Thursday 7 October 2021

ಮರುತಗಳ ನಾಮವನು ಉದಯದಲಿಯೆದ್ದು ankita vijaya vittala MARUTAGALA NAAMAVANU UDAYADALI YEDDU

 ರಾಗ ಭೂಪಾಳಿ  ಖಂಡಛಾಪುತಾಳ 
Audio by Mrs. Nandini Sripad


ಶ್ರೀವಿಜಯದಾಸಾರ್ಯ ವಿರಚಿತ ಏಕೋನಪಂಚಾಶನ್ಮರುದ್ಗಣದ ತಾರತಮ್ಯ ಪದ 


ಮರುತಗಳ ನಾಮವನು ಉದಯದಲಿ ಯೆದ್ದು ।
ಸ್ಮರಿಸಿದವರ ದುರಿತ ಪರಿಹಾರವಾಗುವದು ॥ ಪ ॥ 

ಪ್ರಾಣ ಅಪಾನನು ವ್ಯಾನ ಉದಾನ ಸ - ।
ಮಾನ ಮತ್ತೆ ನಾಗ ಕೃಕಲ ಕೂರ್ಮ ॥
ಏನೆಂಬೆ ದೇವದತ್ತನು ಧನಂಜಯ ಪ್ರವಾ - ।
ಹನನು ವಿವಹ ಸಂಯಾ ಸಂವಾಹಾನೆಂದು ॥ 1 ॥ 

ಶೀಲ ಪರಾವಹ ಉದ್ವಹಾವಹ ಶಂಕು ।
ಕಾಲ ಶ್ವಾಸ ಅನಳ ಪ್ರತಿಯೂ ॥
ಬಾಲಕುಮುದಾ ಕಾಂತಾ ಶುಚಿ ಅಜಿತ ಗುರು ।
ಮೇಲಾಗಿ ಸಂಸಾ ಪ್ರವರ್ತಕಾ ಕಿಲ ರನ್ನ ॥ 2 ॥ 

ತರುವಾಯ ಅಜಿತ ಸಂಯನು ಕಪಿ ಜಡ ದೇವ ।
ಮರಳೆ ಮಂಡುಕ ಸತತ ಸಿದ್ಧ ರಕ್ತಾ ॥
ಸರಸ ಕೃಷ್ಣ ಪಿಕ ಶುಕ ಯತಿ ಭೀಮ ಹನು ।
ಮರಿಯದಲೆ ಪಿಂಗ ಅಹಂಪ್ರಾಣ ಕಂಪನಾ ॥ 3 ॥ 

ಇವರ ಸಹಿತವಾಗಿ ಸೂತ್ರನಾಮಕ ಮೂಲ ।
ಪವಮಾನನೊಡನೆ ಗಣನೆಯನು ಮಾಡಿ ॥
ತವಕದಿಂದಲಿ ತಾರತಮ್ಯವನೆ ತಿಳಿದು ।
ಶ್ರವಣದಲಿ ಕೇಳಿ ಸಾಕಲ್ಯವಾಗಿ ನಿತ್ಯ ॥ 4 ॥ 

ಇದನೆ ಪಠಿಸಿದರೆ ಜನ್ಮ ಜನುಮದಾ ಪಾಪ ।
ಉದರಿ ಪೋಗುವದು ಲೇಶ ವುಳಿಯದೆ ॥
ಪದುಮನಾಭಾ ನಮ್ಮ ವಿಜಯವಿಟ್ಠಲರೇಯನ ।
ಪದವ ಭಜಿಸುವದಕ್ಕೆ ಜ್ಞಾನವೆ ಪುಟ್ಟುವದು ॥ 5 ॥
***

ವಿಜಯದಾಸ - ಶತಸ್ಥಮರುತುಗಳು
ಮರುತಗಳ ನಾಮವನು ಉದಯದಲಿಯೆದ್ದು |
ದುರಿತ ಪರಿಹಾರವಾಗುವುದು ಪ

ಪ್ರಾಣ ಅಪಾನನು ವ್ಯಾನ ಉದಾನ ಸ |
ಮಾನ ಮತ್ತೆ ನಾಗ ಕೈಕಲಕೂರ್ಮ ||
ಏನೆಂಬೆ ದೇವದತ್ತನು ಧನಂಜಯ ಪ್ರವಾ |
ಹನನು ವಿವಹ ಸಂಯಾ ಸಂವಾಹನೆಂದು 1

ಶೀಲ ಪರಾವಹ ಉದ್ವಹ ವಾಹಶಂಕು |
ಕಾಲ ಶ್ವಾಸ ಅನಳ ಅನಿಲಪ್ರತಿಯೂ ||
ಬಾಲ ಕುಮುದಾಕಾಂತ ಶುಚಿಶ್ವೇತ ಅಜಿತಗುರು |
ಮೇಲಾಗಿ ಸಂಸಾರ ಪ್ರವರ್ತಕ ಕಿಲರನ್ನ 2

ತರುವಾಯ ಅಜಿತ ಸಂಯನು ಕಪಿ ಜಡದೇವ |
ಮರಳೆ ಮಂಡುಕ ಸತತ ಸಿದ್ಧ ರಕ್ತಾ ||
ಸರಸ ಕೃಷ್ಣ ಪಿಕಶುಕ ಯತಿ ಭೀಮಹನು |
ಮರಿಯದಲೆ ಪಿಂಗ ಅಹಂಪ್ರಾಣ ಕಂಪನ 3

ಇವರ ಸಹಿತವಾಗಿ ಸೂತ್ರನಾಮಕ ಮೂಲ |
ಪವಮಾನನೊಡನೆ ಗಣಣೆಯನು ಮಾಡಿ ||
ತವಕದಿಂದಲಿ ತಾರತಮ್ಯವನೆ ತಿಳಿದು |
ನಿತ್ಯ 4

ಇವನೆ ಪಠಿಸಿದರೆ ಜನ್ಮ ಜನುಮದ ಪಾಪ |
ಉದರಿ ಪೋಗುವದು ಲೇಶ ಉಳಿಯದೆ ||
ಪಮಮನಾಭ ನಮ್ಮ ವಿಜಯವಿಠ್ಠಲರೇಯನ |
ಪದವ ಭಜಿಸುವದಕ್ಕೆ ಙÁ್ಞನವೇ ಪುಟ್ಟವದು 5
***

No comments:

Post a Comment