Friday 27 December 2019

ಮರೆಯದೆ ಸಲಹೆನ್ನನು ಯಾದವಗಿರಿದೊರೆ ankita bheemesha krishna MAREYADE SALAHENNANU YAADAVA GIRIDORE



by ಹರಪನಹಳ್ಳಿಭೀಮವ್ವ

ಮರೆಯದೆ ಸಲಹೆನ್ನನು ಯಾದವಗಿರಿ-
ದೊರೆ ಮಂಗರಾಯ ನೀನು
ಸರ್ವಜೀವೋತ್ತಮನೆ ನಿನ್ನನು
ಮರೆಯಹೊಕ್ಕೆನು ಮಾರುತಾತ್ಮಜ
ಕರೆದು ಭಕÀುತರಿಗ್ವರವ ನೀಡುವೊ
ಭಾರತೀಶ ಪ

ಸೀತಾವಲ್ಲಭ ರಾಮರ ಪಾದಾಂಬುಜ
ದೂತನೆಂದೆನಿಸಿದೆಯೊ
ಮಾತೆಗಿಟ್ಟ ಮುದ್ರಿಕೆಯನು
ಘಾತಕ ರಾವಣನ ಪುರಕೆ
ಕಾರ್ತೀಕದುತ್ಸವ ಮಾಡಿ ಮಂಗ-
ಳಾರ್ತಿ ಬೆಳಗಿದೆ ಬಾಲದಿಂದ 1

ಬಕ ಹಿಡಿಂಬಕ ಕೀಚಕ ಕಿಮ್ಮೀರ ಮಾಗಧ
ಮುಖ್ಯ ಪ್ರಮುಖರನು
ಸಕಲ ಅನುಜರ ಸಹಿತ ದುರ್ಯೋಧನನ
ಪ್ರಾಣವ ಸೆಳೆದÀು ಬ್ಯಾಗನೆ
ನಕುಲ ಧರ್ಮಜನಾ ಸಾದೇವ ದ್ರೌಪದಿಗೆ
ಸುಖ ಸಂತೋಷ ನೀಡಿದೆ 2

ಮಧ್ಯಗೇಹರಲ್ಲಿ ಜನಿಸಿ ಸುಜನರಿಗೆ
ಶುದ್ಧಶಾಸ್ತ್ರವ ಬೋಧಿಸಿ
ಗೆದÀ್ದು ಮಾಯಾವಾದಿಗಳ ವಾದಪ್ರ-
ಸಿದ್ಧನೆನಿಸಿದೆ ಮಧ್ವಮುನಿ
ಮುದ್ದು ಭೀಮೇಶಕೃಷ್ಣನ ಪ್ರ-
ಸಿದ್ಧಿ ಮಾಡಿದೆ ಪರಮ ಗುರುವೆ 3
*******

No comments:

Post a Comment