Friday, 6 December 2019

ಶ್ರೀನಿವಾಸನು ಒಲಿಯನು ಕೇಳೋ ಜ್ಞಾನೋಪಾರ್ಜನೆ purandara vittala


ಶ್ರೀನಿವಾಸನು ಒಲಿಯನು ಕೇಳೊ

ಜ್ಞಾನೋಪಾರ್ಜನೆ ಮಾಡದಲೆ ll ಪ ll


ಏನೇನೊ ಸತ್ಕರ್ಮವ ಮಾಡಲು

ಪ್ರಾಣೇಶಾರ್ಪಣವೆನ್ನದಲೆ ll ಅ ಪ ll


ಸ್ನಾನವು ಸಂಧ್ಯಾವಂದನ ಜಪತಪ

ಜ್ಞಾನ ಸಾಧನವಿದೆನ್ನದಲೆ

ದಾನಧರ್ಮಗಳು ಈಶನ ಅನು ಸಂ

ಧಾನವ ಮಾಡಿ ಮಾಡದಲೆ ll 1 ll


ಕಾಮ ಕ್ರೋಧ ಲೋಭಾದಿ ದುರಾತ್ಮಕ

ಆ ಮಹಾ ರಿಪುಗಳ ಜಯಿಸದಲೆ

ಪ್ರೇಮದಿ ಶ್ರೀಹರಿ ಭಕುತರ ಚರಣದಿ

ನೇಮದಿ ನಿತ್ಯ ನಮಿಸದಲೆ ll 2 ll


ಬಾಲಕ ಸತಿ ಮೊದಲಾದ ಜನರು ಶ್ರೀ

ಲೋಲನ ಸೇವಕರೆನ್ನದಲೆ

ಕಾಲ ದೇಶ ಅಸು ಮೊದಲಾದವು ಗೋ

ಪಾಲಗೆ ಅಧೀನವೆನ್ನದಲೆ ll 3 ll


ಸಾಧು ಸಂಗದಲಿ ತೀರ್ಥಯಾತ್ರೆಗಳ

ಪಾದದಿ ನಡೆದು ನೀ ಮಾಡದಲೆ

ಭೇದಪಂಚಕವು ಜಗದಿ ಅಭೇದವ 

ಮಾಧವನಲಿ ನೀ ತಿಳಿಯದಲೆ ll 4 ll


ಒಂದು ಕ್ಷಣವು ಬಿಡದಿಂದಿರೇಶ ಗೋ

ವಿಂದನಂಘ್ರಿಯ ನೆನೆಯದಲೆ

ವಂದ್ಯನು ಶ್ರೀ ಪುರಂದರವಿಟ್ಠಲ

ಬಂಧಕ ಮೋಚಕನೆನ್ನದಲೆ ll 5 ll

***


ಶ್ರೀನಿವಾಸನು ಒಲಿಯನು ಕೇಳೋ
ಜ್ಞಾನೋಪಾರ್ಜನೆ ಮಾಡದಲೆ ||ಪಲ್ಲವಿ||

ಏನೇನೋ ಸತ್ಕರ್ಮವ ಮಾಡಲು
ಪ್ರಾಣೇಶಾರ್ಪಣವೆನ್ನದಲೆ ||ಅನುಪಲ್ಲವಿ||

ಸ್ನಾನವು ಸಂಧ್ಯಾವಂದನ ಜಪತಪ
ಜ್ಞಾನ ಸಾಧನವಿದೆನ್ನದಲೆ
ಧಾನಧರ್ಮಗಳು ಈಶನ ಅನು
ಸಂಧಾನವಮಾಡಿ ಮಾಡದಲೆ ||1 ||

ಕಾಮ ಕ್ರೋಧ ಲೋಭ ದುರಾತ್ಮಕ
ಆ ಮಹಾ ರಿಪುಗಳ ಜಯಿಸದಲೆ
ಪ್ರೇಮಾದಿ ಶ್ರೀಹರಿ ಭಕುತರ ಚರಣದಿ
ನೇಮದಿ ನಿತ್ಯ ನಮಿಸದಲೆ || 2||

ಬಾಲಕ ಸತಿ ಮೊದಲಾದ ಜನರು ಶ್ರೀ
ಲೋಲನ ಸೇವಕರೆನ್ನದಲೆ
ಕಾಲ ದೇಶ ಅಸು ಮೊದಲಾದುವು
ಗೋಪಾಲಗೆ ಆಧೀನವೆನ್ನದಲೆ ||3||

ಸಾಧು ಸಂಗದಲಿ ತೀರ್ಥಯಾತ್ರೆಗಳ
ಪಾದದಿ ನಡೆದು ನೀ ಮಾಡದಲೆ
ಬೇಡಪಂಚಕವು ಜಗದಿ ಅಭೇದವ
ಮಾಧವನಲಿ ನೀ ತಿಳಿಯದಲೆ ||4||

ಒಂದು ಕ್ಷಣವು ಬಿಡದಿಂದಿರೇಶ
ಗೋವಿಂದನಂಘ್ರಿಯ ನೆನೆಯದಲೆ
ವಂದ್ಯನು ಶ್ರೀ ಪುರಂದರ ವಿಟ್ಠಲ
ಬಂಧವಿಮೋಚಕನೆನ್ನದಲೆ || 5 ||
********

No comments:

Post a Comment