Friday, 24 December 2021

ಸಂಘದ ಸಸಿಯಿದು ಹೆಮ್ಮರವಾಗಿದೆ others SANGHADA SASIYIDU HEMMARAVAAGIDE rss

ಪದ್ಮನಾಭजी, ಶಾರೀರಿಕ್ ಪ್ರಮುಖ್, ಲಕ್ಷ್ಮೀಪುರಂ ನಗರ, ಮೈಸೂರು
learn from this audio इस ऑडियो से सीखें ಈ ಆಡಿಯೋ ಇಂದ ಕಲಿಯಿರಿ 👆👆  





RSS song

ಸಂಘದ ಸಸಿಯಿದು ಹೆಮ್ಮರವಾಗಿದೆ

ಕೇಶವ ನೀನೇ ನೋಡಲು ಬಾ

ಟೊಂಗೆ ಟೊಂಗೆಯಲು ಕಂಗೊಳಿಸುತಲಿಹ

ಅಮೃತ ಫಲಗಳ ಸವಿಯಲು ಬಾ ||ಪ||


ಮೋಹಿತೆವಾಡದ ಅಂಗಳದಲ್ಲಿ ನೀನೇ ನೆಟ್ಟಿಹ ಸಸಿಯಂದು

ಬೆಳೆಯಿತು ಭರದಲಿ ಬೆಳೆಯುತಲಿಹುದು ಅಗಣಿತ ಶಾಖೆಗಳೈತಂದು

ಬೆಂಗಾಡನು ರಂಗೇರಿಸಿ ಬೀಸಿತು ನವಚೈತ್ಯನ್ಯದ ತಂಗಾಳಿ

ದೈನ್ಯ ನಿರಾಶೆಯ ಕಾಲವು ಕಳೆಯಿತು ಮೈಮರೆವಿನ ಪೊರೆಯನು ಸೀಳಿ ||೧||


ಅನುದಿನ ನೀರನು ಉಣಿಸುತ ನೀನು, ಜತನದಿ ಪೋಷಣೆ ಮಾಡಿರುವೆ

ದೂಷಣೆ ಪ್ರತಿರೋಧದ ಝಳದಿಂದ ಛಲದಿಂದಲಿ ಕಾಪಾಡಿರುವೆ

ಕಿರುಸಸಿಯಿದು ತರುವಾಗುತಲಿಂದು ತರುಣಾವಸ್ಥೆಯ ತಲುಪಿಹುದು

ಸಾಸಿರ ಸಾಸಿರ ಶಾಖೆಯನಾಂತು ನಾಡಿಗೆ ನೆರಳೀಯುತಲಿಹುದು ||೨||


ಎಲೆಗಳ ಮರೆಯಲಿ ನಸುನಗುತಿರುವ, ಪುಷ್ಪಗಳೆನಿತೋ ಕೇಶವನೆ

ಆ ಸುಮರಾಶಿಯು ಸೂಸಿಹ ಸೌರಭ, ಆವರಿಸಿಹುದೀ ದೇಶವನೇ

ಒಡಲೊಳು ಅಡಗಿದೆ ನಾಡಿಗೆ ನೀಡಲು ತಾಯ್ನೆಲದೊಲವಿನ ಮಕರಂದ

ಕಸವನು ರಸಮಯಗೊಳಿಸುತ ಸಾಗಿದೆ ಭಾರತದೇಶದ ಯುವವೃಂದ ||೩||

***

saMGada sasiyidu hemmaravAgide

kESava nInE nODalu bA

ToMge ToMgeyalu kaMgoLisutaliha

amRuta PalagaLa saviyalu bA ||pa||


mOhitevADada aMgaLadalli nInE neTTiha sasiyaMdu

beLeyitu Baradali beLeyutalihudu agaNita SAKegaLaitaMdu

beMgADanu raMgErisi bIsitu navacaityanyada taMgALi

dainya nirASeya kAlavu kaLeyitu maimarevina poreyanu sILi ||1||


anudina nIranu uNisuta nInu, jatanadi pOShaNe mADiruve

dUShaNe pratirOdhada JaLadiMda CaladiMdali kApADiruve

kirusasiyidu taruvAgutaliMdu taruNAvastheya talupihudu

sAsira sAsira SAKeyanAMtu nADige neraLIyutalihudu ||2||


elegaLa mareyali nasunagutiruva, puShpagaLenitO kESavane

A sumarASiyu sUsiha souraBa, AvarisihudI dESavanE

oDaloLu aDagide nADige nIDalu tAyneladolavina makaraMda

kasavanu rasamayagoLisuta sAgide BAratadESada yuvavRuMda ||3||

***

ಸಂಘದ ಸಸಿಯಿದು ಹೆಮ್ಮರವಾಗಿದೆ

ಕೇಶವ ನೀನೇ ನೋಡಲು ಬಾ

ಟೊಂಗೆ ಟೊಂಗೆಯಲು ಕಂಗೊಳಿಸುತಲಿಹ
ಅಮೃತ ಫಲಗಳ ಸವಿಯಲು ಬಾ ||ಪ||

ಮೋಹಿತೆವಾಡದ ಅಂಗಳದಲ್ಲಿ ನೀನೇ ನೆಟ್ಟಿಹ ಸಸಿಯಂದು
ಬೆಳೆಯಿತು ಭರದಲಿ ಬೆಳೆಯುತಲಿಹುದು ಅಗಣಿತ ಶಾಖೆಗಳೈತಂದು
ಬೆಂಗಾಡನು ರಂಗೇರಿಸಿ ಬೀಸಿತು ನವಚೈತ್ಯನ್ಯದ ತಂಗಾಳಿ
ದೈನ್ಯ ನಿರಾಶೆಯ ಕಾಲವು ಕಳೆಯಿತು ಮೈಮರೆವಿನ ಪೊರೆಯನು ಸೀಳಿ ||೧||

ಅನುದಿನ ನೀರನು ಉಣಿಸುತ ನೀನು, ಜತನದಿ ಪೋಷಣೆ ಮಾಡಿರುವೆ
ದೂಷಣೆ ಪ್ರತಿರೋಧದ ಝಳದಿಂದ ಛಲದಿಂದಲಿ ಕಾಪಾಡಿರುವೆ
ಕಿರುಸಸಿಯಿದು ತರುವಾಗುತಲಿಂದು ತರುಣಾವಸ್ಥೆಯ ತಲುಪಿಹುದು
ಸಾಸಿರ ಸಾಸಿರ ಶಾಖೆಯನಾಂತು ನಾಡಿಗೆ ನೆರಳೀಯುತಲಿಹುದು ||೨||

ಎಲೆಗಳ ಮರೆಯಲಿ ನಸುನಗುತಿರುವ, ಪುಷ್ಪಗಳೆನಿತೋ ಕೇಶವನೆ
ಆ ಸುಮರಾಶಿಯು ಸೂಸಿಹ ಸೌರಭ, ಆವರಿಸಿಹುದೀ ದೇಶವನೇ
ಒಡಲೊಳು ಅಡಗಿದೆ ನಾಡಿಗೆ ನೀಡಲು ತಾಯ್ನೆಲದೊಲವಿನ ಮಕರಂದ
ಕಸವನು ರಸಮಯಗೊಳಿಸುತ ಸಾಗಿದೆ ಭಾರತದೇಶದ ಯುವವೃಂದ ||೩||
***

No comments:

Post a Comment