Friday 27 December 2019

ತಂಗಿ ನೀ ಕೇಳಿದ್ಯಾ ರಾಘವೇಂದ್ರಾ ankita gurupranesha vittala

ಶ್ರೀ ರಾಘವೇಂದ್ರಸ್ವಾಮಿಗಳ ಸ್ತೋತ್ರ

ರಾಗ : ಹಂಸಾನಂದೀ   ತಾಳ : ಆದಿ
 
ತಂಗಿ ಕೇಳಿದ್ಯಾ ರಾಘವೇಂದ್ರಾ ।
ಘಂಗಳು ಕಳೆದುಸುಖಂಗಳ 
ಕೊಡುವದು ।। ಪಲ್ಲವಿ ।।

ಶ್ರೀ ಪೂರ್ಣಬೋಧರ । ಮ ।
ತಾಪಯೋಬ್ಧಿಗೆ ಚಂದ್ರ ।
ತಾಪಸೋತ್ತಮರ । ದಿ ।
ವ್ಯಾಪಾರ ಮಹಿಮೆಯ ।। ಚರಣ ।।

ಅಂಗ ಹೀನರಿಗೆ । ದಿ ।
ವ್ಯಾಂಗ ಕೊಟ್ಟರೆಂದು ।
ಸಂಗೀತ ಮುಖದಿ । ಜ ।
ನಂಗಳು ಪಾಡುವದು ।। ಚರಣ ।।
ಕಿವಿಯಿಲ್ಲದವರಿಗೆ ।
ತವಕಾದಿ ಕೊಟ್ಟರೆಂದು ।
ಸುವಿವೇಕ ಮನದಿಂದ ।
ಕವಿ ಜನ ಪಾಡುವದು ।। ಚರಣ ।।

ವಂಧ್ಯಾ ಸ್ತ್ರೀಯರು ।
ಬಂದು ನಿಂದು ಆರಾಧಿಸೆ ।
ಸಂದೇಹವಿಲ್ಲ ಬಹು ।
ಮಂದಿ ಮಕ್ಕಳ ಕೊಟ್ಟ ।। ಚರಣ ।।

ಗುರು ಪ್ರಾಣೇಶ ವಿಠಲಾ ।
ಸಾರುವ ಕಾಮಿತಾರ್ಥವಾ ।
ಗುರು ರಾಘವೇಂದ್ರರಲ್ಲಿ ।
ನಿರುತದಿ ಕೊಡಿಸುವ ।। ಚರಣ ।।
******

cತಂಗಿ ನೀ ಕೇಳಿದ್ಯಾ ರಾಘವೇಂದ್ರಾ-
ಘಂಗಳ ಕಳೆದು ಸುಖಂಗಳ ಕೊಡುವುದು
ತಂಗಿ ನೀ ಕೇಳಿದ್ಯಾ                || ಪ ||

ಶ್ರೀಪೂರ್ಣಭೋಧರ ಮತಪಯೋಬ್ಧಿಗೆ ಚಂದ್ರ
ತಾಪಸೋತ್ತಮರ ದಿವ್ಯಾಪಾರ ಮಹಿಮೆಯ        || ೧ ||

ಅಂಗಹೀನರಿಗೆ ದಿವ್ಯಾಂಗ ಕೊಟ್ಟರೆಂದು
ಸಂಗೀತಮುಖದಿ ಜನಂಗಳು ಪಾಡುವುದು            || ೨ ||

ಕಿವಿಯಿಲ್ಲದವರಿಗೆ ತವಕದಿ ಕೊಟ್ಟರೆಂದು
ಸುವಿವೇಕ ಮನದಿಂದ ಕವಿಜನ ಪಾಡುವುದು        || ೩ ||

ಮಧ್ಯಸ್ತ್ರೀಯರು ಬಂದು ನಿಂದು ಆರಾಧಿಸೆ
ಸಂದೇಹವಿಲ್ಲ ಬಹುಮಂದಿಮಕ್ಕಳ ಕೊಟ್ಟ            || ೪ ||

ಗುರುಪ್ರಾಣೇಶವಿಠ್ಠಲ ಸರ್ವಕಾಮಿತಾರ್ಥವ
ಗುರುರಾಘವೇಂದ್ರರಲ್ಲಿ ನಿಂತು ನಿರುತದಿ ಕೊಡಿಸುವ        || ೫ ||
****

ಶ್ರೀ ರಾಘವೇಂದ್ರಸ್ವಾಮಿಗಳ ಸ್ತೋತ್ರ
ತಂಗಿನೀ ಕೇಳಿದ್ಯಾ ರಾಘವೇಂದ್ರಾ | ಘಂಗಳ ಕಳದು ಸುಖಂಗಳ ಕೊಡುವದು || ತಂಗಿ ನೀ ಕೇಳಿದ್ಯಾ ಪ
ಶ್ರೀ ಪೂರ್ಣಬೋಧರ ಮತಾಪಯೋಬ್ದಿಗೆ ಚಂದ್ರ |ತಾಪಸೋತ್ತಮರ ದಿವ್ಯಾಪಾರ ಮಹಿಮೆಯ 1
ಅಂಗಹೀನರಿಗೆ ದಿವ್ಯಾಂಗ ಕೊಟ್ಟರೆಂದು |ಸಂಗೀತ ಮುಖದಿ ಜನಂಗಳು ಪಾಡುವದು 2
ಕಿವಿಯಿಲ್ಲದವರಿಗೆ ತವಕಾದಿ ಕೊಟ್ಟರೆಂದು |ಸುವಿವೇಕ ಮನದಿಂದ ಕವಿಜನ ಪಾಡುವದು 3
ವಂಧ್ಯಾಸ್ತ್ರೀಯರು ಬಂದು ನಿಂದು ಆರಾಧಿಸೆ |ಸಂದೇಹವಿಲ್ಲ ಬಹು ಮಂದಿ ಮಕ್ಕಳ ಕೊಟ್ಟ 4
ಗುರು ಪ್ರಾಣೇಶ ವಿಠಲಾ ಸರುವ ಕಾಮಿತಾರ್ಥವಾ |ಗುರು ರಾಘವೇಂದ್ರರಲ್ಲಿ ನಿರುತದಿ ಕೊಡಿಸುವ 5
****

No comments:

Post a Comment