Friday 27 December 2019

ನಿನ್ನ ನಂಬಿದ ನರಗೆ ಅನ್ಯರಾಶ್ರಯ ankita venugopala vittala vijaya dasa stutih

ನಿನ್ನ ನಂಬಿದ ನರಗೆ ಅನ್ಯರಾಶ್ರಯವೇಕೋಚನ್ನ ಗುರು ವಿಜಯರಾಯ
ಬನ್ನ ಬಡುವೆನೊ ಜೀಯ ಘನ್ನ ಭವದೊಳು ಶಿಲ್ಕಿಇನ್ನು ಕಡೆಗ್ಹಾಕೋ ಬ್ಯಾಗ ಈಗ ||pa||

ಸಪ್ತ ದ್ವೀಪಾಧಿಪನ ಪುತ್ರನೊಬ್ಬನ ಪರರಭೃತ್ಯನಾಗುವುದುಚಿತವೆ
ವತ್ತಿ ಸುರನದಿ ನರನ ಸುತ್ತ ಪರಿಯಲು ನೀರಿಗಾರ್ತನಾಗುವುದುಚಿತವೆ
ಮತ್ತೆ ಸುರಧೇನುವಿನ ಹತ್ತಿಲಿರುವ ಯಿನ್ನುಹಸ್ತು ಬಳಲುವುದುಚಿತವೆ
ನಿತ್ಯ ಸುಖದಾರಿ ವಿಚಿತ್ರ ನೀ ತೋರೆ ನಾಹಸ್ತ ನರಗೊಡ್ಡುವುದು ಯತ್ನ ಉಚಿತವೆ ಗುರುವೆ ||1||

ಕ್ಷೀರವಾರಿಧಿ ಸೇರಿ ನೀರ ಮಜ್ಜಿಗೆಗಾಗಿಚೀರಿ ವರಲುವುದುಚಿತವೆ |
ನೂರಾರು ವಸನದ ಹೇರು ಮನೆಯೊಳಗಿರಲುಕೋರಿ ವುಡುವುದು ವುಚಿತವೆ |
ವಾರವಾರಕೆ ಹರಿಯ ತೋರುವರನ ಬಿಟ್ಟುಕ್ರೂರ
ವನ ಸೇವಿಸುವ ದಾರಿಗುಚಿತವೊ ಗುರುವೆ ||2||

ಸಾಕಿ ಸಲಹೆಂದು ಅತಿ ವ್ಯಾಕುಲದಿ ಬಂದವನನೂಕಿ ಬಿಡುವುದುಚಿತವೆ |
ಬೇಕಾದ ವರವು ನೀ ಲೋಕರಿಗೆ ಕೊಡುವೆನ್ನಕಾಕುಗೊಳಿಸವುದುಚಿತವೆ |
ಏಕ ಬುದ್ಧಿಯಿನಿತ್ತು ಜೋಕೆ ಮಾಡೆ ಮನ-ನೇಕ ಮಾಡುವದುಚಿತವೆ |ಶ್ರೀ
ಕಾಂತ ವೇಣುಗೋಪಾಲ ವಿಠಲ ನಿನ್ನವಾಕು ಮನ್ನಿಸಲು ನಾ ಕೆಡುವದುಚಿತವೆ ಗುರುವೆ ||3||
*******

No comments:

Post a Comment