Thursday 12 December 2019

ಏಳು ಆರೋಗಣೆಗೆ ಯಾಕೆ ತಡವೊ ankita gopala vittala ELU AAROGANEGE YAAKE TADAVO



Audio by Mrs. Nandini Sripad

ಶ್ರೀ ಗೋಪಾಲದಾಸರ ಕೃತಿ 

 ರಾಗ ಭೌಳಿ         ಖಂಡಛಾಪುತಾಳ 

ಏಳು ಆರೋಗಣೆಗೆ ಯಾಕೆ ತಡವೊ ।
ಆಲಸ್ಯ ಮಾಡದಲೆ ಮೂಲರಾಮಚಂದ್ರ ॥ 1 ॥

ಕುಡಿ ಬಾಳಿದೆಲೆ ಹಾಕಿ ಸಡಗರದಿಂದ ಎಡೆ ಮಾಡಿ ।
ಮಣಿ ಹಾಕಿ ಮುತ್ತಿನ ಶೆಮ್ಯಗಳಿಟ್ಟು ॥
ಮುಡಿಸಿ ದೀಪಗಳ್ಹಚ್ಚಿ ಉದಕ ರಂಗೋಲಿ ಹಾಕಿ ।
ಬಡಿಸಲು ಶ್ರೀದೇವಿ ಬಂದು ನಿಂದಿಹಳು ॥ 1 ॥

ಪುಡಿ ಉಪ್ಪು ಚಟ್ನಿ ಕೋಸಂಬರಿ ಉಪ್ಪಿನಕಾಯಿ ।
ಪಡವಲಕಾಯಿ ಚೆವಳಿ ಕಾಯಿಯು ॥
ಅಡವಿಗುಳ್ಳದ ಪಳಿದ್ಯ ಆಂಬೊಡೆ ಫೇಣಿಯು ।
ಬಡಿಸಲು ಶ್ರೀದೇವಿ ಬಂದು ನಿಂದಿಹಳು ॥ 2 ॥

ಎಣ್ಣೂರಿಗತಿರಸವು ಸಣ್ಣ ಶ್ಯಾವಿಗೆ ಫೇಣಿ ।
ಬೆಣ್ಣೆದೋಸೆ ಹುಗ್ಗಿ ಅನ್ನದಧ್ಯಾನ್ನ ತೀ ॥
ರ್ಥಾನ್ನಗಳನು ಕಾಯಿ ಹಾಲು ಬಡಿಸಲು ।
ಬಣ್ಣಿಸಿ ಶ್ರೀದೇವಿ ಬಂದು ನಿಂತಿಹಳು ॥ 3 ॥

ಗಂಧ ಕಸ್ತೂರಿ ಪುನುಗು ಕರ್ಪೂರದ ವೀಳ್ಯ ।
ಚೆಂದಾಗಿ ಮಡಿಸಿ ಕೈಲಿ ಹಿಡಿದುಕೊಂಡು ॥
ದುಂಡು ಮಲ್ಲಿಗೆ ಹೂವ ಅಂದವಾಗಿ ಕಟ್ಟಿ ।
ರಂಭೆ ಜಾನಕಿದೇವಿ ಹಿಡಿದು ನಿಂತಿಹಳು ॥ 4 ॥

ನಿತ್ಯ ತೃಪ್ತನೆ ನಿನ್ನ ಉದರದೊಳಿಹ ।
ಉತ್ತಮ ಪುರುಷನೆ ಉಣಲು ಏಳು ॥
ಮುಕ್ತಿದಾಯಕ ನಮ್ಮ ಗೋಪಾಲವಿಠ್ಠಲ ।
ಭಕ್ತರ ಬಿನ್ನಪವ ನೀ ಕೇಳಿ ಬಾರೋ ॥ 5 ॥
********



No comments:

Post a Comment