Saturday 14 December 2019

ಕೃಷ್ಣ ದ್ವೈಪಾಯನ ಕೃಪಣವತ್ಸಲ ankita jagannatha vittala

ಜಗನ್ನಾಥದಾಸರು
ಕೃಷ್ಣ ದ್ವೈಪಾಯನ ಕೃಪಣವತ್ಸಲ ಪರ
ಮೇಷ್ಠಿ ಜನಕನ ತೋರೊ ಪ

ಅನಿಮಿಷ ಕುಲಗುರು ಆನಂದತೀರ್ಥ ಸ
ನ್ಮುನಿಮತ ವಿಮಲಾಂಬುಜಾ ಅ.ಪ.

ದಿನಕರ ದಯದಿ ನೋಡೆನ್ನನು ಬಾದರಾ
ಯಣ ನಾಮಧೇಯರ ತನಯ ಸಂಯಮಿ ವರ 1

ಭೀಮ ತರಂಗಿಣಿ ಬದಿಗನೆನಿಸಿ ಸೀತಾ
ಕರ್ಮ ಗುಣಕೀರ್ತನಗೈವ
ನಿರ್ಮಲಾತ್ಮಕನ ಸತ್ಪ್ರೇಮದಿ ಸಲಹುವ
ಸುಜನ ಶಿರೋಮಣಿ 2

ವಿಗತದೇಹಾಭಿಮಾನಿಯೆ ನಿಮ್ಮೊಡನೆ ನಿತ್ಯ
ಹಗೆಗೊಂಬ ಪಾಪಿಗಳ
ವಿಗಡಕರ್ಮಗಳೆಲ್ಲ ಮರೆದು ವಿಶ್ವವ್ಯಾಪಿ
ಜಗನ್ನಾಥ ವಿಠಲ ಸ್ವತಂತ್ರ ಕರ್ತಯೆಂಬಾ 3
*******

No comments:

Post a Comment