Friday 27 December 2019

ಕರಿಯನೆರಿರೇ ಮುರಾರಿಗೆ ಕರಿಯನೆರಿರೆ ಭರಣ ankita indiresha

ಕರಿಯನೆರಿರೇ ಮುರಾರಿಗೆ ಪ

ಕರಿಯನೆರಿರೆ ಭರಣ ವಸನಗಳಧರಿಸಿ ದೇಹದಿ ಸುರತರುಣಿ ಪೋಲುವರೆ ಅ.ಪ.

ಹಂಸವಾಹನ ಶಿವರಂಶಗಳನು ಕೂಡಿಕಂಸ ಶಾಸ್ತ್ರವ ತ್ರಿವಂಶ ಬೆಳೆಸಿದಾ 1

ಹತ್ತು ರಾತ್ರಿಯಲಿ ಬಂದ ಮತ್ತ ಕಾಮಿನಿಗೊಮ್ಮೆಭೂತ್ಯ ಭೂತಿದ ಗೋಪಿ ಪುತ್ರನ ಪಾಡಿ2

ಕರಿಪುದಸರಾಧ್ವರ ಧನುರ್ದನು ತನ್ನಕರದಿ ಮುಟ್ಟುತ ಮೃತ ತರುಳನ ಕಾದಾ 3

ರಾಮನಾಮದಿ ಭೂಪ ಧಾಮದೊಳಗೆ ಪುಟ್ಟಿಕಾಮಿನಿ ಸಹ ಕೂತ ಪ್ರೇಮ ಪುರುಷಗೆ 4

ಕರಿ ಕರ ಕರದೊಳು ಸುರಭಿ ಕುಸುಮವೆತ್ತಿಪರಮ ಪುರುಷ ವಿಪತ್ ಪರಿಹರಿಸಿದನು 5

ಕತ್ತಿ ಪಿಡಿದು ಕರ ಕತ್ತರಿಸುವೆನೆಂಬೋ-ನ್ಮತ್ತನಾಸ್ತ್ರವ ಕರೆ ಕಿತ್ತು ರಕ್ಷಿಸಿದಾ 6

ಪೇಸಿಯಿಂದಲಿ ಪುಂಸ್ತ್ರೀ ಕೂಸುಗಳನೆ ಮಾಡಿತೋಷಿಸಿದನು ಬದರೀಶ ಮೌನಿಜನು 7

ಇಂಥ ಮಹಿಮೆಗಳಾನಂತ ಮಾಡಿದ ಲಕ್ಷ್ಮೀ-ಕಾಂತಗಬ್ದಾಪತ್ತಿ ಶಾಂತಿ ಮಾಡುವುದೇ 8

ಸುಂದರ ಭೂಷಣಗಳಿಂದ ಶೋಭಿಪ ಬಾಲಇಂದಿರೇಶನ ಕೃಪಾ ಪೊಂದಿ ಸುಖಿಸುತಿರೆಕುಂದಣದಾರತಿ ನಿಂದು ಬೆಳಗಿರೆ 9
**********

No comments:

Post a Comment