by ಪ್ರಾಣೇಶದಾಸರು
ಧೊರೆತನ ಮಾಡುವರೀ ಪರಿಯಾಗಲು
ತರವೇ ರುಕ್ಮಿಣೀಪತಿ ಕೇಳು ll ಪ ll
ಬಲುಬಲು ಋಷಿಗಳು ತಪವನೆ ಮಾಡಿ ನಿನ್ನ l
ನಿಲುವಗಾಣದೆ ಬಳಲುವರು ll
ಘಳಿಗೆ ಬೇಸರದಲೆ ಊಳಿಗದವನಂತೆ l
ಬಲಿಯ ಬಾಗಿಲು ಕಾಯ್ವರೇ ll 1 ll
ಜಲಜಸಂಭವ ಈಶೇಂದ್ರಾದಿ ದೇವತೆಗಳು l
ಬಿಡದೆ ನಿನ್ನ ವಂದಿಸುತಿರಲು l
ಬಡವನಂದದಿ ಕರೆದಾಗಲೆ ತಡೆಯದೆ l
ನಡೆಸುವರೆ ಪಾರ್ಥನ ರಥವ ll 2 ll
ಸಚ್ಚಿದಾನಂದ ನಿತ್ಯತೃಪ್ತ ಪೂರ್ಣಕಾಮನೆಂದು l
ಹೆಚ್ಚಾಗಿ ವೇದ ಕೂಗುತಿರಲು ll
ಹುಚ್ಚು ಪ್ರಾಣೇಶವಿಟ್ಠಲನಯ್ಯನೆ ಶಬರಿಯ l
ಉಚ್ಚಿಷ್ಠ ಹಣ್ಣ ಮೆಲ್ಲುವರೆ ll 3 ll
***
ಬಲು ಬಲು ಋಷಿಗಳು ತಪವನೆ ಮಾಡಿ ನಿನ್ನ |ನಿಲುವಗಾಣದೆ ಬಳಲುವರು ||ಘಳಿಗೆ ಬೇಸರದಲೆ ಊಳಿಗದವನಂತೆ |ಬಲಿಯ ಬಾಗಿಲು ಕಾಯ್ವರೇ 1
ಜಲಜ ಸಂಭವ ಈಶೇಂದ್ರಾದಿ ದೇವತೆಗಳು |ಬಿಡದೆ ನಿನ್ನ ವಂದಿಸುತಿರಲು |ಬಡವನಂದದಿ ಕರೆದಾಗಲೆ ತಡೆಯದೆ |ನಡಿಸುವರೆ ಪಾರ್ಥನ ರಥವ 2
ಸಚ್ಚಿದಾನಂದನಿತ್ಯತೃಪ್ತ ಪೂರ್ಣ ಕಾಮನೆಂದು |ಹೆಚ್ಚಾಗಿ ವೇದ ಕೂಗುತಿರಲು ||ಹುಚ್ಚು ಪ್ರಾಣೇಶ ವಿಠ್ಠಲನಯ್ಯನೆ ಶಬರಿಯ |ಉಚ್ಚಿಷ್ಠ ಹಣ್ಣ ಮೆಲ್ಲುವರೆ 3
*******
No comments:
Post a Comment