Friday 27 December 2019

ಎಂಥಾದ್ದೊ ಶ್ರೀ ತಿರುಪತಿ ಎಂಥಾದ್ದೊ ankita gopalakrishna vittala

ಎಂಥಾದ್ದೊ ಶ್ರೀ ತಿರುಪತಿ | ಎಂಥಾದ್ದೊ ||pa||

ಎಂಥಾದ್ದೊ ತಿರುಪತಿ ಕ್ಷೇತ್ರ | ಸ
ತ್ಪಾಂಥರಿಗಿಲ್ಲಿ ಸುಗಾತ್ರ | ಆಹ
ಕಂತುಪಿತನು ಇಲ್ಲಿ ನಿಂತು ಭಕ್ತರಿಗೆಲ್ಲ
ಸಂತಸಪಡಿಸುವನಂತಾದ್ರಿನಿಲಯ ನಿನ್ನೆಂದಾದ್ದೊ||a.pa||

ನಾಗಾದ್ರಿಗಿರಿಯ ಮೆಟ್ಟುಗಳು | ಅ
ಯೊಗ್ಯರಿಗಿದು ದುರ್ಲಭಗಳು | ಅಲ್ಲಿ
ಭಾಗವತರ ಸಮ್ಮೇಳಗಳು | ಶಿರ
ಬಾಗಿ ವಂದಿಪರು ಜನರುಗಳು | ಆಹ
ಪೋಗುತ ಗಾಳಿಗೋಪುರವ ಕಂಡೆರಗಿ ಮುಂ
ದ್ಯಾಗುತ ಸಜ್ಜನ ನೀಗುವರು ದುಃಖ||1||

ಹರಿಮಂದಿರ ಮಹಾದ್ವಾರ | ಬಹು ಜ
ನರು ಕೂಡಿಹರು ವಿಸ್ತಾರ | ಬೀದಿ
ನಡೆದು ಪದ್ರಕ್ಷಿಣಾಕಾರ | ಭೂ
ವರಹನ ಸ್ವಾಮಿ ಕಾಸಾರ | ಆಹ
ಹರುಷದಿಂದಶ್ವತ್ಥ ತರುವ ಕಂಡೆರಗಿ ಹರಿ
ದರುಶನಕಾಗಿ ಹಾರೈಸುವ ಜನತತಿ ||2||

ಸ್ವಾಮಿಪುಷ್ಕರಣಿಯ ಸ್ನಾನ | ಮನ
ಕಾನಂದಪ್ರದ ಸುe್ಞÁನ | ಭಾನು
ತಾನುದಿಸುವನು ಮುಂದಿನ | ಸುಖ
ಕೇನೆಂಬೆ ಹರಿಯ ದರ್ಶನ | ಆಹ
ನೀನೆ ಗತಿಯೆಂದು ನಂಬಿದವರ ಪೊರೆವ
ಭಾನುಪ್ರಕಾಶ ಹಣ ಕಾಣೀಕೆ ಕೈಕೊಂಬ ||3||

ಗರುಡ ಸ್ಥಂಭವನೆ ಕಾಣುತ್ತ | ಬಾಗಿ
ಕರಮುಗಿದು ಒಳದ್ವಾರ ಪೊಗುತ | ವಿಮಾನ
ಗಿರಿ ಶ್ರೀನಿವಾಸಗೆರಗುತ್ತ | ಬಂದು
ವರ ತೊಟ್ಟಿ ತೀರ್ಥ ಕೊಳ್ಳುತ್ತ | ಆಹಾ
ತರತರದ ಕಾಣಿಕೆ ಕೊಪ್ಪರಿಗೆಗೆ ಸುರಿಯುತ್ತ
ನಿರುತ ನೀ ಸಲಹೆಂದು ಮೊರೆಯಿಡೆ ಭಕ್ತರು ||4||

ಗರುಡನ ಎದುರೊಳು ನಿಂದು | ಸ್ವಾಮಿ
ಗರುವ ರಹಿತ ತಾ ಬಂದು | ಬಂದ
ವರಭಕ್ತರನೆ ಕಾಯ್ವ ಬಿರುದು | ಇಂಥ
ಹರಿಗೆ ಅಮೃತೋದಕವೆರೆದು | ಆಹಾ
ಜರಿಯ ಪೀತಾಂಬರ ಉಡಿಸಿ ಸರ್ವಾಭರಣ
ಹರಿಗೆ ಶೃಂಗರಿಸಿಪ್ಪ ಪರಿಯ ವರ್ಣಿಸಲಳವೆ ||5||

ಶಿರದಲಿ ಪೊಳೆವ ಕಿರೀಟ | ಕ
ಸ್ತೂರಿ ತಿಲಕವು ಸುಲಲಾಟ | ಸುರ
ನರರ ಪಾಲಿಪ ವಾರೆ ನೋಟ | ಕರ್ಣದಿ
ಕುಂಡಲ ಮಾಟ | ಆಹ
ವರ ಸಂಪಿಗೆಯ ಪೋಲ್ವ ನಾಸಿಕದ ಕದಪುಗಳ್
ಮೆರೆಯೆ ಕನ್ನಡಿಯಂತೆ ಮುಗುಳು ನಗೆಯ ಚೆಲ್ವ ||6||

ಸಿರಿವತ್ಸ ಕೌಸ್ತುಭಹಾರ | ಕಂಠ
ಕರಶಂಖ ಚಕ್ರವಪಾರ | ಸುರ
ನರರಿಗಭಯ ತೋರ್ಪಧೀರ | ಕರ
ದ್ವರವ ಕೊಡುವಂಥ ಉದಾರ | ಆಹ
ತರತರದ ಪುಷ್ಪಗಳ್ ನವರತ್ನ ತುಳಸಿಯ
ಮೆರೆವೊ ಹಾರಗಳನು ಧರಿಸಿರ್ಪ ಗಂಭೀರ ||7||

ವಕ್ಷಸ್ಥಳದಲ್ಲಿ ಲಕುಮಿ | ಹರಿ
ಅವನಿ | ಜಗ
ರಕ್ಷಿಪ ಮಮಕುಲಸ್ವಾಮಿ | ಸರ್ವ
ಸಾಕ್ಷಿಯಾಗಿದ್ದು ತಾ ಪ್ರೇಮಿ | ಆಹ
ಪಕ್ಷಿವಾಹನ ಸುರಾಧ್ಯಕ್ಷ ಖಳ ಶಿಕ್ಷ
ಪಕ್ಷವಹಿಸಿ ಸುರರ ರಕ್ಷಿಪ ಸರ್ವದ ||8||

ನಡುವಿನ ನಾಭಿ ವಡ್ಯಾಣ | ಮೇಲೆ
ಕುಂದಣ | ನೆರೆ
ಪಿಡಿದುಟ್ಟ ಪೀತಾಂಬ್ರವರ್ಣ | ಕಾ
ಲ್ಕಡಗ ರುಳಿಯು ಗೆಜ್ಜೆ ಪೂರ್ಣ | ಆಹ
ಮಡದಿಯರುಭಯದಿ ಪರಿಶೋಭಿಸುತಿರೆ
ಪಾದ ದೃಢಭಕ್ತರನೆ ಪೊರೆವ ||9||

ನೋಟಕತಿ ಚಲುವ ಗಂಭೀರ | ಭಕ್ತ
ಕೂಟದಿ ಮೆರೆಯುತಪಾರ | ಉತ್ಸ
ಸಾರ | ಭೋಕ್ತ
ಸಾಟಿರಹಿತ ಬರುವ ಧೀರ | ಆಹ
ಕೋಟಿದೇವತೆಗಳ ನೋಟದಿಂ ಪೊರೆಯುವ
ದಾಟಿಸುವ ಭವನಾಟಕಧರದೇವ ||10||

ಮಚ್ಛಾದ್ಯನೇಕ ಅವತಾರ | ಬಹು
ಇಚ್ಛೆಯಿಂದಲಿ ಭಜಿಸುವರ | ಕಾಯ್ವ
ಮೆಚ್ಚುತ ಮನದಲಿ ನಾರ | ಸಿಂಹ
ಸ್ವೇಚ್ಛೆÉ್ಛಯಿಂ ಮೆರೆವ ಜಗತ್ಸಾರ | ಆಹ
ತುಚ್ಛಕರು ವಸನ ಬಿಚ್ಚಿ ಸೆಳೆಯುತಿರೆ
ಇಚ್ಛೆಯರಿತು ಲಲನೆ ರಕ್ಷಿಸೆನಲು ಪೊರೆದ ||11||

ಎಲ್ಲೆಲ್ಲಿ ನೋಡಲು ಭಕ್ತ | ಜನ
ರಲ್ಲಲ್ಲಿ ನೆರೆಯುತ ಮುಕ್ತಾ | ಧೀಶ
ನಲ್ಲದಿನ್ನಿಲ್ಲೆಂದು ಸ್ತುತಿಸುತ್ತ | ಶ್ರೀಶ
ಇಲ್ಲೆ ಬಾರೆಂದು ಕರೆಯುತ್ತ | ಆಹ
ಸೊಲ್ಲು ಲಾಲಿಸೊ ಎನಲು
ಬಲ್ಲಿದ ಭಕ್ತರ ಸೊಲ್ಲಿಗೆ ಒಲಿಯುವ ||12||

ಬುತ್ತಿ ಪೊಂಗಲು ಮಾರುವರು | ಜನ
ರರ್ಥಿಯಿಂದದನು ಕೊಂಬುವರು | ಗೀತ
ನೃತ್ಯ ವಾದ್ಯಗಳಿಂ ಕುಣಿಯುವರು | ಅನ್ನ
ಅರ್ಥಿಯಿಂ ದಾನ ಮಾಡುವರು | ಆಹ
ಎತ್ತ ನೋಡಲು ಮನಕತ್ಯಂತ ಆನಂದ
ನಿತ್ಯ ಉತ್ಸವಗಳು ಸತ್ಯಾತ್ಮ ಕೈಗೊಂಬ ||13||

ಇಂತು ಮೆರೆವೊ ಕ್ಷೇತ್ರ ಘನವು | ನೋಡಿ
ನಿಂತು ವರ್ಣಿಸಲಸದಲವು | ಜಗ
ದಂತರಾತ್ಮಕನ ವೈಭವವು | ಗುರು
ಅಂತರ್ಯಾಮಿ ಶ್ರೀನಿಧಿಯು | ಆಹ
ಇಂತು ಬ್ರಹ್ಮೋತ್ಸವ ನಿಂತು ರಥದಿ ಬರುವ
ಕಂತುಪಿತ ಶ್ರೀ ಭೂಮಿಕಾಂತೇರ ಒಡಗೂಡಿ||14||

ಶ್ರೀಪತಿ ಜಲದೊಳಾಡೀದ | ಕೂರ್ಮ
ರೂಪದಿಂ ಗಿರಿಯನೆತ್ತಿದ | ಬಹು
ಪಾಪಿ ಕನಕಾಕ್ಷನ ಕೊಂದ | ನೃಹರಿ
ರೂಪ ವಾಮನ ಭೃಗುಜನಾದ | ಆಹ
ಚಾಪಖಂಡನ ಕೃಷ್ಣಚರಿಸಿ ಬತ್ತಲೆ ಕಲ್ಕಿ
ಗೋಪಾಲಕೃಷ್ಣವಿಠ್ಠಲನ ಮಹಾಕ್ಷೇತ್ರ||15||
****

ಎಂಥಾದ್ದೊ ಶ್ರೀ ತಿರುಪತಿ | ಎಂಥಾದ್ದೊ ಪ.

ಎಂಥಾದ್ದೊ ತಿರುಪತಿ ಕ್ಷೇತ್ರ | ಸ
ತ್ಪಾಂಥರಿಗಿಲ್ಲಿ ಸುಗಾತ್ರ | ಆಹ
ಕಂತುಪಿತನು ಇಲ್ಲಿ ನಿಂತು ಭಕ್ತರಿಗೆಲ್ಲ
ಸಂತಸಪಡಿಸುವನಂತಾದ್ರಿನಿಲಯ ನಿನ್ನೆಂದಾದ್ದೊ ಅ.ಪ.

ನಾಗಾದ್ರಿಗಿರಿಯ ಮೆಟ್ಟುಗಳು | ಅ
ಯೊಗ್ಯರಿಗಿದು ದುರ್ಲಭಗಳು | ಅಲ್ಲಿ
ಭಾಗವತರ ಸಮ್ಮೇಳಗಳು | ಶಿರ
ಬಾಗಿ ವಂದಿಪರು ಜನರುಗಳು | ಆಹ
ಪೋಗುತ ಗಾಳಿಗೋಪುರವ ಕಂಡೆರಗಿ ಮುಂ
ದ್ಯಾಗುತ ಸಜ್ಜನ ನೀಗುವರು ದುಃಖ1
ಹರಿಮಂದಿರ ಮಹಾದ್ವಾರ | ಬಹು ಜ
ನರು ಕೂಡಿಹರು ವಿಸ್ತಾರ | ಬೀದಿ
ನಡೆದು ಪದ್ರಕ್ಷಿಣಾಕಾರ | ಭೂ
ವರಹನ ಸ್ವಾಮಿ ಕಾಸಾರ | ಆಹ
ಹರುಷದಿಂದಶ್ವತ್ಥ ತರುವ ಕಂಡೆರಗಿ ಹರಿ
ದರುಶನಕಾಗಿ ಹಾರೈಸುವ ಜನತತಿ 2
ಸ್ವಾಮಿಪುಷ್ಕರಣಿಯ ಸ್ನಾನ | ಮನ
ಕಾನಂದಪ್ರದ ಸುe್ಞÁನ | ಭಾನು
ತಾನುದಿಸುವನು ಮುಂದಿನ | ಸುಖ
ಕೇನೆಂಬೆ ಹರಿಯ ದರ್ಶನ | ಆಹ
ನೀನೆ ಗತಿಯೆಂದು ನಂಬಿದವರ ಪೊರೆವ
ಭಾನುಪ್ರಕಾಶ ಹಣ ಕಾಣೀಕೆ ಕೈಕೊಂಬ 3
ಗರುಡ ಸ್ಥಂಭವನೆ ಕಾಣುತ್ತ | ಬಾಗಿ
ಕರಮುಗಿದು ಒಳದ್ವಾರ ಪೊಗುತ | ವಿಮಾನ
ಗಿರಿ ಶ್ರೀನಿವಾಸಗೆರಗುತ್ತ | ಬಂದು
ವರ ತೊಟ್ಟಿ ತೀರ್ಥ ಕೊಳ್ಳುತ್ತ | ಆಹಾ
ತರತರದ ಕಾಣಿಕೆ ಕೊಪ್ಪರಿಗೆಗೆ ಸುರಿಯುತ್ತ
ನಿರುತ ನೀ ಸಲಹೆಂದು ಮೊರೆಯಿಡೆ ಭಕ್ತರು 4
ಗರುಡನ ಎದುರೊಳು ನಿಂದು | ಸ್ವಾಮಿ
ಗರುವ ರಹಿತ ತಾ ಬಂದು | ಬಂದ
ವರಭಕ್ತರನೆ ಕಾಯ್ವ ಬಿರುದು | ಇಂಥ
ಹರಿಗೆ ಅಮೃತೋದಕವೆರೆದು | ಆಹಾ
ಜರಿಯ ಪೀತಾಂಬರ ಉಡಿಸಿ ಸರ್ವಾಭರಣ
ಹರಿಗೆ ಶೃಂಗರಿಸಿಪ್ಪ ಪರಿಯ ವರ್ಣಿಸಲಳವೆ 5
ಶಿರದಲಿ ಪೊಳೆವ ಕಿರೀಟ | ಕ
ಸ್ತೂರಿ ತಿಲಕವು ಸುಲಲಾಟ | ಸುರ
ನರರ ಪಾಲಿಪ ವಾರೆ ನೋಟ | ಕರ್ಣದಿ
ಮಿರುಗುವ ಕುಂಡಲ ಮಾಟ | ಆಹ
ವರ ಸಂಪಿಗೆಯ ಪೋಲ್ವ ನಾಸಿಕದ ಕದಪುಗಳ್
ಮೆರೆಯೆ ಕನ್ನಡಿಯಂತೆ ಮುಗುಳು ನಗೆಯ ಚೆಲ್ವ 6
ಸಿರಿವತ್ಸ ಕೌಸ್ತುಭಹಾರ | ಕಂಠ
ಕರಶಂಖ ಚಕ್ರವಪಾರ | ಸುರ
ನರರಿಗಭಯ ತೋರ್ಪಧೀರ | ಕರ
ದ್ವರವ ಕೊಡುವಂಥ ಉದಾರ | ಆಹ
ತರತರದ ಪುಷ್ಪಗಳ್ ನವರತ್ನ ತುಳಸಿಯ
ಮೆರೆವೊ ಹಾರಗಳನು ಧರಿಸಿರ್ಪ ಗಂಭೀರ 7
ವಕ್ಷಸ್ಥಳದಲ್ಲಿ ಲಕುಮಿ | ಹರಿ
ಕುಕ್ಷಿಯೊಳ್ ಈರೇಳು ಅವನಿ | ಜಗ
ರಕ್ಷಿಪ ಮಮಕುಲಸ್ವಾಮಿ | ಸರ್ವ
ಸಾಕ್ಷಿಯಾಗಿದ್ದು ತಾ ಪ್ರೇಮಿ | ಆಹ
ಪಕ್ಷಿವಾಹನ ಸುರಾಧ್ಯಕ್ಷ ಖಳ ಶಿಕ್ಷ
ಪಕ್ಷವಹಿಸಿ ಸುರರ ರಕ್ಷಿಪ ಸರ್ವದ 8
ನಡುವಿನ ನಾಭಿ ವಡ್ಯಾಣ | ಮೇಲೆ
ಉಡಿದಾರ ಗೆಜ್ಜೆ ಕುಂದಣ | ನೆರೆ
ಪಿಡಿದುಟ್ಟ ಪೀತಾಂಬ್ರವರ್ಣ | ಕಾ
ಲ್ಕಡಗ ರುಳಿಯು ಗೆಜ್ಜೆ ಪೂರ್ಣ | ಆಹ
ಮಡದಿಯರುಭಯದಿ ಪರಿಶೋಭಿಸುತಿರೆ
ಪೊಡವಿಯಳೆದ ಪಾದ ದೃಢಭಕ್ತರನೆ ಪೊರೆವ 9
ನೋಟಕತಿ ಚಲುವ ಗಂಭೀರ | ಭಕ್ತ
ಕೂಟದಿ ಮೆರೆಯುತಪಾರ | ಉತ್ಸ
ವಾಟಗಳಾಡುತ ಸಾರ | ಭೋಕ್ತ
ಸಾಟಿರಹಿತ ಬರುವ ಧೀರ | ಆಹ
ಕೋಟಿದೇವತೆಗಳ ನೋಟದಿಂ ಪೊರೆಯುವ
ದಾಟಿಸುವ ಭವನಾಟಕಧರದೇವ 10
ಮಚ್ಛಾದ್ಯನೇಕ ಅವತಾರ | ಬಹು
ಇಚ್ಛೆಯಿಂದಲಿ ಭಜಿಸುವರ | ಕಾಯ್ವ
ಮೆಚ್ಚುತ ಮನದಲಿ ನಾರ | ಸಿಂಹ
ಸ್ವೇಚ್ಛೆÉ್ಛಯಿಂ ಮೆರೆವ ಜಗತ್ಸಾರ | ಆಹ
ತುಚ್ಛಕರು ವಸನ ಬಿಚ್ಚಿ ಸೆಳೆಯುತಿರೆ
ಇಚ್ಛೆಯರಿತು ಲಲನೆ ರಕ್ಷಿಸೆನಲು ಪೊರೆದ 11

ಎಲ್ಲೆಲ್ಲಿ ನೋಡಲು ಭಕ್ತ | ಜನ
ರಲ್ಲಲ್ಲಿ ನೆರೆಯುತ ಮುಕ್ತಾ | ಧೀಶ
ನಲ್ಲದಿನ್ನಿಲ್ಲೆಂದು ಸ್ತುತಿಸುತ್ತ | ಶ್ರೀಶ
ಇಲ್ಲೆ ಬಾರೆಂದು ಕರೆಯುತ್ತ | ಆಹ
ಮಲ್ಲ ಮರ್ಧನ ಎಮ್ಮ ಸೊಲ್ಲು ಲಾಲಿಸೊ ಎನಲು
ಬಲ್ಲಿದ ಭಕ್ತರ ಸೊಲ್ಲಿಗೆ ಒಲಿಯುವ 12
ಬುತ್ತಿ ಪೊಂಗಲು ಮಾರುವರು | ಜನ
ರರ್ಥಿಯಿಂದದನು ಕೊಂಬುವರು | ಗೀತ
ನೃತ್ಯ ವಾದ್ಯಗಳಿಂ ಕುಣಿಯುವರು | ಅನ್ನ
ಅರ್ಥಿಯಿಂ ದಾನ ಮಾಡುವರು | ಆಹ
ಎತ್ತ ನೋಡಲು ಮನಕತ್ಯಂತ ಆನಂದ
ನಿತ್ಯ ಉತ್ಸವಗಳು ಸತ್ಯಾತ್ಮ ಕೈಗೊಂಬ 13
ಇಂತು ಮೆರೆವೊ ಕ್ಷೇತ್ರ ಘನವು | ನೋಡಿ
ನಿಂತು ವರ್ಣಿಸಲಸದಲವು | ಜಗ
ದಂತರಾತ್ಮಕನ ವೈಭವವು | ಗುರು
ಅಂತರ್ಯಾಮಿ ಶ್ರೀನಿಧಿಯು | ಆಹ
ಇಂತು ಬ್ರಹ್ಮೋತ್ಸವ ನಿಂತು ರಥದಿ ಬರುವ
ಕಂತುಪಿತ ಶ್ರೀ ಭೂಮಿಕಾಂತೇರ ಒಡಗೂಡಿ14
ಶ್ರೀಪತಿ ಜಲದೊಳಾಡೀದ | ಕೂರ್ಮ
ರೂಪದಿಂ ಗಿರಿಯನೆತ್ತಿದ | ಬಹು
ಪಾಪಿ ಕನಕಾಕ್ಷನ ಕೊಂದ | ನೃಹರಿ
ರೂಪ ವಾಮನ ಭೃಗುಜನಾದ | ಆಹ
ಚಾಪಖಂಡನ ಕೃಷ್ಣಚರಿಸಿ ಬತ್ತಲೆ ಕಲ್ಕಿ
ಗೋಪಾಲಕೃಷ್ಣವಿಠ್ಠಲನ ಮಹಾಕ್ಷೇತ್ರ15
*****

No comments:

Post a Comment