by ಪ್ರಸನ್ನವೆಂಕಟದಾಸರು
ಶ್ರೀವಧೂಧವಗೆ ನೈವೇದ್ಯ ಕೊಡುವೆ ಸತತ l
ಭಾವಶುದ್ಧಿಯಲಿ ಮನೋವಾಕ್ಕಾಯದಿಂ ll ಪ ll
ಪ್ರಥಮಾನ್ನ ಶ್ರೀಹರಿಯ ಭಕ್ತಿ ಕಾಮನ ದೀಕ್ಷೆ
ದ್ವಿತೀಯಾನ್ನ ಶ್ರೀಹರಿಯ ಸೇವಾಸಂಕಲ್ಪವು l
ತೃತೀಯಾನ್ನ ಶ್ರೀಹರಿಯ ಮಹಿಮಾತಿಶಯ ಜ್ಞಾನ
ಚತುರ್ಥಾನ್ನ ಹರಿಗುಣಜ್ಞತೆಯಲಾಸಕ್ತಿ ll 1 ll
ಐದನೇ ಅನ್ನ ಹರಿ ಸೇವೆಯಲಿ ಧೈರ್ಯ ಮತ್ತಾದ-
ರದ ಭಗವದ್ಧರ್ಮ ಆರನೇಯನ್ನ l
ಮಾಧವನ ಗುಣ ವಿವೇಕದಿ ತ್ಯಾಗ ಮೃಷ್ಟಾನ್ನ ll 2 ll
ಹೀಗೆ ಮನೋರೂಪನ್ನ ಸರ್ವೇಷ ವಾಕ್ಯದಿ ಹ-
ರಿ ಗುಣಔಘಗಳ ಕವನ ನವಮಾನ್ನದಿಂದ l
ಈ ಗೇಹ ದೇಹ ಪ್ರಾಣಾರ್ಪಣೆಯಲಿ ಉದಾರ
ನಾಗುವದೆ ಪ್ರಸನ್ವೆಂಕಟಕೃಷ್ಣಗೆ ದಶಾನ್ನ ll 3 ll
- ಶ್ರೀಪ್ರಸನ್ನವೆಂಕಟದಾಸರು
ಇಲ್ಲಿ ದಾಸರು ಅದ್ಭುತವಾದ ಕಲ್ಪನೆಯಿಂದ ವಿಜೃಂಭಿಸಿರುವರು. ಮನೋವಾಕ್ಕಾಯಗಳಿಂದ ಭಗವಂತನಿಗೆ ಅರ್ಪಿಸುವ ಅನ್ನರೂಪದ ನೈವೇದ್ಯ ಇದಾಗಿದೆ. ಭಗವಂತನಿಂದಲೇ ದತ್ತವಾದ ಸಕಲವನ್ನೂ ಅವನಿಗೇ ಅನುಸಂಧಾನ ಪೂರ್ವಕದಿ ಅರ್ಪಿಸುವುದು ಶ್ರೀಹರಿಗೆ ಅತ್ಯಂತ ಪ್ರಿಯಕರವಾದದ್ದೆಂದು ಅರಿತ ದಾಸರು, ಇಲ್ಲಿ ವೈಷ್ಣವ ದೀಕ್ಷೆಯನ್ನು ಪ್ರತಿಪಾದಿಸಿರುವರು. ಅನ್ನನಾಮಕ ಭಗವಂತ ಸರ್ವವ್ಯಾಪ್ತನಾಗಿ ಸರ್ವನಿಯಾಮಕನಾಗಿರುವ. ಎಲ್ಲರ ಬಿಂಬ ಮೂರುತಿಯಾದ ಶ್ರೀಹರಿಯಲ್ಲಿ ನಿಜಾರ್ಥದಲ್ಲಿ ಅರ್ಪಿಸುವವರು ದೇವತೆಗಳೇ ಆದರೂ ಯಥಾಯೋಗ್ಯವಾಗಿ ತಿಳಿದು ಮಾಡುವ ಸ್ಮರಣೆಗೂ ಶ್ರೀಹರಿ ಫಲ ನೀಡುವ. ಅನ್ನಾದಿ ಪದಾರ್ಥಗಳಲ್ಲಿಯ ಭಗವದ್ರೂಪಗಳು ಸಮರ್ಪಿಸುವವನ ಬಿಂಬಮೂರ್ತಿ ಹಾಗೂ ಪೂಜೆಗೊಂಡ ಪ್ರತಿಮಾದಿಗಳ ಭಗವದ್ರೂಪದಲ್ಲಿ ಅಭೇದ ಚಿಂತನೆಯೇ ನಿಜಪೂಜೆ, ನೈವೇದ್ಯವೆನಿಸಿದೆ.
***
ಪ್ರಥಮಾನ್ನ ಶ್ರೀಹರಿಯ ಭಕ್ತಿ ಕಾಮನ ದೀಕ್ಷೆದ್ವಿತೀಯಾನ್ನ ಶ್ರೀಹರಿಯ ಸೇವಾಸಂಕಲ್ಪವುತೃತೀಯಾನ್ನ ಶ್ರೀಹರಿಯ ಮಹಿಮಾತಿಶಯಜ್ಞಾನಚತುರ್ಥಾನ್ನ ಹರಿಗುಣಜÕತೆಯಲಾಸ್ತಿಕ್ಯ 1
ಐದನೇ ಅನ್ನ ಹರಿಸೇವೆಯಲಿ ಧೈರ್ಯ ಮತ್ತಾದರದ ಭಗವದ್ಧರ್ಮ ಆರನೇ ಅನ್ನಮಾಧವನ ಗುಣವಿವೇಕದಿ ತಿಳಿವುದೇಳನೇಓದನವು ಅನ್ಯಧರ್ಮತ್ಯಾಗಮೃಷ್ಟಾನ್ನ2
ಹೀಗೆ ಮನೋರೂಪನ್ನ ಸರ್ವೇಷು ವಾಕ್ಯದಿ ಹರಿಗುಣೌಘಗಳ ಕವನ ನವಮಾನ್ನದಿಂದಈಗೇಹದೇಹ ಪ್ರಾಣಾರ್ಪಣೆಯಲಿ ಉದಾರನಾಗುವದೆ ಪ್ರಸನ್ವೆಂಕಟಕೃಷ್ಣಗೆ ದಶಾನ್ನ 3
******
No comments:
Post a Comment