Friday 27 December 2019

ಸತ್ಯಭೋಧ ಯತಿಕುಲ ankita jagannatha vittala satyabodha teertha stutih

ಜಗನ್ನಾಥದಾಸರು
ಸತ್ಯಭೋಧ ಯತಿಕುಲವರನೆ ನಿತ್ಯ
ತುತಿಸಿ ವಂದಿಸುವ ತಾವಕರೊಳು ಎಣಿಸೋ ಪ

ಅರ್ಥಿಜನ ಚಿಂತಾಮಣಿ ಸತ್ಕರುಣಿ
ಶ್ರೀನಿವಾಸನ ಗುಣ ಸಾನುರಾಗದಲಿ ವ್ಯಾ
ಖ್ಯಾನ ಪೇಳುವ ಕಾಲದಿ
ಶ್ವಾನರೂಪದಿ ಪವಮಾನ ಜನರು ನೋಡೆ
ಕಾಣಿಸಿಕೊಂಡನಂದೊ ತಾ ಬಂದು 1

ಬವರಗೋಸುಗ ಬಂದ ಯವನಾಧಿಪತಿ ನಿಮ್ಮ
ಸುವಿಚಿತ್ರ ಮಹಿಮೆ ಕಂಡು
ಪ್ರವಿನೀತನಾಗಿ ಕಪ್ಪವೆ ಕೊಟ್ಟು ನಮಿಸಿದ
ಕವಿ ಆವಾ ವಿಭವಾ ವರ್ಣಿಸುವಾ 2

ಇವರು ದೇವಾಂಶರೆಂದರುಪುವಗೋಸುಗ ಬಂದು
ದಿವಿಜತರಂಗಿಣಿಯು
ಶಿವನಂಗಭೂರುಹ ಮೂಲ ಭಾಗದಲಿ ಉ
ದ್ಭವಿಸಿ ಕಂಗೊಳಿಸಿದಳು ಕೃಪಾಳು 3

ಸ್ವಾಂತಸ್ಥ ಮುಖ್ಯ ಪ್ರಾಣಾಂತರಾತ್ಮಕ ಭಗ
ವಂತನಂಘ್ರಿ ಕಮಲ
ಸಂತತ ಸರ್ವತ್ರ ಚಿಂತಿಸುತಿಪ್ಪ ಮ
ಹಾಂತರಿಗೇನಚ್ಚರೀ ವಿಚಾರ 4

ಚಾರು ಚರಿತ ಭೂ
ಸುರವರ ಸನ್ನುತನೇ
ಪರಮ ಪುರುಷ ಜಗನ್ನಾಥ ವಿಠ್ಠಲ ನಿಮ್ಮ
ಪರಿಪರಿ ಮಹಿಮೆ ಎಲ್ಲಾ ತಾ ಬಲ್ಲಾ 5
*******

No comments:

Post a Comment