Sunday 5 December 2021

ಸತತ ಪಾಲಿಸೋ ಎನ್ನ ಯತಿ ರಾಘವೇಂದ್ರಾ ankita shyamasundara SATATA PAALISO ENNA YATI RAGHAVENDRA



ಈ ಕೃತಿಯಲ್ಲಿ ಶ್ರೀ ರಾಯರು ಶ್ರೀ ಪ್ರಹ್ಲಾದಾವತಾರಿಗಳೆಂದು ಸ್ಪಷ್ಟ ಪಡಿಸಿದ್ದಾರೆ. 


ಸತತ ಪಾಲಿಸೋ ಯೆನ್ನ ।
ಯತಿ ರಾಘವೇಂದ್ರ ।
ಪತಿತ ಪಾವನ ಪಾವನ ।
ಸುತ ಮತಾಂಬುಧಿ ಚಂದ್ರ ।। ಪಲ್ಲವಿ ।।

ನಂಬಿದೆನೋ ನಿನ್ನ ಚರ-
ಣಾಂಬುಜವ ಮನ್ಮನದ ।
ಹಂಬಲವ ಪೂರೈಸೋ 
ಬೆಂಬಿಡದಲೆ ।
ಕುಂಭಿಣೀಸುರ ನಿಕು-
ರುಂಬ ವಂದಿತ ಜಿತ ।
ಶಂಬರಾಂತಕ ಶಾತ-
ಕುಂಭ ಕಶ್ಯಪ ತನಯ ।। ಚರಣ ।।

ಕ್ಷೋಣಿಯೊಳು ನೀ ಕುಂಭ-
ಕೋಣ ಕ್ಷೇತ್ರದಿ ಜನಿಸಿ ।
ವೀಣಾ ವೇಂ-
ಕಟ ಅಭಿದಾನದಿಂದ ।
ಸಾನುರಾಗದಿ ದ್ವಿಜನ 
ಪ್ರಾಣ ಉಳುಹಿದ ಮಹಿಮ ।
ಯೇನೆಂದು ಬಣ್ಣಿಸಲಿ
ಜ್ಞಾನಿಕುಲ ತಿಲಕ ।। ಚರಣ ।।
ಮಂದಮತಿಗಳ ಸಂಗ-
ದಿಂದ ನಿನ್ನಯ ಚರಣ ।
ಇಂದಿನ ತನಕ ನಾ 
ಪೊಂದಲಿಲ್ಲ ।
ಕುಂದು ಯೆಣಿಸದೆ ಕಾಯೋ 
ಕಂದರ್ಪ ಪಿತ ಶ್ಯಾಮ ।
ಸುಂದರನ ದಾಸ ಕ-
ರ್ಮಂದಿ ಕುಲವರಿಯ ।। ಚರಣ ।।
***

ವಿವರಣೆ-ಆಚಾರ್ಯ ನಾಗರಾಜು ಹಾವೇರಿ,ಗುರು ವಿಜಯ ಪ್ರತಿಷ್ಠಾನ

ಕುಂಭಿಣೀಸುರ = ಭೂಸುರ
ನಿಕುರುಂಬ = ಸಮೂಹ
ಶಾತಕುಂಭ = ಬಂಗಾರ
ಶಾತಕುಂಭಕಶ್ಯಪ = ಹಿರಣ್ಯಕಶಿಪು 
ಶಾತಕುಂಭಕಶ್ಯಪ ತನಯ = ಹಿರಣ್ಯಕಶಿಪುವಿನ ಮಗ ಪ್ರಹ್ಲಾದ
( ಕುಂಭಿಣೀಸುರ = ಭೂಸುರ; ನಿಕುರುಂಬ = ಸಮೂಹ; ಶಾತಕುಂಭ = ಬಂಗಾರ; ಶಾತಕುಂಭಕಶ್ಯಪ = ಹಿರಣ್ಯಕಶಿಪು; ಶಾತಕುಂಭಕಶ್ಯಪ ತನಯ = ಹಿರಣ್ಯಕಶಿಪುವಿನ ಮಗ ಪ್ರಹ್ಲಾದ )
ನಮ್ಮ ನಿಮ್ಮೆಲ್ಲರಿಗೂ ರಾಯರೇ ಗತಿಯು ನಮಗೆ ಶ್ರೀ ರಾಘವೇಂದ್ರ ಗುರುರಾಯರೇ ಗತಿಯು!!!!!
ನಮ್ಮ ಪ್ರೀತಿಯ ಗುರುಗಳಾದ ಶ್ರೀ ಶ್ಯಾಮಸುಂದರ ದಾಸರ ಕೃತಿ ಸ್ಮರಣೆ ಮಾಡಿ
***

ಸತತ ಪಾಲಿಸೊ ಎನ್ನ ಯತಿ ರಾಘವೇಂದ್ರಾ |
ಪತಿತ ಪಾವನ ಪವನ ಸುತ ಮತಾಂಬುಧಿ ಚಂದ್ರಾ | ಪ. |

ಕ್ಷೋಣೀಯೊಳು ನಿ ಕುಂಭಕೋಣ ಕ್ಷೇತ್ರದಿ ಜನಿಸಿ
ವೀಣಾವೆಂಕಟ ಅಭಿದಾನಾದಿಂದಾ
ಸಾನುರಾಗದಿ ದ್ವಿಜನ ಪ್ರಾಣ ಉಳಿಸಿದ ಮಹಿಮೆ
ಏನೆಂದು ಬಣ್ಣಿಸಲಿ ಜ್ಞಾನಿ ಕುಲತಿಲಕಾ | ೧ |

ನಂಬಿದೆನೋ ನಿನ್ನ ಚರಣಾ೦ಬುಜವ ಮನ್ಮನದ
ಹಂಬಲ ಪೂರೈಸೋ ಬೆಂಬಿಡದಲೆ
ಕುಂಭಿಣಿ ಸುರ ನಿಕುರುಂಬ ವಂದಿತ ಜಿತ
ಶಂಭರಾಂತಕ ಶಾತ ಕುಂಭ ಕಶ್ಯಪ ತನಯಾ | ೨ |

ಮಂದಮತಿಗಳ ಸಂಗದಿಂದ ನಿನ್ನಯ ಚರಣ
ಇಂದಿನ ತನಕ ನಾ ಪೊಂದಲಿಲ್ಲಾ
ಕುಂದು ಎಣಿಸದೇ ಕಾಯೋ ಕಂದರ್ಪಪಿತ
ಶ್ಯಾಮ ಸುಂದರ ದಾಸ ಕರ್ಮಂದಿಗಳ ಕುಲವರ್ಯಾ | ೩ |
***

satata paliso enna yati raghavendra |
patita pavana pavana suta matambudhi chandra | pa |

kshoniyolu ne kumbakona kshetradi janisi
veena venkata abidanadinda
sanuragadi dvijana prana ulisida mahime
enendu bannisali jñāni kula tilaka | 1 |

nambideno ninna charanambujava manmanada
hambala puraiso bembidadale
kumbini sura nikurumba vandita jita
sambarantaka shata kumbha khasyapa tanaya | 2 |

mandamatigala sangadinda ninnaya charana
indina tanaka na pondalilla
kundu yenisade kayo kandarpapita
shyama sundara dasa karmandigala kulavarya | 3 |
***


ರಾಗ : ಕಾಂಬೋಧಿ  ತಾಳ : ಝಂಪೆ (raga tala may differ in audio)


ಸತತ ಪಾಲಿಸೊ ಎನ್ನ ಯತಿ  ರಾಘವೇಂದ್ರಾ |

ಪತಿತ ಪಾವನ ಪವನಸುತ ಮತಾಂಬುಧಿ ಚಂದ್ರಾ || ಅ.ಪ. ||


ಕ್ಷೋಣೀಯೊಳಗೆ ಕುಂಭಕೋಣ ಕ್ಷೇತ್ರದಿ ಮೆರೆದೆ |

ವೀಣಾವೆಂಕಟ ಅಭಿದಾನಾದಿಂದಾ |
ಸಾನುರಾಗದಿ ದ್ವಿಜನ ಪ್ರಾಣ ಉಳಿಸಿದ ಮಹಿಮೆ |
ಏನೆಂದು ಬಣ್ಣಿಸಲಿ ಜ್ಞಾನಿಗಳ ಕುಲತಿಲಕಾ | ೧ |

ನಂಬಿದೆನೋ ನಿನ್ನ ಪಾದಾಂಬುಜವ ಮನ್ಮನದಿ |

ಹಂಬಲ ಪೂರೈಸೋ ಬೆಂಬಿಡದಲೆ |
ಕುಂಭಿಣಿ ಸುರ ನಿಕುರುಂಬವಂದಿತ ಜಿತ |
ಶಂಭರಾಂತಕ ಶಾತ ಕುಂಭ ಕಶ್ಯಪ ತನಯಾ | ೨ |

ಮಂದಮತಿಗಳ ಸಂಗದಿಂದ ನಿನ್ನ ಪಾದ |

ಇಂದಿನತನಕ ನಾ ಪೊಂದಲಿಲ್ಲಾ |
ಕುಂದು ಎಣಿಸದೇ  ಕಾಯೋ ಕಂದರ್ಪ ಪಿತ |
ಶ್ಯಾಮ ಸುಂದರ ದಾಸ ಕರ್ಮಂದಿಗಳ ಕುಲವರ್ಯಾ | ೩ |
******

ಸತತ ಪಾಲಿಸೋ ಎನ್ನ | ಯತಿ ರಾಘವೇಂದ್ರ |
ಪತಿತ ಪಾವನ ಪವನ | ಸುತಮತಾಂಬುಧಿ ಚಂದ್ರ ಪ

ನಂಬಿದೆನು ನಿನ್ನ ಚರಣಾಂಬುಜವ ಮನ್ಮನದ
ಹಂಬಲವ ಪೂರೈಸೊ ಬೆಂಬಿಡದಲೆ ||
ಕುಂಭಿಣೀಸುರ ನಿಕುರುಂಭ ವಂದಿತ ಜಿತ
ಶಂಬರಾಂತಕ ಶಾತಕುಂಭ ಕಶ್ಯಪ ತನಯ 1

ಕ್ಷೋಣಿಯೊಳು ನೀ ಕುಂಭಕೋಣ ಕ್ಷೇತ್ರದಿ ಜನಿಸಿ
ವೀಣ ವೆಂಕಟ ಅಭಿದಾನದಿಂದ
ಸಾನುರಾಗದಿ ದ್ವಿಜನ ಪ್ರಾಣ ಉಳುಹಿದ ಮಹಿಮೆ |
ಏನೆಂದು ಬಣ್ಣಿಸಲಿ e್ಞÁನಿ ಕುಲತಿಲಕ2

ಮಂದಮತಿಗಳ ಸಂಗದಿಂದ ನಿನ್ನಯ ಚರಣ
ಇಂದಿನ ತನಕ ನಾ ಪೊಂದಲಿಲ್ಲ
ಕುಂದು ಎಣಿಸದೆ ಕಾಯೊ ಕಂದರ್ಪಪಿತ ಶಾಮ

ಸುಂದರನ ದಾಸಕರ್ಮಂದಿ ಕುಲವರ್ಯ 3
**********

No comments:

Post a Comment