..
kruti by ಲಕ್ಷ್ಮೀನಾರಯಣರಾಯರು Lakshminarayanaru
ಪಂಡರಿನಾಥ ಪಾವನ ಸುಚರಿತ ll ಪ ll
ಪಾಂಡವಪ್ರಿಯದೂತ ಶರಣರ ಕಾದುಕೊಂಡಿಹ ಖ್ಯಾತ ದಾತ ll ಅ ಪ ll
ಮಾತಾಪಿತನು ಭ್ರಾತನು ಹಿತನು
ನಾಥನು ಜ್ಞಾತನು ಸಂತಾರಕನು
ಮತಿಯೂ ನೀನೆ ಗತಿಯೂ ನೀನೆ
ಕಾತರ ವ್ಯಾತರದು ಬೀತುದು ದೇವ ll 1 ll
ತನುಮನಧನಗಳ ನಿನಗರ್ಪಿಸಿದೆ
ಎನಿತಾದರು ಇಡು ಅನುಮಾನಿಸದೆ
ಜನರ ನಿಂದನೆ ಮೇಣಾನಂದನೆ
ಮಾನ ಅವಮಾನ ನಿನ್ನದು ದೇವ ll 2 ll
ಚಿಂತೆಯ ಮರೆದೆ ಭ್ರಾಂತಿಯ ತೊರೆದೆ
ಸಂತರ ಚರಣವನಾಂತೆ ದೃಢದೆ
ಸ್ವಾಂತವು ಮೋದವಾಂತುದು ಶ್ರೀದ
ಸಂತತ ಶ್ರೀಕಾಂತ ನಿಶ್ಚಿತ ದೇವ ll 3 ll
***
ಪಂಡರಿನಾಥ ಪಾವನ ಸುಚರಿತ ಪ
ಪಾಂಡವಪ್ರಿಯದೂತ ಶರಣರ ಕಾದುಕೊಂಡಿಹ ಖ್ಯಾತ ದಾತಅ.ಪ.
ಮಾತಾಪಿತನು ಭ್ರಾತನು ಹಿತನು
ನಾಥನು ಜ್ಞಾತನು ಸಂತಾರಕನು
ಮತಿಯೂ ನೀನೆ ಗತಿಯೂ ನೀನೆ
ಕಾತರ ವ್ಯಾತರದು ಬೀತುದು ದೇವ 1
ತನುಮನಧನಗಳ ನಿನಗರ್ಪಿಸಿದೆ
ಎನಿತಾದರು ಇಡು ಅನುಮಾನಿಸಿದೆ
ಜನರ ನಿಂದನೆ ಮೇಣಾನಂದನೆ
ಮಾನ ಅವಮಾನ ನಿನ್ನದು ದೇವ 2
ಚಿಂತೆಯ ಮರೆದೆ ಭ್ರಾಂತಿಯ ತೊರೆದೆ
ಸಂತರ ಚರಣವನಾಂತೆ ದೃಢದೆ
ಸ್ವಾಂತವು ಮೋದವಾಂತುದು ಶ್ರೀದ
ಸಂತತ ಶ್ರೀಕಾಂತ ನಿಶ್ಚಿತ ದೇವ 3
***
No comments:
Post a Comment