Saturday 14 December 2019

ಹನುಮ ಭೀಮಾನಂದ ಮುನಿವರೇಣ್ಯ ankita jagannatha vittala

ಜಗನ್ನಾಥದಾಸರು
ಹನುಮ ಭೀಮಾನಂದ ಮುನಿವರೇಣ್ಯ
ತಾಪ ಕಳೆದನುದಿನದಿ ಪಾಲಿಪುದು ಪ

ಪ್ರಾಣಪಂಚಕ ಸುಪರ್ವಾಣ ಗುರುವರ ಜಗ
ತ್ರಾಣ ತ್ರಯೀಮಯಿ ಪುರಾಣವೇದ್ಯಾ
ಮಾಣದೆನ್ನಯ ಹೃದಯ ತಾಣದೊಳಗರಿ ಶಂಖ
ಪಾಣಿರೂಪನ ಬಿಡದೆ ಕಾಣಿಸು ಕೃಪಾಸಿಂಧು 1

ಸೂತ್ರನಾಮಕನೆ ತಾಪತ್ರಯಗಳಿಂದ್ಹಗಲು
ರಾತ್ರಿಯಲಿ ಬಳುಲುತಿಹ ನಿತ್ರಾಣನ
ಗಾತ್ರದೊಳು ನೆಲೆಸಿ ಸರ್ವತ್ರದಲಿ ಸುಖವಿತ್ತು
ಶತ್ರುತಾಪಕನಾಗು ಸ್ತೋತ್ರವನೆ ಕೈಕೊಂಡು 2

ಅಸುನಾಥ ಶರಣಂಗೆ ವಶವಾಗು ಅನುದಿನದಿ
ಅಸುರಭಂಜನ e್ಞÁನ ಸುಸುಖ್ಮಾತನೇ
ಬಿಸರುಹಾಂಬಕ ಜಗನ್ನಾಥವಿಠಲನ ಕೈ
ವಶಮಾಡಿ ಕೊಡುತಿಪ್ಪ ಶ್ವಸನಾವತಾರಿ3
********

No comments:

Post a Comment