Wednesday 16 October 2019

ಕಾವೇರಿ ತ್ರಿಭುವನಕಾಯೆ ಸುರಮುನಿಗೇಯೆ ankita vijaya vittala

ಕಾವೇರಿ ತ್ರಿಭುವನಕಾಯೆ | ಸುರಮುನಿಗೇಯೆ |
ಕಾವೇರಿ | ಆವಾವ ಜನುಮಕೆ ಬಿಡದೆ ಎನ್ನನು ಕಾಯೆ ಪ

ಅಜನನಂದನೆ ಚಂದ್ರವದಗೆ | ಚತುರಮಯೆ |
ಸುಜನರಿಗಾನಂದ ಸದಗೆ | ಧವಳಕಾಯೆ |
ಭಜಿಸಿ ಬೇಡುವೆ ನಿನಗಿದನೆ |
ಸೃಜಿಸಿ ಕೊಡುವುದು |
ತ್ರಿಜಗದೊಳಗೆ ಹರಿ |
ನಿಜ ಭಕ್ತರಪಾದ | ರಜವಾಗಿ ಯಿಪ್ಪ ಸ |
ಹಜ ಮತಿಯನುದಿನ | ಕುಜನ ನಿವಾರೆ 1

ಕಲಿನಾಶ ಕಾರುಣ್ಯ ನಿಧಿಯೆ | ನಿರ್ಮಳಶೀಲೆ |
ಕಲಕಾಲಾ ಸುಜ್ಞಾನಾಂಬುಧಿಯೆ |
ತಲೆವಾಗಿ ನಮಿಸುವೆ |
ಹಲವು ಜನ್ಮಂಗಳ | ಒಳಗೊಳಗೆ ಬಿದ್ದು |
ಹಲಬುತಿಪ್ಪ ವ್ಯಾ |
ಕುಲವನು ಕಳೆದು ನಿ |
ಶ್ಚಲ ಮತದೊಳಗಿಡು 2

ನಿತ್ಯ ಉತ್ತಮ ಗುಣಸಮುದ್ರೇ |
ಸಿಂಹಜೆ ಮಾರುದೃತೆ ಎನಿಪ ಲೋಪಾಮುದ್ರೆ |
ಕವೇರಕನ್ಯೆ ......ಗಿತ್ತ ಪೊಳೆವ ಸೂಭದ್ರೆ |
ಸತ್ಯ ಸಂಕಲ್ಪ ಶ್ರೀ ವಿಜಯವಿಠ್ಠಲನ್ನ ಭೃತ್ಯನೆನೆಸಿಕೊಂಡು
ಸ್ರೌತ್ಯದಿಂದಲಿ ಬಲು |
ನೃತ್ಯಮಾಡುವ ಸಂ |ಪತ್ತನೆ ಕರುಣಿಸು 3
**********

No comments:

Post a Comment