Friday 27 December 2019

ಗುರುರಾಘವೇಂದ್ರ ಕರುಣಿಸೋ ತವಚರಣ ankita karpara narahari

ಗುರುರಾಘವೇಂದ್ರ ಕರುಣಿಸೋ ತವಚರಣ ಸ್ಮರಣೆಯ ||pa||

ಶರಣು ಜನಕೆ ಸುರತರುವೆಂದೆನಿಸುತ
ವರ ಮಂತ್ರಾಲಯ ಪುರದಿ ಮೆರೆವ ಶ್ರೀಮದ್ ||1||

ನಂದತೀರ್ಥರ ಮತ ಸಿಂಧುವಿಗೆ ಪೂರ್ಣ
ಚಂದ್ರನೆನಿಸಿದ ಸುಧೀಂದ್ರ ಕರೋದ್ಭವ ||2||

ಧರಿಯೊಳು ಶರಣರ ಪೊರೆವ ಕಾರ್ಪರ
ನರಹರಿಯನೊಲಿಸಿರುವ ಪರಿಮಳಾಚಾರ್ಯ ಶ್ರೀ||3||
***

 ರಾಗ : ದಕ್ಷಿಣಾದಿ ಭೈರವಿ ತಾಳ : ಆದಿ


ಗುರು ರಾಘವೇಂದ್ರ ಕರುಣಿಸೋ 

ತವ ಚರಣ ಸ್ಮರಣೆಯ ।। ಪಲ್ಲವಿ ।।


ಶರಣ ಜನಕೆ ಸುರತರು-

ವೆಂದೆನಿಸುತ ।

ವರ ಮಂತ್ರಾಲಯ ಪುರದಿ 

ಮೆರೆವ ಶ್ರೀಮದ್ ।। ಚರಣ ।।


ನಂದತೀರ್ಥರ ಮತ 

ಸಿಂಧುವಿಗೆ ಪೂರ್ಣ ।

ಚಂದ್ರ ನೆನಿಸಿದ ಸುಧೀಂದ್ರ 

ಕರೋದ್ಭವ ।। ಚರಣ ।।


ಧರೆಯೊಳು ಶರಣರ 

ಪೊರೆಯುವ । ಕರ್ಪರ ।

ನರಹರಿಯ ನೊಲಿಸಿದ 

ಪರಿಮಳಾಚಾರ್ಯ ।। ಚರಣ ।।

****


No comments:

Post a Comment