Friday 27 December 2019

ನೀನೇ ಸಜ್ಜನರ ಬಂಧೂ ಕಾರುಣ್ಯ ಸಿಂಧೂ ankita bheemesha krishna

ಹರಪನಹಳ್ಳಿ ಭೀಮವ್ವ

ರಾಗ : ಪೂರ್ವಿಕಲ್ಯಾಣಿ ರೂಪಕ ತಾಳ .p.

ನೀನೆ ಸಜ್ಜನರ ಬಂಧೂ ಕಾರುಣ್ಯ ಸಿಂಧೂ

ಕರಿಮರಿ ಬಳಗ ಬಂದೊದಗಿದರೇನೂ
ಪರಿಪರಿ ಕ್ಲೇಶವ ಬಿಡಿಸಲಿಲ್ಲ
ಹರಿ ನೀನೆ ಗತಿ ಎಂದರೆ ಆ ಕ್ಷಣದಲ್ಲಿ
ಕರಿ ಬಂಧನ ಪರಿಹರಿಸಿದೆ ಕೃಷ್ಣಾ....

ಯಾರಿದ್ದರೂ ಭವ ಘೋರ...
ದುರಿತ ಯಮ ಬಾಧೆಗಳ ತಪ್ಪಿಸುವರಿಲ್ಲ
ಶ್ರೀ ರಮಣನೆ ಭೀಮೇಶ ಕೃಷ್ಣನೆಂದೂ
ಸಾರುವರಿಗೆ ಕರುಣೆ ವಾರಿಧಿ ಹರಿಯೇ....
******

No comments:

Post a Comment