Friday 27 December 2019

ವಂದನೆ ಮಾಡಿರೈ ಯತಿಕುಲಚಂದ್ರನ ankita rangavittala jitamitra stutih

ವಂದನೆ ಮಾಡಿರೈ ಯತಿಕುಲಚಂದ್ರನ ಪಾಡಿರೈ | ಪ |

ಬಂದ ದುರಿತಗಳ ಹಿಂದೆ ಕಳೆದು ಆ- 
ನಂದ ಪಡುವ ವಿಭುದೇಂದ್ರ ಕರೋಧ್ಭವನ || ಅ.ಪ. ||

ರಘುಕುಲವರಪುತ್ರ ರಾಮನ ಚರಣ 
ಕರುಣಾಪಾತ್ರನಿಗಮೋಕ್ತಿಯ ಸೂತ್ರ ಪಾಠವ 
ಪಠಿಸುವಸುಗುಣ ಜಿತಾಮಿತ್ರ ನಗಧರ ಶ್ರೀ 
ಪನ್ನಗಶಯನನ ಗುಣಪೊಗಳುವ 
ಅಪಾರ ಅಗಣಿತ ಮಹಿಮರ || 1 ||

ವರಮಹಾತ್ಮೆ ತಿಳಿಸಿ ಮೊದಲಿಂದೀ 
ಪರಿಯಂದದಿಚರಿಸಿ ನಿರುತ ಮನವ ನಿಲಿಸಿ 
ಶ್ರೀಹರಿ ಕರಿವರದನ ಒಲಿಸಿದರೆ ಜನರಿಗೆ 
ಅರಿಯದೆ ಮರೆಯಾಗುತ ಹರುಷದಿ 
ಗೋನದ ತರವಲ್ಲಿರುವವರ || 2 ||

ಮುದದಿ ಕೃಷ್ಣಾ ತಟಿಯ ಮಧ್ಯದಿ 
ಸದನದ ಪರಿಯಸದಮಲ ಯತಿವರ್ಯ 
ತಪಮೌನದಲಿಇದ್ದು ದ್ರುತ ಕರಿಯಕಾರ್ಯ 
ಒದಗಿ ನದಿಯು ಸೂ -ಸುತ ಬರಲೇಳು 
ದಿನಕುದಯಾದವರ ಸುಪದ ಕಮಲಂಗಳ || 3 ||

ಮಾಸ ಮಾರ್ಗಶೀರ್ಷಾರಾಧನೆಗಶೇಷದಿನ 
ಅಮಾವಾಸ್ಯ ದಾಸರು ಪ್ರತಿವರುಷ 
ಮಾಳ್ಪರುಲೇಸೆನಲು ಶ್ರಿತಿಗೋಷ ಕಾಶಿಯ ಕ್ಷೇತ್ರ 
ಈ ಸ್ಥಳ ಮಿಗಿಲೈದಾಸರಿಗೆ ಭೂಸುರ ಪದಗಳ || 4 ||

ಮಧ್ವಶಾಸ್ತ್ರ ಗ್ರಂಥಸಾರದ ಪದ್ಧತಿ 
ತಿಳಿಸಿದಂಥರುದ್ರವಂದ್ಯ ಮೂರುತಿ ರಂಗವಿಠಲ 
ಪದ ಪದ್ಮಾರಾಧಕ ಪ್ರಸಿದ್ಧ ಮುನೀಂದ್ರರ || 5 ||
*********

ಶ್ರೀ ಶ್ರೀಪಾದರಾಜರ ಮಾತುಗಳಲ್ಲಿ.... "
ರಾಗ : ಹಿಂದೋಳ ತಾಳ : ಆದಿ
ವಂದನೆ ಮಾಡಿರೈ ಯತಿಕುಲ
ಚಂದ್ರನ ಪಾಡಿರೈ ।। ಪಲ್ಲವಿ ।।

ಬಂದ ದುರಿತಗಳ
ಹಿಂದೆ ಕಳೆದು । ಆ ।
ನಂದ ಪಡುವ ವಿಬು-
ಧೇಂದ್ರ ಕರೋದ್ಭವರ ।। ಅ. ಪ ।।

ರಘುಕುಲ ವರ ಪುತ್ರ ರಾಮನ -
ಚರಣ ಕರುಣಾ ಪಾತ್ರ ।
ನಿಗಮೋಕ್ತಿಯ
ಸೂತ್ರ ಪಾಠ ಪಠಿಸುವ ।
ಸುಗುಣ ಜಿತಾಮಿತ್ರ ।।
ನಗಧರ ಶ್ರೀ ಪನ್ನಗ -
ಶಯನನ ಗುಣ ।
ಪೊಗಳುವ ಅಪಾರ -
ಅಗಣಿತ ಮಹಿಮರ ।। ಚರಣ ।।

ವರ ಮಹಾತ್ಮೆ ತಿಳಿಸಿ -
ಮೊದಲಿಂದೀ ।
ಪರಿಯಂದದಿ ಚರಿಸಿ ।
ನಿರುತ ಮನವ -
ನಿಲಿಸಿ ಶ್ರೀ ಹರಿ ।।
ಕರಿ ವದನನ ಒಲಿಸಿ ।
ಧರೆ ಜನರಿಗೆ ಅರಿಯದೆ -
ಮರೆಯಾಗುತ ।
ಹರುಷದಿ ಗೋನದ -
ತರುವಲ್ಲಿರುವರ ।। ಚರಣ ।।

ಮುದದಿ ಕೃಷ್ಣಾ ತಟಿಯ ।
ಮಧ್ಯದಿ ಸದನದ -
ಈ ಪರಿಯ ।
ಸತದಾಮಲ -
ಯತಿವರ್ಯ ।।
ತಪ ಮೌನದಲಿ -
ಇದ್ದುದನರಿಯ ।
ಓದುಗಿ ನದಿಯು
ಸೂಸುತ ಬರಲೇಳು ದಿನ ।
ಕುದಯರಾದವರ ಸುಪದ
ಕಮಲಂಗಳ ।। ಚರಣ ।।

ಮಾಸ ಮಾರ್ಗ-
ಶೀರ್ಷಾರಾಧನೆಗ ।
ಶೇಷ ದಿನ ಅಮಾವಾಸ್ಯ ।
ದಾಸರು ಪ್ರತಿ ವ-
ರುಷ ಮಾಳ್ಪರು ।।
ಲೇಸೆನಲು ಶ್ರೀತಿಗೋಷ ।
ಕಾಶಿಯ ಕ್ಷೇತ್ರಕೆ -
ಈ ಸ್ಥಲ ಮಿಗಿಲೈ ।
ದಾಸ ಜನಕೆ ಭೂರುಹ
ಯತಿ ಪದಗಳ ।। ಚರಣ ।।

ಮಧ್ವ ಶಾಸ್ತ್ರ ಗ್ರಂಥ ಸಾರದ ।
ಪದ್ಧತಿ ತಿಳಿದಂಥ ।
ಅದ್ವೈತ ಪಂಥ ಮುರಿದು ।।
ಮತ ಉದ್ಧರಿಸುವಂಥ ।
ರುದ್ರ ವಂದ್ಯ ಮೂರುತಿ -
ರಂಗವಿಠ್ಥಲನ ಪದ ।
ಪದ್ಮಾರಾಧಕ ಪ್ರಸಿದ್ಧ -
ಮುನೀಂದ್ರರ ।। ಚರಣ ।।
***

No comments:

Post a Comment