Saturday 14 December 2019

ಚಾರು ಚರಣವ ಸಾರಿದೆ ಶರಣ ankita jagannatha vittala

ಜಗನ್ನಾಥದಾಸರು
ಚಾರು ಚರಣವ ಸಾರಿದೆ ಶರಣ ಮಂದಾರ ಕರುಣವ
ಬೀರಿ ಭವವನಧಿ ತಾರಿಸು ತವಕದಿ ಸೂರಿ ಸುಧೀಂದ್ರ ಕುಮಾರ ಉದಾರ ಪ

ಪಾದ ವನರುಹ ಧ್ಯಾನ
ಪ್ರಣವನ ಸ್ತವನ ಅರ್ಚನೆ ಮಾಳ್ಪ ನಾನಾ
ಜನರ ವಾಂಛಿತವೀವಗುಣ ಪೂರ್ಣ e್ಞÁನ
ಧನಪ ಪಾಲಿಸೆನಗೀಕ್ಷಣ ನಿನ್ನಾಧೀನ
ಮನುಜನ ನೀ ಪ್ರತಿದಿನದಿ ದಣಿಸುವುದು
ಘನವೆ ಗುರುವೆ ಪಾವನತರ ಚರಿತ 1

ಪಾದ ಕೀಲಾಲಜ ಮಧುಪಾ
ಬಾಲಕನ ಬಿನ್ನಪವ ಲಾಲಿಸೋ ಮುನಿಪ
ತಾಳಲಾರೆನೊ ತಾಪತ್ರಯದ ಸಂತಾಪ
ಕೇಳೋವಿಮಲe್ಞÁನ ಶೀಲ ಸ್ವರೂಪ
ಭೂಲಲನಾಧವ ಕೋಲನಂದನಾ
ಕೂಲಗವರ ಮಂತ್ರಾಲಯ ನಿಲಯ 2

ಕಲಿಕಲ್ಮಷವಿದೂರ ಕುಜನ ಕುಠರಾ
ನಳಿನಾಕ್ಷ ವಿಮಲ ಶ್ರೀ ತುಲಸಿಯ ಹಾರ
ಗಳ ಸುಶೋಭಿತ ಕಮಂಡಲ ದಂಡಧರಾ
ಜಲಧಿ ವಿಹಾರಾ
ಸುಲಲಿತ ಕರುಣಾಂಬುಧಿಯೆ ಜಗನ್ನಾಥ ವಿ
ಠಲನೊಲಿಮೆಯ ಪಡೆದಿಳೆಯೊಳು ಮೆರೆದಾ 3
*********

No comments:

Post a Comment