Friday 13 December 2019

ನಾರಸಿಂಹನೆ ಧೀರ ನಂಬಿದೆನೊ ಪೊರೆಯೊ ankita gopala vittala

ನಾರಸಿಂಹನೆ ಧೀರ | ನಂಬಿದೆನೊ ಪೊರೆಯೊ
ಶ್ರೀ ರಮಾಪತಿ ವೀರ | ಕರಿಗಿರಿ ವಿಹಾರ ||ಪ.||

ಸಾರಿದೆನೊ ನಿನ್ನ ಪದವ ಅನುದಿನ
ಸೇರಿಸೆನ್ನನು ಭಕ್ತಕೂಟದಿ
ಗಾರು ಮಾಡುವುದುಚಿತವೇ ಹರಿ
ಪಾರುಗಾಣಿಸೊ ಭವ ಸಮುದ್ರದಿ ||ಅ.ಪ.||

ತಡೆಯಲಾರೆನೊ ತಾಪ | ನಾನಾರಿಗುಸುರಲೊ
ಒಡಲ ದುಃಖವ ಭೂಪ | ನೀನಲ್ಲದಿಲ್ಲವೊ
ಕಡೆಮಾಡು ಭವ ಶ್ರೀಪ | ತೋರದಿರು ಕೋಪ
ಘುಡು ಘುಡುಸಿ ನೀ ಎನ್ನ ಬೆದರಿಸೆ
ತಡೆವೆನೇ ನಿನ್ನ ಕೋಪದಗ್ನಿಗೆ
ಬಿಡು ಬಿಡು ಬಿಂಕ ಎನ್ನೊಳು
ತಡೆಯೊ ಎನ್ನ ದುರುಳತನಗಳ
ಕಡುಕರುಣಿ ನೀನಲ್ಲವೆ ಹರಿ
ಒಡಲೊಳಗೆ ಪ್ರೇರಕನು ನೀನೆ
ನಡಸಿದಂದದಿ ನಡೆವೆನಲ್ಲದೆ
ಒಡೆಯ ಎನ್ನ ಸ್ವತಂತ್ರವೇನೊ? ||1||

ದುರುಳತನದಲಿ ದೈತ್ಯ | ಭೂವಲಯವೆಲ್ಲವ
ಉರವಣಿಸಿ ದುಷ್ಕುತ್ಯ | ಎಸಗುತಿರೆ ದುಃಖದಿ
ಸುರರು ಮೊರೆಯಿಡೆ ಸತ್ಯ | ದೃಢಮನದಿ ಭೃತ್ಯ
ಕರಕರೆ ಪಿತ ಬಡಿಸುತಿರಲು ದೊರೆಯೆ ನೀ
ಪೊರೆ ಎಂದು ಮೊರೆಯಿಡೆ
ಸರ್ವವ್ಯಾಪಕನೆಂದು ತೋರಲು
ತ್ವರಿತದಲಿ ಕಂಭದಲಿ ಬಂದು
ಸರಸಿಜವು ಕಂಗೆಡುವೊ ಕಾಲದಿ
ಧರಿಸಿ ತೊಡೆಯ ಮೇಲಸುರ ಕಾಯವ
ಕರುಳ ಬಗೆದು ಮಾಲೆ ಧರಿಸಿ
ಪೊರೆದೆಯೊ ಸ್ತುತಿ ಕೇಳಿ ಬಾಲನ ||2||

ಅಜಭವಾದಿಗಳೆಲ್ಲ | ಸ್ತುತಿಸಿದರೆ ಮಣಿಯದ
ಭುಜಗಶಾಯಿ ಶ್ರೀ ನಲ್ಲ | ನಾ ನಿನ್ನ ಸ್ತುತಿಸಿ
ಭಜಿಸಲಾಪೆನೆ ಕ್ಷುಲ್ಲ | ಮಾನವನ ಸೊಲ್ಲ
ನಿಜಮನವ ನೀ ತಿಳಿದು ಸಲಹೊ
ಧ್ವಜವಜ್ರಪದ ಕಮಲ ತೋರಿ
ಕುಜನನಲ್ಲವೊ ಹಿರಿಯರೆನಗೆ
ನಿಜಗತಿಯ ಪಥ ತೋರುತಿಹರೊ
ರಜ ತಮವ ದೂರಟ್ಟಿ ಶುದ್ಧದಿ
ಭಜಿಸುವಂದದಿ ಕೃಪೆಯ ಮಾಡಿ
ಸುಜನರೆನ್ನನು ಪಾಲಿಸುತ್ತಿರೆ
ನಿಜದಿ ಗೋಪಾಲಕೃಷ್ಣವಿಠ್ಠಲ ||3||


********

No comments:

Post a Comment