Friday 27 December 2019

ತೆರಳಿದರು ವೈಕುಂಠ ಪುರ ankita jagannatha vittala narasimha dasa stutih

ಜಗನ್ನಾಥದಾಸರು
ಶ್ರೀನರಸಿಂಹದಾಸರು, ಮಾನವಿ ಮುನಿಪುಂಗವರಾದ ಶ್ರೀ ಜಗನ್ನಾಥದಾಸರ ತಂದೆಯವರು

 ರಾಗ ಕೇದಾರಗೌಳ           ಖಂಡಛಾಪುತಾಳ 

ತೆರಳಿದರು ವೈಕುಂಠಪುರದರಸನ ।
ಚರಣಾಬ್ಜ ಸೇವಿಸಲು ನರಸಿಂಹದಾಸರು ॥ ಪ ॥

ಜವ ಹರುಷದಿಂದ ಪಾರ್ಥಿವ ವರುಷ ಮಾರ್ಗಶಿರ ।
ಅಪರ ಪಕ್ಷದ ಷಷ್ಟಿ ಭೌಮವಾರ ॥
ದಿವದಿ ಪ್ರಾತಃಕಾಲ ಸಮಯದಲಿ ಶ್ರೀಲಕ್ಷ್ಮೀ - ।
ಧವನಂಘ್ರಿಕಮಲ ಧೇನಿಸುತ ಸಂತೋಷದಲಿ ॥ 1 ॥

ವರಹತನಯಾ ತೀರ ಪ್ರಾಚಿ ದಿಗ್ಭಾಗದಲಿ ।
ಪರಮ ವೈಷ್ಣವ ಸುಕೃತ ಭಾಗಿಯೆಂಬ ॥
ಪುರವರದಿ ತತ್ತ್ವ ತತ್ತ್ವೇಶರೊಳು ಲಯವರಿತು ।
ಪರಮಪುರುಷನ ದಿವ್ಯನಾಮಗಳ ಸ್ಮರಿಸುತಲಿ ॥ 2 ॥

ವರಯಜುಃಶ್ಯಾಖ ಹರಿತಸಗೋತ್ರೋದ್ಭವ ಅನಂ - ।
ತರಸನ ಜಠರದಿ ಜನಿಸಿ ಬಂದೂ ॥
ಗುರುವ್ಯಾಸಮುನಿ ಪುರಂದರದಾಸರಂಘ್ರಿಗಳ ।
ಸ್ಮರಿಸುತ ಜಗನ್ನಾಥವಿಠ್ಠಲ ನೊಲಿಮೆಯ ಪಡೆದು ॥ 3 ॥
************


ತೆರಳಿದರು ವೈಕುಂಠ ಪುರದರಸನ
ಚರಣಾಬ್ಜ ಸೇವಿಸಲು ನರಸಿಂಹದಾಸರು ಪ

ಜವಹರುಷದಿಂದ ಪಾರ್ಥಿವ ಮರುಷ ಮಾರ್ಗಶಿರ
ಅಪರ ಪಕ್ಷದ ಪಪ್ಠಿ ಭೌಮವಾರ
ದಿವದಿ ಪ್ರಾತಃಕಾಲ ಸಮಯದಲಿ ಶ್ರೀ ಲಕ್ಷ್ಮೀ
ಕಮಲ ಧೇನಿಸುತ ಸಂತೋಷದಲಿ 1

ವರಹತನಯಾತೀರ ಪ್ರಾಚಿದಿಗ್ಬಾಗದಲಿ
ಸುಕೃತ ಛಾಗಿಯೆಂಬಾ
ಪುರವರದಿ ತತ್ವ ತತ್ವೇಶರೊಳು ಲಯವರಿತು
ಪರಮ ಪುರುಷನ ದಿವ್ಯ ನಾಮಗಳ ಸ್ಮರಿಸುತಲಿ 2

ಭವ ಅನಂ
ತರಸನ ಜಠರದಿ ಜನಿಸಿ ಬಂದೂ
ಪುರಂದರ ದಾಸರಂಘ್ರಿಗಳ
ಸ್ಮರಿಸುತ ಜಗನ್ನಾಥ ವಿಠಲನೊಲುಮೆಯ ಪಡೆದು 3
************

No comments:

Post a Comment