Tuesday 1 June 2021

ಮಂಗಳಂ ಜಯತು ಭಾಗೀರಥಿಗೆ ಜಯ ಮಂಗಳಂ ಯಮುನೆ ಸರಸ್ವತಿಗೆ ankita venkatakrishna

by yadugiriyamma  

 ಗಂಗಾನದಿ

ಮಂಗಳಂ ಜಯತು ಭಾಗೀರಥಿಗೆ

ಜಯ ಮಂಗಳಂ ಯಮುನೆ ಸರಸ್ವತಿಗೆ ಪ


ವಾಮನರೂಪಿಲಿ ದಾನವ ಬೇಡಿ

ಪ್ರೇಮದಿಂ ಪಾದವ ಮೇಲಕ್ಕೆ ನೀಡಲು

ನೇಮದಿಂ ತಡೆದು ಬ್ರಹ್ಮಾಂಡದಿಂದ

ಸುಮ್ಮಾನದಿಂ ಪೊರಟು ಬಂದ ದೇವಿಗೆ 1


ಹರಿಯ ಪಾದದಲಿ ಉದ್ಭವಿಸಿದ ಗಂಗೆಗೆ

ಹರನ ಶಿರದಲ್ಲಿ ವಾಸವಾದವಳಿಗೆ

ಭರದಿ ಭಗೀರಥ ತಪವ ಮಾಡಲು

ಧರಿಣಿಗೆ ಇಳಿದು ಬಂದ ದೇವಿಗೆ 2


ಭಗೀರಥನ ಪಥವಿಡಿದು ಬೇಡಿ ಬಂದ

ಭಾಗೀರಥಿ ಎಂಬೊ ಪೆಸರು ಪೊತ್ತು ಅವನ

ಭಾಗಿಗಳಿಗೆ ಮೋಕ್ಷವನಿತ್ತು ಹರುಷದಿ

ಯೋಗಿಗಳು ಸ್ತುತಿಪ ಗಂಗಾದೇವಿಗೆ 3


ಜನ್ಹುಋಷಿಯು ಪವನಮಾಡಿ ಬಿಡುವಾಗ

ಜಾಹ್ನವಿ ಎನಿಸಿದೆ ಜಗದೊಳಗೆ

ಜನರಿಗೆ ಜನನ ಮರಣ ಕೊಡದೆ ಬಿಡಿಸಿ

ಜಾಣತನದಿ ಮುಕ್ತಿ ಕೊಡುವವಳಿಗೆ 4


[ದೃಡದಿ ] ಬಲಭಾಗದಿ ಭಗೀರಥಿ ಬರುತಿರೆ

ಯೆಡದ ಭಾಗದಲಿಯಮುನೆ ಬರುತಿರಲು

ನಡುವೆ ಸರಸ್ವತಿ ತ್ರಿವೇಣಿಯೆಂದೆನಿಸಿ

ಪೊಡವಿಗಧಿಕವಾಗಿ ಮೆರೆಯುವ ದೇವಿಗೆ 5


ಬಂದು ಭಾಗೀರಥಿಗೆ ವಂದನೆಗಳ ಮಾಡಿ

ತಂದು ಪುಷ್ಪವ ತುಳಸಿ ಕ್ಷೀರವನು

ಚಂದದಿಂ ಪೂಜೆಮಾಡಿ ವೇಣಿಮಾಧವಗೆ

ಅಂದು ವಂದಿಸಿದವರಿಗೆ 6


ಸೃಷ್ಟಿಯ ಮೇಲುಳ್ಳ ಜನರೆಲ್ಲರು ಬಂದು

ಮುಟ್ಟಿ ಮುಳುಗಿ ಪೂಜಿಸಿದವರ

ಇಷ್ಟಾರ್ಥಗಳನು ಕೊಡುವೆನೆಂದೆನುತಲೆ

ದಿಟ್ಟ ವೆಂಕಟನ ಪಾದ ತೋರಿಸುವಳು 7

****


No comments:

Post a Comment