Saturday 14 December 2019

ಸೋಮಸುರ್ಯೋಪರಾಗದಲಿ ankita jagannatha vittala

ಜಗನ್ನಾಥದಾಸರು
ಸೋಮ ಸುರ್ಯೋಪರಾಗದಲಿ ಗೋಸಹಸ್ರಗಳ
ಭೂಮಿದೇವರಿಗೆ ಸುರನದಿಯ ತಟದಿ
ಶ್ರೀ ಮುಕುಂದಾರ್ಪಣವೆನುತ ಕೊಟ್ಟ ಫಲವಕ್ಕು
ಈ ಮಧ್ವನಾಮ ಬರೆದೋದಿದವರಿಗೆ 1

ಪುತ್ರರಿಲ್ಲದವರು ಸತ್ಪುತ್ರರೈದುವರು ಸ
ರ್ವತ್ರದಲಿ ದಿಗ್ವ್ವಿಜಯವಹುದು ಸಕಳ
ಶತ್ರುಗಳು ಕೆಡುವರಪಮೃತ್ಯು ಬರಲಂಜುವುದು
ಸೂತ್ರನಾಮಕನ ಸಂಸ್ತುತಿ ಮಾತ್ರದೀ 2

ಶ್ರೀ ಪಾದರಾಯರು ಪೇಳಿದ ಮಧ್ವ ನಾಮ ಸಂ
ತಾಪ ಕಳೆದಖಿಳ ಸೌಖ್ಯನೀವುದೂ
ಶ್ರೀಪತಿ ಜಗನ್ನಾಥವಿಠಲನ ತೋರಿ ಭವ
ಕೂಪಾರದಿಂದ ಕಡೆಹಾಯಿಸುವುದು 3
******

No comments:

Post a Comment