದ್ದು ॥ 1 ॥

ಮಟ್ಟತಾಳ

ಅಖಿಲಾಗಮ ವೇದ್ಯ ಅಖಿಲಾಗಮ ಸ್ತುತ್ಯ 
ಅಖಿಲಾಗಮ ನಿಗಮ ವ್ಯಾಪುತದೇವನೆ 
ಅಖಿಲರೊಳಗೆ ನಿಂದು ಸಕಲ ಕಾರ್ಯಗಳೆಲ್ಲ 
ಅಕುಟಿಲ ನೀನಾಗಿ ಮಾಡಿಸಿ ಮೋದದಿಂದ 
ಯುಕುತಿಯಿಂದ ಜಗದ ಅತಿಶಯವ ತಿಳಿದು 
ಲಕುಮಿಯನು ನೀನು ಕಾಣುವೆ ಸರ್ವದಾ 
ಭಕುತರೊಳಗೆ ನಿನ್ನ ತುತಿಸ ಬಲ್ಲವರಾರು 
ಭಕುತಿಗಭಿಮಾನಿ ಭಾರತಿಗಳವಲ್ಲ 
ಭೃಕುಟವಂದಿತ ನೀನು ವೇಣುಗೋಪಾಲನ 
ಪ್ರಕಟದಿ ಬಲ್ಲದ್ದು ಅರಿಯರು ಉಳಿದದ್ದು ॥ 2 ॥

ತ್ರಿಪುಟತಾಳ

ಪೃಥ್ವಿ ಶಬ್ದಾದಿ ಭೂತ ಮಾತ್ರಾ ಪರಿಮಾಣುಗಳಲ್ಲಿ 
ಪ್ರತಿಪ್ರತಿ ರೂಪನಾಗಿ ಇರುತಿಪ್ಪೆ ಮಡದಿ ಸಹಿತ ಪ್ರಾ - 
ಕೃತ ವಿಡಿದು ಸಕಲ ವ್ಯಾಪ್ತ ತಾತ್ವಿಕರಲ್ಲಿ ವ್ಯಾಪಾರ 
ನಿನ್ನದಯ್ಯ ಲೋಕ ವಂದಿತ ದೇವ 
ಶಾತಕುಂಭಾದಿಯಿಂದ ಬೊಮ್ಮಾಂಡವು ತಾಳ 
ನಿನಗೆ ಎಣೆಯೆನುತ ತೋರುವುದಯ್ಯ ಶ್ರೀ - 
ಕಾಂತನಾದ ಸಿರಿ ವೇಣುಗೋಪಾಲನು 
ಪ್ರಿತಿಯಿಂದಲಿ ನಿನಗೆ ಒಲಿದ ಅಧಿಕನಾಗಿ ॥ 3 ॥

ಅಟ್ಟತಾಳ

ಇರುತಿ ಜಗದ ಆಧಾರಕನಾಗಿ 
ಇರುತಿದ್ದು ಧಾರುಣಿಯೊಳಗೆ 
ಮೂರು ಅವತಾರಗಳ ಧರಿಸಿ 
ಕ್ರೂರರ ಸದೆದೆದ್ದು ಮೀರಿದ ಕಾರ್ಯವೆ 
ಮೇರು ನುಂಗುವನಿಗೆ ಒಂದು ಚೂರು ನುಂಗಲು 
ಶೂರತನವು ಏನೋ ಆರು ಬಣ್ಣುಪರೋ ವಿ -
ಚಾರಿಸಿ ನಿನ್ನನು ನಾರಾಯಣ ಕೃಷ್ಣ ವೇಣುಗೋಪಾಲನ ಆ - 
ಧಾರದಿಂದಲಿ ಸೇವೆ ಬಾರಿ ಬಾರಿಗೆ ಮಾಳ್ಪೆ ॥ 4 ॥

ಆದಿತಾಳ

ಒಂದು ಅವತಾರದಲಿ ಕೊಂದೆ ರಕ್ಕಸರ ಮ - 
ತ್ತೊಂದು ಅವತಾರದಿ ಅಸುರ ವೃಂದ ಘಾತಿಸಿದೆ 
ನಂದತೀರ್ಥ ರೂಪದಿಂದ ಸಕಲರಂದ ವಚನಗಳ ಕಡಿದು 
ನಂದದಲ್ಲಿ ಮೆರೆದೆ ತಂದೆ ಈ ಕೃತಿಗಳು 
ನಿನ್ನಿಂದಾದದ್ದು ನೋಡಿ ಮಂದರೋದ್ಧಾರ ಸುಖಿಸುವ ಸಪುತದ್ವೀಪ 
ಸಿಂಧು ಸಪುತ ಏಕದಿಂದ ಹಾರುವನು 
ಮುಂದಿದ್ದ ಕಾಲುವೆಯ ನಿಂದು ನಿಂದು ತಾ ದಾಟಿದಂತೆ ಮಂದಮತಿಗಳ ಮನಕೆ ಏನೆಂಬೆ ಎಲೋ ದೇವ 
ಸುಂದರಾಂಗನೆ ಸುಖದಿಂದ ಪೂರಿತ ವಾಯು - 
ನಂದನ ಹನುಮ ರಾಮನಿಂದಾಲಿಂಗನವ ಪಡೆದೆ 
ಬಂದು ವಂದಿಸಿದೆ ಗೋಪಿಕಂದಗೆ ಭೀಮ 
ನಂದಮೂರುತಿ ವ್ಯಾಸನಿಂದ ತತ್ತ್ವಗಳೆಲ್ಲ 
ಅಂದದಿ ಓದುವ ಅಮರೇಂದ್ರ ವಂದಿತ ಮಧ್ವ 
ತಂದೆ ಎನ್ನ ಬಿನ್ನಹ ಒಂದು ಲಾಲಿಸುವುದು 
ಪೊಂದಿ ಭೂಪತಿಯ ಮನದಿಚ್ಛೆ ಬೇಡಿದಂತೆ 
ಇಂದು ಬೇಡುವೆ ಮನದಿಂದ ವಂದನೆ ಮಾಡುವೆ 
ಕುಂದದೆ ಎನ್ನೊಳಿಪ್ಪ ಮಂದಮತಿ ಕಳೆವಾದೆಂದು 
ಇಂದೀವರಾಕ್ಷ ಹೃದಯ ಮಂದಿರದೊಳು ನಿನ್ನ 
ಅಂದವಾದ ರೂಪ ಇಂದು ತೋರುವುದೆನಗೆ 
ಸಿಂಧುಶಯನ ಸಿರಿ ವೇಣುಗೋಪಾಲನು 
ನಿಂದು ನಿನ್ನೊಳು ಲೀಲಾ ಒಂದೊಂದು ಮಾಳ್ಪ ಚಿತ್ರ ॥ 5 ॥

ಜತೆ 

ಪವನ ನಿನ್ನಯ ಪಾದ ಪೊಂದಿದ ಮನುಜನು 
ಜವನಪುರಕ್ಕೆ ಸಲ್ಲ ವೇಣುಗೋಪಾಲ ಬಲ್ಲ ॥
********


ಅವತಾರತ್ರಯ ಮುಖ್ಯಪ್ರಾಣ ದೇವರ ಸುಳಾದಿ

ರಾಗ ಯಮನ್ ಕಲ್ಯಾಣಿ  ಧ್ರುವತಾಳ

ಮರುತ ನಿನ್ನಯ ಮಹಿಮೆ ಪರಿ ಪರಿಯಿಂದ ತಿಳಿದು |
ಚರಿಸಿದ ಮನುಜನಿಗೆ ದುರಿತ ಬಾಧೆಗಳ್ಯಾಕೆ |
ಸರಸಿಜಾಸನ ಸಮ ಸಿರಿ ದೇವಿ ಗುರುವೆಂದು |
ಪರತತ್ತ್ವ ಹರಿಯೆನುತ ನಿರುತ ವಂದಿಸಿ ಅಖಿಲ |
ಭರಿತನಾಗಿಪ್ಪೆ ಜಗದಿ ಅರಸಿ ಭಾರತಿ ಸಹಿತ |
ಹೊರಗಿದ್ದ ನವಾರ್ಣವದೊಳಗೆ ಜೀವರ ಬೀಜ|
ಸರಿಬಂದ ವ್ಯಾಪಾರದಿ ಆಡಿಸುವೆ ಜಡ ಜೀವರನು |
ಪುರಹರ ಮೊದಲಾಗಿ ತೃಣ ಜೀವಕಡೆಯಾಗಿ |
ಅರಿಯರು ಒಂದು ಕಾರ್ಯ ಗುರುವೆ ನಿನ್ನ ಹೊರತು |
ಹೊರಗೆ ಗೊಂಬೆಗಳ ತೋರಿ ಒಳಗೆ ಥರಥರದಿ ನೀನು|
ಇರುವೆ ಸರ್ವರಿಗೆ ಆಧಾರ ರೂಪದಿ ಅತಿ |
ಸ್ಥಿರ ಭಕುತಿಯಿಂದ ಹರಿಯ ಧೇನಿಸುತ |
ಮಿರುಗುವ ಪ್ರಭೆ ನಿನ್ನದು ವದರುವ ಧ್ವನಿ ನಿನ್ನದು |
ಬರುವ ಹೋಗುವ ವ್ಯಾಪಾರ ನಿನ್ನದು ದೇವ |
ಭರದಿ ಶರಧಿ ಶಯನ ಸಿರಿ ವೇಣುಗೋಪಾಲರೇಯ |
ಪರಮ ಹರುಷದಿ ಲೀಲಾ ತೋರುವ ನಿನ್ನೊಳಿದ್ದು || ೧ ||

ಮಟ್ಟತಾಳ

ಅಖಿಲಾಗಮ ವೇದ್ಯ ಅಖಿಲಾಗಮ ಸ್ತುತ್ಯ |
ಅಖಿಲಾಗಮ ನಿಗಮ ವ್ಯಾಪುತದೇವನೆ |
ಅಖಿಲರೊಳಗೆ ನಿಂದು ಸಕಲ ಕಾರ್ಯಗಳೆಲ್ಲ |
ಅಕುಟಿಲ ನೀನಾಗಿ ಮಾಡಿಸಿ ಮೋದದಿಂದ |
ಯುಕುತಿಯಿಂದ ಜಗದ ಅತಿಶಯವ ತಿಳಿದು |
ಲಕುಮಿಯನು ನೀನು ಕಾಣುವೆ ಸರ್ವದಾ |
ಭಕುತರೊಳಗೆ ನಿನ್ನ ತುತಿಸ ಬಲ್ಲವರಾರು |
ಭಕುತಿಗಭಿಮಾನಿ ಭಾರತಿಗಳವಲ್ಲ |
ಭೃಕುಟವಂದಿತ ನೀನು ವೇಣುಗೋಪಾಲನ |
ಪ್ರಕಟದಿ ಬಲ್ಲದ್ದು ಅರಿಯರು ಉಳಿದದ್ದು || ೨ ||

ತ್ರಿಪುಟತಾಳ

ಪೃಥ್ವಿ ಶಬ್ದಾದಿ ಭೂತ ಮಾತ್ರಾ ಪರಿಮಾಣುಗಳಲ್ಲಿ |
ಪ್ರತಿಪ್ರತಿ ರೂಪನಾಗಿ ಇರುತಿಪ್ಪೆ ಮಡದಿ ಸಹಿತ ಪ್ರಾ - |
ಕೃತ ವಿಡಿದು ಸಕಲ ವ್ಯಾಪ್ತ ತಾತ್ವಿಕರಲ್ಲಿ ವ್ಯಾಪಾರ |
ನಿನ್ನದಯ್ಯ ಲೋಕ ವಂದಿತ ದೇವ |
ಶಾತಕುಂಭಾದಿಯಿಂದ ಬೊಮ್ಮಾಂಡವು ತಾಳ |
ನಿನಗೆ ಎಣೆಯೆನುತ ತೋರುವುದಯ್ಯ ಶ್ರೀ - |
ಕಾಂತನಾದ ಸಿರಿ ವೇಣುಗೋಪಾಲನು |
ಪ್ರಿತಿಯಿಂದಲಿ ನಿನಗೆ ಒಲಿದೆ ಅಧಿಕನಾಗಿ || ೩ ||

ಅಟ್ಟತಾಳ

ಇರುತಿ ಜಗದ ಆಧಾರಕನಾಗಿ |
ಇರುತಿದ್ದು ಧಾರುಣಿಯೊಳಗೆ |
ಮೂರು ಅವತಾರಗಳ ಧರಿಸಿ |
ಕ್ರೂರರ ಸದೆದೆದ್ದು ಮೀರಿದ ಕಾರ್ಯವೆ |
ಮೇರು ನುಂಗುವನಿಗೆ ಒಂದು ಚೂರು ನುಂಗಲು |
ಶೂರತನವು ಏನೋ ಆರು ಬಣ್ಣುಪರೋ ವಿ -|
ಚಾರಿಸಿ ನಿನ್ನನು ನಾರಾಯಣ ಕೃಷ್ಣ ವೇಣುಗೋಪಾಲನ ಆ - |
ಧಾರದಿಂದಲಿ ಸೇವೆ ಬಾರಿ ಬಾರಿಗೆ ಮಾಳ್ಪೆ || ೪ ||

ಆದಿತಾಳ

ಒಂದು ಅವತಾರದಲಿ ಕೊಂದೆ ರಕ್ಕಸರ ಮ - |
ತ್ತೊಂದು ಅವತಾರದಿ ಅಸುರ ವೃಂದ ಘಾತಿಸಿದೆ |
ನಂದತೀರ್ಥ ರೂಪದಿಂದ ಸಕಲರಂದ ವಚನಗಳ ಕಡಿದು |
ನಂದದಲ್ಲಿ ಮೆರೆದೆ ತಂದೆ ಈ ಕೃತಿಗಳು |
ನಿನ್ನಿಂದಾದದ್ದು ನೋಡಿ ಮಂದರೋದ್ಧಾರ ಸುಖಿಸುವ ಸಪುತದ್ವೀಪ |
ಸಿಂಧು ಸಪುತ ಏಕದಿಂದ ಹಾರುವನು |
ಮುಂದಿದ್ದ ಕಾಲುವೆಯ ನಿಂದು ನಿಂದು ತಾ 
ದಾಟಿದಂತೆ ಮಂದಮತಿಗಳ ಮನಕೆ ಏನೆಂಬೆ ಎಲೋ ದೇವ |
ಸುಂದರಾಂಗನೆ ಸುಖದಿಂದ ಪೂರಿತ ವಾಯು - |
ನಂದನ ಹನುಮ ರಾಮನಿಂದಾಲಿಂಗನವ ಪಡೆದೆ |
ಬಂದು ವಂದಿಸಿದೆ ಗೋಪಿಕಂದಗೆ ಭೀಮ |
ನಂದಮೂರುತಿ ವ್ಯಾಸನಿಂದ ತತ್ತ್ವಗಳೆಲ್ಲ |
ಅಂದದಿ ಓದುವ ಅಮರೇಂದ್ರ ವಂದಿತ ಮಧ್ವ |
ತಂದೆ ಎನ್ನ ಬಿನ್ನಹ ಒಂದು ಲಾಲಿಸುವುದು |
ಪೊಂದಿ ಭೂಪತಿಯ ಮನದಿಚ್ಛೆ ಬೇಡಿದಂತೆ |
ಇಂದು ಬೇಡುವೆ ಮನದಿಂದ ವಂದನೆ ಮಾಡುವೆ |
ಕುಂದದೆ ಎನ್ನೊಳಿಪ್ಪ ಮಂದಮತಿ ಕಳೆವಾದೆಂದು |
ಇಂದೀವರಾಕ್ಷ ಹೃದಯ ಮಂದಿರದೊಳು ನಿನ್ನ |
ಅಂದವಾದ ರೂಪ ಇಂದು ತೋರುವುದೆನಗೆ |
ಸಿಂಧುಶಯನ ಸಿರಿ ವೇಣುಗೋಪಾಲನು |
ನಿಂದು ನಿನ್ನೊಳು ಲೀಲಾ ಒಂದೊಂದು ಮಾಳ್ಪ ಚಿತ್ರ || ೫ ||

ಜತೆ 

ಪವನ ನಿನ್ನಯ ಪಾದ ಪೊಂದಿದ ಮನುಜನು |
ಜವನಪುರಕ್ಕೆ ಸಲ್ಲ ವೇಣುಗೋಪಾಲ ಬಲ್ಲ ॥
**************


No comments:

Post a Comment