Saturday 4 December 2021

ವಾರಿಜನಾಭನ ಕರುಣವೆ ಸ್ಥಿರ ಸಂಸಾರ ಎರವು ankita prasannavenkata VAARIJANAABHANE KARUNAVE STIRA SAMSAARYERAVU



by ಪ್ರಸನ್ನವೆಂಕಟದಾಸರು


ವಾರಿಜನಾಭನ ಕರುಣವೆ ಸ್ಥಿರ ಸಂಸಾರ ಎರವು ಕೇಳಾತ್ಮ |ಪ|
ಜಾರುತದಾಯುಷ್ಯ ದೂರದ ಮುಕುತಿಗೆ ದಾರಿ ಸರಿಯು ಕೇಳಾತ್ಮ |ಅಪ|

ಕೆರೆಯ ಕಟ್ಟಿಸು ಹೂದೋಟವನ್ಹಾಕಿಸು ಸೆರೆಯ ಬಿಡಿಸು ಪುಣ್ಯಾತ್ಮ |
ಅರಿಯದೆ ಮನೆಗೆ ಬಂದವರಿಗಶನವಿತ್ತು ಪರಮ ಪದವಿ ಪಡೆಯಾತ್ಮ |೧|

ಆನೆ ಕುದುರೆ ಒಂಟೆ ಸೈನ್ಯ ಭಂಡಾರವ ಏನು ಪಡೆದರೇನು ಆತ್ಮ|
ನಾನಾ ವಿಧದಿಂದ ಅಳಿದುಳಿದರೆ ಮುಂದೆ ಹಾನಿ ತಪ್ಪದು ಕೇಳಾತ್ಮ |೨|

ಲೆತ್ತ ಪಗಡೆ ಚದುರಂಗ ಜೂಜಾಟವ ಮತ್ತಾಡಿ ಕೆಡಬೇಡ ಆತ್ಮ |
ಭಕ್ತಿಯಲಿ ಪುರಂದರ ವಿಠಲನ ನೆನೆ ಮುಕ್ತಿಯ ಪಡೆವೆ ಕೇಳಾತ್ಮ |೩|
***
ರಾಗ ಬಿಲಹರಿ ಛಾಪುತಾಳ (raga tala may differ in audio)

vArijanABana karuNave sthira saMsAra eravu kELAtma |pa|
jArutadAyuShya dUrada mukutige dAri sariyu kELAtma |apa|
 
kereya kaTTisu hUdOTavanhAkisu sereya biDisu puNyAtma |
ariyade manege baMdavarigaSanavittu parama padavi paDeyAtma |1|
 
Ane kudure oMTe sainya BaMDArava Enu paDedarEnu Atma|
nAnA vidhadiMda aLiduLidare muMde hAni tappadu kELAtma |2|
 
letta pagaDe caduraMga jUjATava mattADi keDabEDa Atma |
Baktiyali puraMdara viThalana nene muktiya paDeve kELAtma |3|
***

pallavi

vArijanAbhana karuNave sthira samsAra eravu kELAtma

anupallavi

jArutadAyuSya dUrada mukutige dAri sathiyu kELAtma

caraNam 1

kereya kaTTisu pUdODva hAkisu sereya biDisu punyAtma
ariyade manege bandavaringashanavittu parama padavi paDeyAtma

caraNam 2

sati sutaremba Aseya biDu avarinda hitavAgadu kaNDya Atma
matikeTTu keDabEDa maraNa tappadu munde gati yAvudu kaNDya Atma

caraNam 3

Ane kudure oNTe sainya bhANDArava Enu paDedarEnu Atma
nAnA bageyinda aLiduLidare munde hAni tappadu kaNDya Atma

caraNam 4

eravina sirigubbi mai marevare nIra karedaruNTe beNNe Atma
uragana heDeya neraLa sErida karpe sthiravendu bagevare Atma

caraNam 5

letta pagaDe caturanga jUjADava mattADi keDa bEDa Atma
bhaktiyali purandara viTTalana neneyalu mukti paDEve kaNDya Atma
***

ವಾರಿಜನಾಭನ ಕರುಣವೆ ಸ್ಥಿರ, ಸಂಸಾರ ಎರವು ಕೇಳಾತ್ಮ ||ಪ||
ಜಾರುತದಾಯುಷ್ಯ ದೂರದ ಮುಕುತಿಗೆ ದಾರಿ ಸಥಿಯು ಕೇಳಾತ್ಮ ||ಅ||

ಕೆರೆಯ ಕಟ್ಟಿಸು ಪೂದೋಟವ ಹಾಕಿಸು, ಸೆರೆಯ ಬಿಡಿಸು ಪುಣ್ಯಾತ್ಮ
ಅರಿಯದೆ ಮನೆಗೆ ಬಂದವರಿಂಗಶನವಿತ್ತು, ಪರಮ ಪದವಿ ಪಡೆಯಾತ್ಮ ||

ಸತಿ ಸುತರೆಂಬ ಆಸೆಯ ಬಿಡು, ಅವರಿಂದ ಹಿತವಾಗದು, ಕಂಡ್ಯ ಆತ್ಮ
ಮತಿಕೆಟ್ಟು ಕೆಡಬೇಡ ಮರಣ ತಪ್ಪದು, ಮುಂದೆ ಗತಿ ಯಾವುದು, ಕಂಡ್ಯ ಆತ್ಮ ||

ಆನೆ ಕುದುರೆ ಒಂಟೆ ಸೈನ್ಯ ಭಾಂಡಾರವ ಏನು ಪಡೆದರೇನು, ಆತ್ಮ
ನಾನಾ ಬಗೆಯಿಂದ ಅಳಿದುಳಿದರೆ ಮುಂದೆ ಹಾನಿ ತಪ್ಪದು, ಕಂಡ್ಯ ಆತ್ಮ ||

ಎರವಿನ ಸಿರಿಗುಬ್ಬಿ ಮೈಮರೆವರೆ, ನೀರ ಕಡೆದರುಂಟೆ ಬೆಣ್ಣೆ, ಆತ್ಮ
ಉರಗನ ಹೆಡೆಯ ನೆರಳ ಸೇರಿದ ಕಪ್ಪೆ ಸ್ಥಿರವೆಂದು ಬಗೆವರೆ, ಆತ್ಮ ||

ಲೆತ್ತ ಪಗಡೆ ಚತುರಂಗ ಜೂಜಾಡವ ಮತ್ತಾಡಿ ಕೆಡಬೇಡ, ಆತ್ಮ
ಭಕ್ತಿಯಲಿ ಪುರಂದರವಿಠಲನ ನೆನೆಯಲು ಮುಕ್ತಿ ಪಡೆವೆ, ಕಂಡ್ಯ ಆತ್ಮ || 
*********

ವಾರಿಜನಾಭನ ಕರುಣವೆ ಸ್ಥಿರ ಸಂಸಾರ್ಯೆರವು ಕೇಳಾತ್ಮಜಾರುತದಾಯು ದೂರದ ಮುಕುತಿಯದಾರಿಯ ಪಾಥೇಯ್ಯೆಲ್ಲಾತ್ಮ ಪ.

ಧರ್ಮದ ಸರಕಿಲ್ಲದವನೆಂದು ಬೇಗ್ಯಮಧರ್ಮ ಭಟರು ಬಂದರಲ್ಲೊಚರ್ಮದ ಮನೆ ಬಿಡಿಸಿದರು ಮುಟ್ಟಲು ನೋವಕರ್ಮಯಾತನೆ ಕೊಟ್ಟರಲ್ಲೊಹಮ್ರ್ಯನಿಕೇತನ ವೃತ್ತಿಕ್ಷೇತ್ರವನು ಅಧರ್ಮಿಗಳಗಲಿಪರಲ್ಲೊಮರ್ಮವರಿತು ತ್ರಾಟಿಸುವಾಗ ಶ್ರೀವಿಶ್ವಕರ್ಮನ ಪೂಜೆ ಹೋಯಿತೆಲ್ಲೊ 1

ಹೆಡಗೈಯಕಟ್ಟಿಪರಿಘದೊಳು ಬಡಿವಾಗಮಡದಿ ಮಕ್ಕಳ ಸಹಾಯವೆಲ್ಲೊಒಡೆಯ ದಮ್ಮಯ್ಯ ನಮ್ಮಯ್ಯನೆಂದರೆಕಾಲಹಿಡಿದರೆ ಕೊಡಹಿದರಲ್ಲೊಸುಡುವ ಮಳಲು ಹುಡಿ ಕಲ್ಮುಳ್ಳೊಳೆಳೆವಾಗಹಿಡದೇಜಿ ಕೊಂಬುಕಾಳೆಲ್ಲೊಪೊಡವಿಲಿ ಬಂದಾಗ ಹರಿಸೇವೆ ಮಾಡದೆಕಡುಹುಂಟಾದರೆ ತೋರದೆಲ್ಲೊ 2

ಕೀವು ರುಧಿರವಿಟ್ಟ ಕುಂಡದಿ ಮುಣುಗುವಾಗ್ಹ್ಯಾವಿನ ಮಾತೇನಾಯಿತಣ್ಣಸಾವುತೀನವ್ವಪ್ಪಾ ಮೊರೆಯ ಕೇಳೆಂದರೆಆವಾಗಬಾಧೆ ಕಾಣಣ್ಣಆವೈವಸ್ವತದಂಡ ಕೊಟ್ಟು ಬೊಗಳೆಂಬಾಗಚಾರ್ವಾಕತನವೆಲ್ಲಣ್ಣಆ ವಾಸುದೇವನ ಭಟಸಂಗ ನಿನಗೀಗ ವೈರ ಆಗೆಲ್ಲಿದಣ್ಣ 3

ನಾಲಿಗೊಣಗಿ ನೀರು ಕೂಳೆಂದು ಅಳುವಾಗಹಾಲ ಶಾಲ್ಯೋದನವೆಲ್ಲೊಮ್ಯಾಲೆ ಮ್ಯಾಲ್ವೈತರಣಿ ಸ್ನಾನವ ಮಾಡುವಕಾಲಕೆ ಅಭ್ಯಂಗನವೆಲ್ಲೊಕಾಲನ ದೂತರ್ಗೆ ಕೊಟ್ಟುಳಿವೆನೆಂದರೆಹೂಳಿದ ಧನ ದೂರಾಯಿತಲ್ಲೊಕಾಲಕಾಲಕೆ ದ್ವಿಜಪಂಕ್ತಿಭೋಜನಸುಖವ್ಯಾಳೆ ತಪ್ಪಿತನ್ನವೆಲ್ಲೊ 4

ಕಷ್ಟಿಸಿ ಬಳಲುವೆ ಹಾಹಾಯೆಂದಳಲುವೆಇಷ್ಟನೆಂಟರು ಹೋದರೆತ್ತಮುಷ್ಟಿಕುಠಾರಪ್ರಹಾರನೋಡುನಿನ್ನವರಿಷ್ಟತನವು ನಿಂತಿತೆತ್ತಶಿಷ್ಟರ ನೋಡದೆ ಸತ್ಕಾರ ಮಾಡದೆನಿಷ್ಠುರ ನುಡಿದೆ ಪ್ರಮತ್ತಕೃಷ್ಣ ನಮೊ ಎಂದು ಕಡೆಗಾಣಲರಿಯೆ ಎಳ್ಳಷ್ಟು ಪುಣ್ಯವ ಕಾಣೆನೆತ್ತ 5

ಕಂಗೆಟ್ಟು ತಕ್ರನ್ನೆ ಕಾಸಿ ಸೀಸ್ಯೆರೆವಾಗಅಂಗಣದ ಪಶು ಬಹುದೂರಕೆಂಗೆಂಡಗಂಭವಪ್ಪಿಸುವರು ನಿನ್ನ ಪರಾಂಗನೆಭೋಗಿಚದುರಅಂಗ ಶೃಂಗಾರದ ಕೊನಬುಗಾರ ನಿನಗ್ಹಿಂಗುವದೆ ಯಮದ್ವಾರಮಂಗಳ ಮಹಿಮ ಮುಕುಂದ ಮುರಾರಿ ಶ್ರೀರಂಗನ ಭಕುತಿವಿದೂರ 6

ಸುಟ್ಟರೆ ಹಿಡಿಬೂದಿ ಕೆಟ್ಟರೆ ಕ್ರಿಮಿಕಾಯಇಟ್ಟರಿರದು ವಾಯುವಿರದೆಹುಟ್ಟಿ ಸುಜನ್ಮದಿ ಜಾಣರಾಗದೆಬುಧರಟ್ಟುವರೆ ದಿವಸ ಬರಿದೆಇಟ್ಟಣಿಸಿದ ಭವಗತ ಸುಖದು:ಖವುಂಡುಟ್ಟು ರಾಮನ ಮನವಿರದೆಕಟ್ಟಕಡೆಲಿ ನರಕವನುಂಬೋದುಚಿತಲ್ಲದಿಟ್ಟನಾಗು ಮಾಯೆಯಜರಿದು7

ನಿತ್ಯನೈಮಿತ್ಯಕಾಮ್ಯಾದಿ ಸತ್ಕರ್ಮವಮತ್ತೆ ತಿಳಿದು ನಡೆ ಆತ್ಮಹತ್ಯವಸತ್ಯ ಅನ್ಯವಧೂಜನಸಖ್ಯಪರವಿತ್ತದಂಜಿಕೆ ಇರಲ್ಯಾತ್ಮಕರ್ತಮೂರವತಾರಿ ಪೂರ್ಣ ಬೋಧಾಚಾರ್ಯರಭೃತ್ಯನಾಗಿ ಬಾಳೊ ಆತ್ಮಎತ್ತೆತ್ತ ನೋಡಲು ಬೆನ್ನಬಿಡದೆಕಾವಪ್ರತ್ಯಕ್ಷನಾಗಿ ಪರಮಾತ್ಮ 8

ಮಂಗಳಾತ್ಮರಿಗೆಅಹರ್ನಿಶಿಶ್ರೀವರಅಂಗಜಜನಕನೆಚ್ಚರಿಕೆಸಂಗಡಿಸಿದ ವಿಷಯಂಗಳಿದ್ದರೇನುತಂಗಳ ಅನ್ನದೋಕರಿಕೆಹಿಂಗದೆ ವರಸಂಗ ಮಾಡಿದರೊಯಿವರುಮಂಗಳಾತ್ಮಕನಿದ್ದ ಪುರಕೆಬಂಗಾರ ಮನೆಯ ಪ್ರಸನ್ವೆಂಕಟೇಶನಡಿಂಗರರಿಗೆ ನರ್ಕಸರ್ಕೆ 9
***

No comments:

Post a Comment