Thursday, 2 December 2021

ಶ್ರೀವೆಂಕಟಾಚಲ ನಿವಾಸ ankita jagannatha vittala SRI VENKATACHALA NIVASA

 ಶ್ರೀವೆಂಕಟಾಚಲ ನಿವಾಸ

 
csr

ಶ್ರೀ ವೇಂಕಟಾಚಲ ನಿವಾಸ ನಾ ನಿನ್ನ
ಸೇವಾನುಸೇವಕರ ದಾಸ ಎನಿಸಿ
ಜೀವಿಸುವ ನರಗೆ ಆಯಾಸ ಯಾಕೆ
ಶ್ರೀವರನೆ ಕೊಡು ಎನಗೆ ಲೇಸಾ || 1 ||

ಸ್ವಾಮಿ ಕಂಸಾರಿ ಪ್ರಭು ನಿನ್ನ ದಿವ್ಯ
ನಾಮ ಒದಗಲು ಜಿಹ್ವೆಗೆನ್ನ ದೋಷ
ಸೀಮೆಗಾಣದಿದ್ದರೆನ್ನ ಸ್ವಾಮಿ
ನೀ ಮರೆಯಲಾಗದೊ ಸುಪ್ರಸನ್ನ || 2 ||

ನೀಚ ಯೋನಿಗಳಲ್ಲಿ ಬಂದೆ ಇನ್ನು
ನಾಚಿಕಿಲ್ಲವೊ ಎನಗೆ ತಂದೆ ನೀನೆ
ಮೋಚಕನು ಬಿನ್ನಪವಿದೆಂದೆ ಸವ್ಯ
ಸಾಚಿಸಖ ಕೈಪಿಡಿಯೋ ಮುಂದೆ || 3 ||

ನಾನೊಬ್ಬನೇ ನಿನಗೆ ಭಾರ ಆದೆ
ನೇನೊ ಸಂತತ ನಿರ್ವಿಕಾರ ಎನ್ನ
ಹೀನತ್ವ ನೋಡಲ್ಕಪಾರ ಚಕ್ರ
ಪಾಣಿ ಮಾಡಿದಿರೆನ್ನ ದೂರ || 4 ||

ಕಂಡ ಕಂಡವರಿಗಾಲ್ಪರಿದು ಬೇಡಿ
ಬೆಂಡಾದೆ ನಿನ್ನಂಘ್ರಿ ತೊರೆದು ದಿಟ
ತೊಂಡವತ್ಸಲನೆಂಬ ಬಿರುದು ಕಾಯೊ
ಪುಂಡರೀಕಾಕ್ಷ ನೀನರಿದು || 5 ||

ಈ ಸಮಯದೊಳಗೆನ್ನ ತಪ್ಪ ನೋಡಿ
ನೀ ಸಡಿಲ ಬೇಡುವರೇನಪ್ಪ ನಿನ್ನ
ದಾಸರ್ಪೆಸರ್ಗೊಳಲು ಬಪ್ಪ ದೋಷ
ನಾಶವಾಗೋದು ತಿಮ್ಮಪ್ಪ || 6 ||

ಕಾಮಾದಿಗಳ ಕಾಟದಿಂದ ನಿನ್ನ
ನಾ ಮರೆದೆ ಸಚ್ಚಿದಾನಂದ ಎನ್ನ
ಈ ಮಹಾ ದೋಷಗಳ ವೃಂದ ನೋಡದೆ
ನೀ ಮನ್ನಿಸೆನ್ನ ಮುಕುಂದ || 7 ||

ನೀ ಪಿಡಿದರೆ ಸಹಸ್ರಾರ ಸುಜನ
ಪಾಪಾಟವಿಗೆ ಸುಕುಠಾರಾ ಜಗ
ದ್ವ್ಯಾಪಕನೆ ಎನ್ನ ಸಂಸಾರ ಘೋರ
ಕೂಪದಿಂದೆತ್ತಯ್ಯ ಧೀರ || 8 ||

ಸಿಂಧೂರ ರಾಜ ಪರಿಪಾಲ ಕೋಟಿ
ಕಂದರ್ಪ ಲಾವಣ್ಯ ಶೀಲ ಧರ್ಮ
ಮಂದಾರ ಭೂಜಾಲವಾಲ ಯೋಗಿ
ಸಂದೋಹ ಹೃತ್ಕುಮುದ ಶೀಲಾ || 9 ||

ಶಿವನ ವೈರಿಯ ಕೊಂದ ಶಕ್ತ ಪುಣ್ಯ
ಶ್ರವಣ ಕೀರ್ತನ ನಿನ್ನ ಭಕ್ತ ಜನರ
ಭವದೊಳಗೆ ದಣಿಸುವುದು ಯುಕ್ತವೇನೊ
ಭುವನ ಪಾವನ ನಿತ್ಯಮುಕ್ತ || 10 ||

ಶ್ರೀಕರ ಶ್ರೀಮದಾನಂತ ನಿಖಿಳ
ಲೋಕೈಕನಾಥ ನಿನ್ನಂಥ ಸಖರ
ನಾ ಕಾಣೆನೆಲ್ಲೂ ಮಹಾಂತಾ ಎನ್ನ
ನೀ ಕಾಯೋ ಕಂಡ್ಯ ಭೂಕಾಂತಾ || 11 ||

ಕರ ಕರ್ಮ ಚಿತ್ತತ್ವಗ್ರಸನ ಕಾಯ
ಕರಣ ಮನಹಂಕಾರ ಘ್ರಾಣ ಬುದ್ಧಿ
ಚರಣ ಪಾಯೂಪಸ್ಥ ನಯನಜಾತ
ಉರುಪಾಪಿ ಕ್ಷಮಿಸು ಶ್ರೀ ರಮಣಾ || 12 ||

ಅನಿಮಿತ್ತ ಬಂಧು ನೀಯೆನ್ನ ಬಿಡುವು
ದನುಚಿತವೋ ಲೋಕಪಾವನ್ನಚರಿತ
ಮನ ವಚನ ಕಾಯದಲಿ ನಿನ್ನ ಪಾದ
ವನಜ ನಂಬಿದೆ ಸುಪ್ರಸನ್ನಾ || 13 ||

ನೀನಲ್ಲದೆನಗೆ ಗತಿಯಿಲ್ಲ ಪವ
ಮಾನವಂದಿತ ಕೇಳೋ ಸೊಲ್ಲ ಎನ್ನ
ಜ್ಞಾನ ಇಚ್ಛೆ ಕ್ರಿಯೆಗಳೆಲ್ಲ ನಿನ್ನ
ಧೀನವಲ್ಲವೆ ಲಕ್ಷ್ಮೀನಲ್ಲಾ || 14 ||

ಪ್ರಾಚೀನ ಕರ್ಮಾಂಧಕೂಪದೊಳಗೆ
ಯೋಚಿಸುವ ನರರ ಸಂತಾಪ ನಿನಗೆ
ಗೋಚರಿಸದೇನೋ ಬಹುರೂಪ ವೇಂಕ
ಟಾಚಲನಿಲಯ ಪಾಹಿ ಶ್ರೀಪಾ || 15 ||

ಯಾಕೆ ದಯ ಬಾರದೆನ್ನಲ್ಲಿ ನರಕ
ನಾಕ ಭೂ ಲೋಕಂಗಳಲ್ಲಿ ಚರಿಸಿ
ನಾ ಕಷ್ಟಪಟ್ಟ ಬಗ್ಗೆ ನೀ ಬಲ್ಲಿ ವೀತ
ಶೋಕ ಕೊಡು ಭಕುತಿ ನಿನ್ನಲ್ಲಿ || 16 ||

ನಿನ್ನಂಘ್ರಿ ದರುಶನವ ಕೊಡದೆ ಹೀಗೆ
ಬನ್ನ ಬಡಿಸುವರೇನೋ ಬಿಡದೆ ನಾನು
ಮುನ್ನ ಮಾಡಿದ ಪಾಪ ಕೆಡದೆ ನೀ ಪ್ರ
ಪನ್ನ ವತ್ಸಲನೆಂದು ನುಡಿದೆ || 17 ||

ತಾಪತ್ರಯಗಳಿಂದ ನೊಂದೆ ಮಹಾ
ಪಾಪಿಷ್ಠರಲ್ಲನ್ನ ತಿಂದೆ ಇನ್ನು
ಆಪರೇತೇಶ್ವರನ ಮುಂದೆ ಪೋಗಿ
ನಾ ಪೇಳಿಕೊಳಲೇನು ತಂದೆ || 18 ||

ದೇಹ ಸಂಬಂಧಿಗಳ ಸಹಿತವಾಗಿ
ನಾ ಹೊಂದಿದೆನು ಲೋಕಮಹಿತ ಎನ್ನ
ಮೋಹಿಪುದು ನಿನಗೇನು ವಿಹಿತ ಹೃದಯ
ಬಾಹಿರಂತರದಿ ಸನ್ನಿಹಿತ || 19 ||

ಪೋಗುತಿದೆ ದಿವಸ ಕಮಲಾಕ್ಷ ಪರಮ
ಯೋಗೇಶ ನಿನ್ನ ಅಪರೋಕ್ಷ ಎನಗೆ
ಹ್ಯಾಗಾಗುವುದೊ ಸುರಾಧ್ಯಕ್ಷ ದುರಿತ
ನೀಗು ಕಾಮಿತ ಕಲ್ಪವೃಕ್ಷ || 20 ||

ಗತಿಯಾರು ನಿನ್ನುಳಿದು ದೇವ ರಮಾ
ಪತಿ ನೀನೆ ಭಕ್ತ ಸಂಜೀವ ಎನ್ನ
ಸತಿಸುತರ ಅನುದಿನದಿ ಕಾವ ಭಾರ
ಸತತ ನಿನ್ನದು ಮಹಾನುಭಾವ || 21 ||

ದೊಡ್ಡವರ ಕಾಯ್ವುದೇನರಿದು ಪರಮ
ದಡ್ಡರನು ಕಾಯ್ವುದೇ ಬಿರುದು ಎನ್ನ
ಗುಡ್ಡದಂತಿಹ ಪಾಪ ತರಿದು ಕಾಯೋ
ವಡ್ಡಿ ನಾಯಕ ಸಾರೆಗರದೊ || 22 ||

ಜ್ಞಾನಿಗಳು ನೀಚರಲಿ ಕರುಣ ಮಾಡ
ರೇನೋ ಬಿಡುವರೇ ರಥಚರಣ ಪಾಣಿ
ಭಾನು ಚಂಡರವಿಕಿರಣ ಬಿಡದೆ
ತಾನಿಪ್ಪನೆ ರಮಾರಮಣ || 23 ||

ಆಡಲ್ಯಾತಕೆ ಬಹಳ ಮಾತಾ ಪರರ
ಬೇಡಲಾರೆನೋ ಜಗತ್ರಾತಾ ಹೀಗೆ
ಮಾಡುವರೇ ಕೇಳೆನ್ನ ಮಾತ ನೀನೆ
ನೀಡೆನಗೆ ಪುರುಷಾರ್ಥ ದಾತಾ || 24 ||

ಬೇಡಲ್ಯಾತಕೆ ಬಹಳ ಮಾತಾ ಎನ್ನ
ಕೇಡು ನಿನ್ನದಲ್ಲೇ ಬಲಿಧೌತ ಪಾದ
ಬೇಡಿಕೊಂಬುವೆ ನಾನು ನಾಥ ದೂರ
ನೋಡಲಾಗದು ಪಾರ್ಥಸೂತ || 25 ||

ಸಾರಸದ್ಭಕ್ತಿಯಲಿ ನಿತ್ಯ ಬಿಡದೆ
ಶಾರದೇಶನ ತುತಿಪ ಭಕ್ತಜನರ
ಪಾರ ಸಂತೈಸುವುದು ಮಿಥ್ಯವಲ್ಲ
ಶ್ರೀರಮಣ ಸಾಕ್ಷಿದಕೆ ಸತ್ಯ || 26 ||

ಫಣಿರಾಜಶಯನ ಪರಿಯಂಕ ಶಯನ
ಪ್ರಣತಾರ್ತಿಹರನೆಂಬೊ ಅಂಕ ಕೇಳಿ
ಮಣಿದೆ ನಿನ್ನಂಘ್ರಿಗೆ ಶಶಾಂಕ ಭಾಸ
ದಣಿಸಲಾಗದು ನಿಷ್ಕಳಂಕ || 27 ||

ಕಾರ್ತವೀರ್ಯಾಜುನನ ಕೊಂದ ಭವ್ಯ
ಕೀರ್ತಿ ನಿನ್ನಾನಂದ ವೃಂದ ಸತತ
ಕೀರ್ತಿಸುವ ನರರ ಬಹುಕುಂದ ನೋಡ
ದಾರ್ತನ್ನ ಪೊರೆಯೊ ಗೋವಿಂದ || 28 ||

ದಯದಿಂದ ನೋಡೆನ್ನ ಹರಿಯೆ ಜಗ
ನ್ಮಯನೆ ಜ್ಞಾನಾನಂದ ಸಿರಿಯೆ ಮನೋ
ಭಯವ ಪರಿಹರಿಸಿನ್ನು ಧೊರೆಯೆ ಸರ್ವ
ಭಯದೂರರಿನ್ನೊಬ್ಬರರಿಯೇ || 29 ||

ನರಸಿಂಹ ನಿನ್ನುಳಿದು ಜಗವ ಕಾಯ್ವ
ಪರದೈವರುಂಟೆಂದು ಬಗೆವ ನರರ
ಪರಮೇಷ್ಠಿ ರಾಯನು ನಗುವ ನಿತ್ಯ
ನಿರಯಾಂಧ ಕೂಪದೊಳು ಹುಗಿವ || 30 ||

ದಾಸ ದಾಸರ ದಾಸನೆಂದು ಬಿಡದೆ
ನೀ ಸಲಹೋ ಎನ್ನನೆಂದೆಂದೂ ನಿನ್ನ
ನಾ ಸೇವಿಸುವೆ ಕೃಪಾಸಿಂಧು ಎಮ್ಮನು
ದಾಸೀನ ಮಾಡದಿರು ಬಂಧು || 31 ||

ಎಂದೆಂದು ನೀ ಬಡವನಲ್ಲ ನಿನ್ನ
ಪೊಂದಿದವನ ಬಿಡುವನಲ್ಲ ಹೃದಯ
ಮಂದಿರದೊಳಗೆ ಬಲ್ಯಲ್ಲ ಚಿದಾ
ನಂದ ನೀ ಭಕ್ತ ವತ್ಸಲ |\ 32 ||

ಕಾಮಿತಪ್ರದನೆಂಬ ಬಿರುದು ಕೇಳಿ
ನಾ ಮುದದಿ ಬಂದೆನೋ ಅರಿದು ಎನ್ನ
ತಾಮಸ ಮತಿಗಳನ್ನು ತರಿದು ಮಮ
ಸ್ವಾಮಿ ನೋಡೆನ್ನ ಕಣ್ತೆರೆದು || 33 ||

ಹಿತವರೊಳು ನಿನಗಧಿಕರಾದ ತ್ರಿದಶ
ತತಿಗಳೊಳು ಕಾಣೆನೋ ಪ್ರಮೋದ ನೀನೆ
ಗತಿಯೆಂದು ನಂಬಿದೆ ವಿವಾದವ್ಯಾಕೊ
ಪತಿತಪಾವನ ತೀರ್ಥಪಾದ || 34 ||

ಮಡದಿ ಮಕ್ಕಳ ತಂದೆ ತಾಯಿ ಎನ್ನ
ಒಡಹುಟ್ಟಿದವರ ನೀ ಕಾಯಿ ಲೋಕ
ದೊಡೆಯ ನೀನಲ್ಲದಿನ್ನಾರೈ ಎನ್ನ
ನುಡಿಯ ಲಾಲಿಸೋ ಶೇಷಶಾಯಿ || 35 ||

ಅನುಬಂಧ ಜನರಿಂದ ಬಪ್ಪ ಕ್ಲೇಶ
ಅನುಭವಿಸಲಾರೆ ಎನ್ನಪ್ಪ ಉದಾ
ಸೀನ ಮಾಡಿ ದಯಮಾಡದಿಪ್ಪರೇನೋ
ಘನ ಮಹಿಮ ಫಣಿರಾಜತಲ್ಪ || 36 ||

ಹದಿನಾಲ್ಕು ಲೋಕಂಗಳಾಳ್ವ ಬ್ರಹ್ಮ
ಮೊದಲಾದವರು ನಿನ್ನ ಚೆಲ್ವನಖದ
ತುದಿ ಬಣ್ಣ ಕಂಡು ಕಡೆ ಬೀಳ್ವದಿಲ್ಲ
ವಿಧಿಸಲಾಪೆನೆ ನಿನ್ನ ಸಲ್ವಾ || 37 ||

ಧನ ಧಾನ್ಯ ಪಶು ಪತ್ನಿ ಗೇಹ ಜನನೀ
ಜನಕ ಜಾಮಾತ ಸಖ ನೇಹ ಅನುಜ
ತನುಜಾಪ್ತವರ್ಗದಿಂದಾಹ ಸೌಖ್ಯ
ನಿನಗರ್ಪಿಸಿದೆ ಎನ್ನ ದೇಹ || 38 ||

ನೀನಿತ್ತ ಸಂಸಾರದೊಳಗೆ ಸಿಲುಕಿ
ನಾ ನೊಂದೆ ಕರೆ ನಿನ್ನ ಬಳಿಗೆ ಚರಣ
ಧ್ಯಾನ ದೊರಕಲು ಭವದಿ ಮುಳುಗೆ ನಿನ್ನ
ಕಾಣದಿರಲಾರೆನರೆಘಳಿಗೆ || 39 ||

ಸಲುಗೆ ಬಿನ್ನಪವ ನೀ ಕೇಳೋ ಎನ್ನ
ಬಲು ದುರುಳತನವ ನೀ ತಾಳೋ ನೀನೆ
ನೆಲೆಯಿಲ್ಲದೆನಗ್ಯಾರು ಪೇಳೋ ಎನ್ನ
ಕುಲದೈವ ಬಹುಕಾಲ ಬಾಳೋ || 40 ||

ಸಾಂದೀಪ ನಂದನನ ತಂದ ನಂದ
ನಂದನನೆ ಎನ್ನ ಭಯವೃಂದ ಕಳೆದು
ಎಂದೆಂದು ಕುಂದದಾನಂದವೀಯೋ
ಇಂದಿರಾರಮಣ ಗೋವಿಂದ || 41 ||

ವಿಶ್ವ ತೈಜಸ ಪ್ರಾಜ್ಞ ತುರಿಯ ಎನ್ನ
ದುಸ್ವಭಾವವ ನೋಡಿ ಪೊರೆಯದಿಹರೆ
ನಿಸ್ಪೃಹ ನಿನ್ನಂಘ್ರಿ ಮೊರೆಯ ಹೊಕ್ಕೆ
ಅಸ್ವತಂತ್ರನ ಕಾಯೋ ಪಿರಿಯ || 42 ||

ಇಹಪರದಿ ಸೌಖ್ಯಪ್ರದಾತ ನೀನೆ
ಅಹುದೋ ಲೋಕೈಕ ವಿಖ್ಯಾತ ಮಹಾ
ಮಹಿಮ ಗುಣಕರ್ಮ ಸಂಜಾತ ದೋಷ
ದಹಿಸು ಸಂಸಾರಾಬ್ಧಿ ಪೋತ || 43 ||

ಲೋಕಬಾಂಧವನೆಂಬ ಖ್ಯಾತಿಯನ್ನು
ನಾ ಕೇಳಿದೆನು ಖಳಾರಾತಿ ಮನೋ
ಶೋಕ ಮೋಹಾಜ್ಞಾನ ಭೀತಿ ಬಿಡಿಸು
ಶ್ರೀ ಕರಾರ್ಚಿತ ಸ್ವಯಂ ಜ್ಯೋತಿ || 44 ||

ಒಂದು ಗೇಣೊಡಲನ್ನಕಾಗಿ ಅಲ್ಪ
ಮಂದಭಾಗ್ಯರ ಮನೆಗೆ ಪೋಗಿ ದೈನ್ಯ
ದಿಂದ ಸತ್ಕರ್ಮಗಳ ನೀಗಿ ಕಂದಿ
ಕುಂದಿದೆನೋ ಸಲಹೋ ಲೇಸಾಗಿ || 45 ||

ಪಾತಕರೊಳಗಧಿಕ ನಾನಯ್ಯ ಜಗ-
ತ್ಪಾತಕವ ಕಳೆವ ಮಹಾರಾಯ ನಿನ್ನ
ದೂತ ನಾನಲ್ಲವೆ ಜೀಯ ಜಗ-
ನ್ನಾಥ ವಿಠ್ಠಲ ಪಿಡಿಯೋ ಕೈಯಾ || 46 ||

***

No comments:

Post a Comment