Wednesday, 16 October 2019

ಕೂಗಿತು ತಾಮ್ರದ ಚೂಡ ಪರ ಇಲ್ಲ್ಲೆಂದು ankita vijaya vittala

ಕೂಗಿತು ತಾಮ್ರದ ಚೂಡ

ಕ್ಷೀರಸಾಗರಶಯನನಲ್ಲದಿಲ್ಲಹ ಪರ ಇಲ್ಲೆಂದು ll ಪ ll


ಪಕ್ಕಗಳೆರಡು ಚಪ್ಪರಿಸಿ ಡಂಗುರವ ಹೊಯ್ಯೆ

ಸೊಕ್ಕಿದವರ ಎದೆ ಜರ್ಝರಿಸೆ

ರೆಕ್ಕಿಯ ಮುಖವೆತ್ತಿ ಹರಿಸರ್ವೋತ್ತಮನೆಂದು

ಕೊಕ್ಕಟೆ ಕೊಕ್ಕಟೆ ಕೊಕ್ಕಟೆ ಕೋ ಎಂದು ll 1 ll


ಒಂದು ಝಾವದಿ ಓಂಕಾರನೆಂದು ಕೂಗೆ

ಇಂದಿರಾಪತಿ ವಿಧಿಜನಕನೆಂದೂ

ಸಂದೇಹಪಡಬೇಡಿ ಸಕಲಾಂತರ್ಯಾಮಿ ಶ್ರೀ

ಬಿಂದುಮಾಧವನಲ್ಲದಿಹಪರವಿಲ್ಲವೆಂದು ll 2 ll


ಎರಡು ಝಾವದಿ ಪುರುಷೋತ್ತಮನೆಂದು 

ಗರುಡಾಚಲ ನರಸಿಂಹನೆಂದು

ಮೂರನೆ ಝಾವಕ್ಕೆ ವೀರನಾರಾಯಣ

ಹರಿಗಯಾಗದಾಧರನಲ್ಲದಿಲ್ಲವೆಂದು ll 3 ll


ನಾಲ್ಕನೆ ಝಾವದಲಿ ಬದರಿವರನಿಲಯ

ಏಕೋ ನಾರಾಯಣ ದೇವನೆಂದು

ಶ್ರೀ ಕಂಚೀವರದನೆ ಐದನೆ ಝಾವಕ್ಕೆ

ಗೋಕುಲಪತಿಯಲ್ಲದಿಹಪರ ಇಲ್ಲವೆಂದು ll 4 ll


ಯಾಮ ಆರರೊಳು ವ್ಯಾಸಮೂರ್ತಿ ಎಂದು

ರೋಮಕೋಟಿ ಬ್ರಹ್ಮರುದ್ರರೆಂದು

ಸಾಮಗಾಯನ ಕಾವೇರಿ ರಂಗೇಶ

ಸ್ವಾಮಿ ಅಳಗಿರಿ ತಿಮ್ಮನಲ್ಲದಿಲ್ಲವೆಂದು ll 5 ll


ಏಳು ಝಾವದಿ ವೇಣಿಮಾಧವನೆಂದು 

ಮೇಲುಕೋಟೆ ಚಳ್ಳಾಬಳ್ಳನೆಂದು

ಶ್ರೀಲೋಲ ಅಯೋಧ್ಯಾ ರಘುರಾಮ ಗಂಡಕಿ 

ಸಾಲಿಗ್ರಾಮನಲ್ಲದಿಲ್ಲಹ ಪರ ಇಲ್ಲೆಂದು ll 6 ll


ಝಾವ ಎಂಟರೊಳು ಶ್ವೇತ ವರಾಹನೆಂದು 

ಮಾವ ಮರ್ದನ ಜನಾರ್ದನನೆಂದು 

ಶ್ರೀ ಉಡುಪಿಯ ಕೃಷ್ಣ ವಿಜಯವಿಟ್ಠಲ ತಿಮ್ಮ

ದೇವನಲ್ಲದೆ ಬೇರೆ ಇಹಪರ ಇಲ್ಲವೆಂದು ll 7 ll

***


ಕೂಗಿತು ತಾಮ್ರದ ಚೂಡ
ಪರ ಇಲ್ಲ್ಲೆಂದು ಪ
ಪಕ್ಕಗಳೆರಡು ಚಪ್ಪರಿಸಿ ಡಂಗುರುವ ಹೊಯ್ಯೆ
ಸೂಕ್ಕಿದವರ ಎದೆ ಜರ್ಝರಿಸೆ
ರೆಕ್ಕಿಯ ಮುಖವೆತ್ತಿ ಹರಿಸರ್ವೋತ್ತಮನೆಂದು
ಕೊಕ್ಕಟೆ ಕೊಕ್ಕಟೆ ಕೊಕ್ಕಟ್ಟೆ ಕೋ ಎಂದು1

ಒಂದು ಝಾವದಿ ಓಂಕಾರನೆಂದು ಕೂಗೆ
ಇಂದಿರಾಪತಿ ವಿಧಿಜನಕನೆಂದೂ
ಸಂದೇಹಪಡಬೇಡಿ ಸಕಲಾಂತರ್ಯಾಮಿ ಶ್ರೀ
ಬಿಂದುಮಾಧವನಲ್ಲದಿಹಪರವಿಲ್ಲವೆಂದು 2

ಎರಡು ಝಾವದಿ ಪುರುಷೋತ್ತಮನೆಂದು
ಗರುಡಾಚಲ ನರಸಿಂಹನೆಂದು
ಮೂರನೆ ಝಾವಕ್ಕೆ ವೀರನಾರಾಯಣ
ಹÀರಿಗಯಾಗದಾಧರನಲ್ಲದಿಲ್ಲವೆಂದು3

ಏಕೋ ನಾರಾಯಣ ದೇವನೆಂದು
ಗೋಕುಲಪತಿಯಲ್ಲದಿಹಪರ ಇಲ್ಲವೆಂದು 4

ಯಾಮ ಆರರೊಳು ವ್ಯಾಸಮೂರ್ತಿ ಎಂದು
ರೋಮಕೋಟಿ ಬ್ರಹ್ಮರುದ್ರರೆಂದು
ಸಾಮಗಾಯನ ಕಾವೇರಿ ರಂಗೇಶ
ಸ್ವಾಮಿ ಅಳಗಿರಿ ತಿಮ್ಮನಲ್ಲದಿಲ್ಲವೆಂದು 5

ಏಳು ಝಾವದಿ ವೇಣಿಮಾಧವನೆಂದು
ಮೇಲಗೋಟೆ ಚಳ್ಳಾಬಳ್ಳನೆಂದು
ಶ್ರೀಲೋಲ (ಆಯೋಧ್ಯಾ) ರಘುರಾಮ ಗಂಡಕಿ
ಪರ ಇಲ್ಲೆಂದು6

ಶ್ವೇತ ವರಾಹನೆಂದು
ಮಾವ ಮರ್ದನ ಜನಾದರ್Àನನೆಂದು
ಶ್ರೀ ಉಡುಪಿಯ ಕೃಷ್ಣ ವಿಜಯವಿಠ್ಠಲ ತಿಮ್ಮ
ದೇವನಲ್ಲದೆ ಬೇರೆ ಇಹಪರ ಇಲ್ಲವೆಂದು 7
********

No comments:

Post a Comment