Friday 27 December 2019

ಕಂಗಳಿಗೆ ಹಬ್ಬವಾಯಿತಯ್ಯ ankita shree krishna purandara dasa stutih

ಕಂಗಳಿಗೆ ಹಬ್ಬವಾಯಿತಯ್ಯಾ..
ಮಂಗಳಾತ್ಮಕ ಪುರಂದರ ದಾಸರನು ಕಂಡು...||

ಸಕಲ ತೀರ್ಥ ಯಾತ್ರೆ ಮಾಡಿದ ಫಲವು
ಸಕಲ ಸತ್ಕರ್ಮ ಸಾಧಿಸಿದ ಫಲವು
ಭಕುತಿಯಿಂ ಭಾಗಿರಥಿ ಮಜ್ಜನದ ಫಲವು
ರುಕುಮಿಣಿ ಪತಿಯ ಪದಭಜಕರನ್ನು ಕಂಡು...|| ೧ ||

ಇವನ ನರನೆಂದವರು ನರಕದಲಿ ಬೀಳುವರು
ಕವಿಜನರು ಒಪ್ಪಿ ಕೈ ಹೊಡೆದು ಹೇಳಿದರು
ಅವನಿಯೊಳು ಅತಿ ದುರ್ಲಭಾವು ನಂದಗೋಪನ
ಕುವರನಿದ್ದೆಡೆ ವೈಕುಂಠ ವೆಂಬುವರ ಕಂಡು..... || ೨ ||

ಧನ್ಯನಾದೆನು ನಾನೂ ಮನುಜ ಜನ್ಮದಿ ಪುಟ್ಟಿ
ಮಾನ್ಯನಾದೆನು ಇನ್ನು ಈ ಜಗದೊಳಗೆ
ಪನ್ನಂಗ ಶಯನ ಶ್ರೀ ಕೃಷ್ಣನ ದಾಸರನು
ಚೆನ್ನಾಗಿ ಸ್ಮರಿಸಿ ಪಾವನನಾದೆನಿಂದು.... || ೩ ||
*********

ಕಂಗಳಿಗೆ ಹಬ್ಬವಾಯಿತಯ್ಯಮಂಗಳಾತ್ಮಕ ಪುರಂದರದಾಸರನು ಕಂಡು ||pa||

ಸಕಲ ತೀರ್ಥಕ್ಷೇತ್ರ ಯಾತ್ರೆ ಮಾಡಿದ ಫಲವುಸಕಲ
ಸತ್ಕರ್ಮ ಸಾಧಿಸಿದ ಫಲವುಭಕುತಿಯಿಂ ಭಾಗೀರಥೀ ಮಜ್ಜನದ
ಫಲವುರುಕುಮಿಣಿ ಪತಿಯ ಪದ ಭಕುತರನು ಕಂಡು ||1||

ಇವರ ನರರೆಂದವರು ನರಕದಲಿ ಬೀಳುವರುಕವಿಜನರು
ಒಪ್ಪಿ ಕೈಹೊಡೆದು ಹೇಳಿರಲುಅವನಿಯೊಳಗತಿ ದುರ್ಲಭವು
ನಂದಗೋಪನ್ನಕುವರನಿದ್ದೆಡೆಯ ವೈಕುಂಠವೆಂಬುವರ ಕಂಡು |2||

ಧನ್ಯನಾದೆನು ನಾನು ಮನುಜನ್ಮದಿ ಪುಟ್ಟಿಮಾನ್ಯನಾದೆನು
ಇನ್ನು ಈ ಜಗದೊಳಗೆಪನ್ನಂಗಶಯನ ಶ್ರೀಕೃಷ್ಣನ
ದಾಸರನುಚೆನ್ನಾಗಿ ಸ್ಮರಿಸಿ ಪಾವನ್ನನಾದೆನಿಂದು ||3||
********

No comments:

Post a Comment