Wednesday 8 December 2021

ನೆರೆ ನಂಬಿ ಪಡೆಯಿರೋ ಸ್ಥಿರವಾದ ಕರುಣವ ankita shrresha keshava vittala NERE NAMBI PADEYIRO STHIRAVAADA KARUNAVA



ನೆರೆನಂಬಿ ಪಡೆಯಿರೋ – ಸ್ಥಿರವಾದ ಕರುಣವ
ಗುರುರಾಘವೇಂದ್ರರಾಯರ ಚಾರುಚರಣವ            || ಪ ||

ವರದಂಷ್ಟ್ರಜಲಸುತ್ಸರಿತ ತೀರದಿ ನಿಂದು
ಶರಣರ ದುರಿತವ ತರಿದು ಕಾಯ್ವನೆಂದು        || ೧ ||

ಕರವ ಮುಗಿದು ಬಂದ ಪರಮ ಪಾಮರರಾ
ಪೊರೆವ ಕರುಣ ಕೃಪಾಕರಯತಿವರರ                || ೨ ||

ಶ್ರೀಶಕೇಶವವಿಠ್ಠಲೇಶನ ದೂತ
ರಾಸೆ ಪೂರೈಸುವ ಗುಣನಿಧಿ ಸತತ            || ೩ ||
***

No comments:

Post a Comment