Saturday 1 May 2021

ಇಂದೆನ್ನ ಜನ್ಮ ಪಾವನ ವಾಯಿತು ತಂದೆ ಶ್ರೀ ಗುರು ankita mahipati

 ಇಂದೆನ್ನ ಜನ್ಮ ಪಾವನ ವಾಯಿತು । 

ತಂದೆ ಶ್ರೀ ಗುರು ನಿಮ್ಮ 

ಚರಣ ದರುಶನದಿ ।। ಪಲ್ಲವಿ ।। 


ಅರ್ಕ ಮಂಡಲಗಳು 

ರವಿ ಶಶಿ ಕಿರಣವು । 

ಝಳ ಝಳಿಸುವ ಪ್ರಭೆ ನೋಡಿ 

ಅನಿಮಿಷದಾ ದೃಷ್ಟಿಲೆನ್ನ । 

ಲಕ್ಷ್ಮಿಯೊಳು ಸಾಕ್ಷಾತ್ವಸ್ತು 

ಗತಿತು ನಿಮ್ಮ । 

ಪ್ರಕಾಶವನು ಕಂಡ೦-

ಧತ್ವಗಳು ।। ಚರಣ ।। 


ಓಂಕಾರ ಮೊದಲಾದ 

ದ್ವಾದಶ ನಾದದಾ । 

ಭೇದದಾ ಘೋಷವನು 

ಕೇಳಿನ್ನೀ ದೃಶ್ಯದಾ ಕರ್ಣಲೆನ್ನಾ । 

ಲಯ ಲೇಲೆಯೊಳು ಸಾದೃಶ್ಯ 

ಮೂರ್ತಿಯು ನಿಮ್ಮ । 

ಶ್ರುತಿಗಳು ಕೇಳಿ ಬಧಿ-

ರತವಾಗಳಿದಿನ್ನು ।। ಚರಣ ।। 


ಇಪ್ಪತ್ತೊಂದು ಸಾವಿರ 

ಆರು ನೂರುದಾ । 

ಜಪವನ್ನು ತಿಳಿದು 

ಪ್ರಣಮ್ಯಲೆನ್ನ । 

ಸುಷುಮ್ನದೊಳು 

ಪ್ರಾಣೇಶ ಮೂರ್ತಿ ನಿಮ್ಮ । 

ಮಂತ್ರವನ್ನು ತಿಳಿದು 

ಪಿಶಾಚತ್ವ ಕಳೆದಿನ್ನು ।। ಚರಣ ।। 


ಸ್ತುತಿ ಸ್ತೌತ್ಯ ಸ್ಮರಿಸುವ 

ದಿವ್ಯ ನಾಮಾಮೃತವ । 

ನುಡಿದು ಪಯಸ್ವಿನೀ 

ಜಿಹ್ವೆಲೆನ್ನ । 

ಸ್ಮರಣೆ ಚಿಂತನೆಯೊಳು 

ಸ್ಥುರಣ ಮೂರ್ತಿ ನಿಮ್ಮ । 

ಸ್ಮರಿತ ಗತಿವರಿತು 

ಮೂಕತ್ವ ಕಳೆದಿನ್ನು ।। ಚರಣ ।। 


ಚಿನ್ಮಯ ಚಿದ್ರೂಪ 

ಕಂಡು ಬೆರಗಾಗಿ ಮನ ।

ಭ್ರಾಂತಿ ಅಜ್ಞಾನವನ್ನು 

ಜರಿಯಲೆನ್ನ । 

ಏಕೋದೇವ ಈತ 

ವಿಶ್ವಾತ್ಮ ಹಂಸನೆಂದು । 

ಸಂದೇಹ ಸಂಕಲ್ಪ

ಬಾಧೆಯಾಗಳದಿನ್ನು ।। ಚರಣ ।। 


ಭುಕ್ತಿ ಮುಕ್ತಿ ಉದಾರಿ 

ಆತ್ಮದಲಿ ಸಾರಿ ದಾರಿ । 

ನಿಜ ಬೋಧಾಮೃತ

 ಬೆರೆದು ತಾರಿಸಲೆನ್ನ । 

ಗರ್ಭಪಾಶದ ಬಲಿಯು 

ಹರಿದು ಧರೆಯೊಳಿನ್ನು । 

ಉತ್ಪತ್ತಿ ಸ್ಥಿತಿ ಲಯದ 

ಬೀಜವನ್ನು ಹುರಿದಿನ್ನು ।। ಚರಣ ।। 


ಭಾಸ್ಕರ ಸ್ವಾಮಿಯ 

ಕಾರುಣಾಳು ಮೂರ್ತಿಯ । 

ಮೂಢ ಮಹೀಪತಿಯ 

ಕೃಪಾಂಬುಧಿಯು । ಕರು । 

ನದಭಯ ಹಸ್ತವನು 

ಶಿರದಲ್ಲಿಡಲಾಗಿ । 

ಧನ್ಯನಾದೆನು ಸತಿಪತಿ

ಸಹಿತವಾಗಿನ್ನು ।।

****


ಇಂದೆನ್ನ ಜನ್ಮ ಪಾವನವಾಯಿತು ತಂದೆ ಶ್ರೀಗುರು ನಿಮ್ಮ ಚರಣ ದರುಶನದಿ 

ಧ್ರುವ ಅರ್ಕ ಮಂಡಲಗಳು ರವಿಶಶಿ ಕಿರಣವು ಝಳಝಳಿಸುವ ಪ್ರಭೆ ನೋಡಿ ಅನಿಮಿಷದಾದೃಷ್ಟಿಲೆನ್ನ ಲಕ್ಷಿಯೊಳು ಸಾಕ್ಷಾತ್ವಸ್ತು ಗತಿಯು ನಿಮ್ಮ ಪ್ರಕಾಶವನು ಕಂಡಾಂಧತ್ವಗಳದಿನ್ನು 1 

ಓಂಕಾರ ಮೊದಲಾದ ದ್ವಾದಶ ನಾದದಾ ಭೇದದಾ ಘೋಷವನು ಕೇಳಿನ್ನೀ ದೃಶ್ಯದಾ ಕರ್ಣಲೆನ್ನಾ ಲಯಲೀಲೆಯೊಳು ಸಾದೃಶ್ಯ ಮೂರ್ತಿಯು ನಿಮ್ಮ ಶ್ರುತಿಗಳು ಕೇಳಿ ಬಧಿರತ್ವವಾಗಳಿದಿನ್ನು 2 

ಜಪವನ್ನು ತಿಳಿದು ಪ್ರಣಮ್ಯಲೆನ್ನ ಮೂರ್ತಿ ನಿಮ್ಮ ಮಂತ್ರವನು ತಿಳಿದು ಪಿಶಾಚತ್ವ ಕಳೆದಿನ್ನು 3 

ಸ್ತುತಿ ಸ್ತೌತ್ಯ ಸ್ಮರಿಸುವ ದಿವ್ಯನಾಮಾಮೃತವ ನುಡಿದು ಪಯಸ್ವನೀ ಜಿಹ್ವೆಲೆನ್ನ ಮೂರ್ತಿ ನಿಮ್ಮ ಸ್ಮರಿತ ಗತಿವರಿತು ಮೂಕತ್ವ ಕಳೆದಿನ್ನು 4 

ಚಿನ್ಮಯ ಚಿದ್ರೂಪ ಕಂಡು ಬೆರಗಾಗಿ ಮನ ಭ್ರಾಂತಿ ಅಜ್ಞಾನವನ್ನು ಜರಿಯಲೆನ್ನ ಏಕೋದೇವ ಈತ ವಿಶ್ವಾತ್ಮ ಹಂಸನೆಂದು ಸಂದೇಹ ಸಂಕಲ್ಪ ಬಾಧೆಯಾಗಳದಿನ್ನು 5 

ಭಕ್ತಿ ಮುಕ್ತಿ ಉದಾರಿ ಆತ್ಮದಲಿ ಸಾರಿದೋರಿ ನಿಜ ಬೋಧಾಮೃತ ಬೆರೆದು ತಾರಿಸಲೆನ್ನ ಗರ್ಭಪಾಶದ ಬಲಿಯು ಹರಿದು ಧರೆಯೊಳಿನ್ನು ಉತ್ಪತ್ತಿ ಸ್ಥಿತಿ ಲಯದ ಬೀಜವನ್ನು ಹುರಿದಿನ್ನು 6 

ಭಾಸ್ಕರಸ್ವಾಮಿಯ ಕರುಣಾಳು ಮೂರ್ತಿಯ ಮೂಢ ಮಹಿಪತಿಯ ಕೃಪಾಂಬುಧಿಯು ಕರುಣದಭಯ ಹಸ್ತವನು ಶಿರಸದಲ್ಲಿಡಲಾಗಿ ಧನ್ಯನಾದೆನು ಸತಿಪತಿ ಸಹಿತವಾಗಿನ್ನು 7

***

No comments:

Post a Comment